ನವದೆಹಲಿ: ಕೇಂದ್ರ ಸರ್ಕಾರ ಚಾಲಿತ ಎಲ್ಲಾ ಆಸ್ಪತ್ರೆ ಮತ್ತು ಕೇಂದ್ರದ ಆರೋಗ್ಯ ಯೋಜನೆಗೆ ಒಳಪಡುವ ಕೇಂದ್ರಗಳ ವೈದ್ಯರು ಜನೌಷಧ ವಿಭಾಗಗಳಲ್ಲಿ ಲಭ್ಯವಿರುವ ಔಷಧಗಳನ್ನೇ ಬರೆದುಕೊಡಬೇಕು. ಆದೇಶವನ್ನು ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ವೈದ್ಯರು ಕೆಲವೊಮ್ಮೆ ಬ್ರಾಂಡೆಡ್ ಔಷಧಗಳನ್ನೇ ಬರೆದುಕೊಡುತ್ತಿರುವುದು ಕಂಡುಬಂದಿದೆ. ಎಲ್ಲಾ ಸಂಸ್ಥೆಗಳ ಮುಖ್ಯಸ್ಥರೂ ಇದನ್ನು ಗಮನಿಸಿದ್ದಾರೆ. ಹೀಗಾಗಿ ಇನ್ಮುಂದೆ ಕಡ್ಡಾಯವಾಗಿ ಜನೌಷಧವನ್ನೇ ಬರೆದುಕೊಡಲು ಸೂಚಿಸಲಾಗಿದೆ ಎಂದು ಆರೋಗ್ಯ ಸೇವೆಯ ಮಹಾ ನಿರ್ದೇಶಕ ಡಾ.ಅತುಲ್ ಗೋಯಲ್ ತಿಳಿಸಿದ್ದಾರೆ.