<p><strong>ಲಖನೌ, ಉತ್ತರಪ್ರದೇಶ:</strong> ಇಲ್ಲಿನ ಮಥುರಾ ಜಿಲ್ಲೆಯ ವೃಂದಾವನದಲ್ಲಿ ‘ಬಾಂಕೆ ಬಿಹಾರಿ’ ದೇವಾಲಯ ಕಾರಿಡಾರ್ ನಿರ್ಮಾಣ ಖಂಡಿಸಿ ನೂರಾರು ವ್ಯಾಪಾರಿಗಳು ಹಾಗೂ ಅರ್ಚಕರು ಬೀದಿಗಿಳಿದು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧ ಪ್ರತಿಭಟನೆ ನಡೆಸಿದರು.</p>.<p>ದೇವಾಲಯದ ಕಾರಿಡಾರ್ ನಿರ್ಮಾಣ ಕೈಬಿಡಬೇಕು, ವೃಂದಾವನ ಟ್ರಸ್ಟ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಈ ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಿಲ್ಲ ಎಂದು ಆರೋಪಿಸಿ ಹೇಮಾ ಮಾಲಿನಿ ವಿರುದ್ಧ ಕಿಡಿಕಾರಿದರು.</p>.<p>ಭಗವಾನ್ ಶ್ರೀ ಕೃಷ್ಣನ ಅವಧಿಯಿಂದಲೂ ಇರುವ ‘ಕುಂಜ್ ಗಲಿ’ಗಳನ್ನು ನಾಶಪಡಿಸುವುದಿಲ್ಲ ಎಂದು ರಾಜ್ಯ ಸರ್ಕಾರವು ಲಿಖಿತ ಭರವಸೆ ನೀಡಬೇಕು ಎಂದು ಈ ವೇಳೆ ಆಗ್ರಹಿಸಿದರು. ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷೆ ಮಧು ಶರ್ಮಾ ಕೂಡ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.</p>.<p><strong>ಏಕೆ ನಿರ್ಮಾಣ?</strong></p>.<p>ದೇವಾಲಯಕ್ಕೆ ಪ್ರತಿ ವರ್ಷ ಕೋಟ್ಯಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿಗೆ ತೆರಳುವ ಮಾರ್ಗವು ಇಕ್ಕಟ್ಟಾಗಿದ್ದು, ದೇವರ ದರ್ಶನ ಪಡೆಯುವುದು ಕಷ್ಟವಾಗಿದೆ. ಹಲವು ಸಲ ಭಕ್ತರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಹೀಗಾಗಿ, ಈಗಿನ ಮಾರ್ಗ ವಿಸ್ತರಿಸಿ, ಹೆಚ್ಚಿನ ಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ.</p>.<p>ಸ್ಥಳೀಯರಲ್ಲಿ ಒಡಕು: ಮನೆ, ಅಂಗಡಿ ಕಳೆದುಕೊಳ್ಳುವವರು ಆತಂಕದಲ್ಲಿದ್ದರೆ, ಸ್ಥಳೀಯರು ಕಾಮಗಾರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. </p>.<div><blockquote>ವೃಂದಾವನದ ಸಾಂಸ್ಕೃತಿಕ ಗುರುತನ್ನು ನಾಶಪಡಿಸಲು ರಾಜ್ಯ ಸರ್ಕಾರ ಹೊರಡಿದೆ. ಇದರ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಕಾಂಗ್ರೆಸ್ ಬೆಂಬಲಿಸಲಿದೆ.</blockquote><span class="attribution">ಅಜಯ್ ರಾಯ್, ಉತ್ತರಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ</span></div>.<p>‘ನಾವು ಕಾರಿಡಾರ್ ವಿರೋಧಿಸುತ್ತಿಲ್ಲ. ಆದರೆ ‘ಕುಂಜ್ ಗಲಿ’ಗಳನ್ನು (ಬಳ್ಳಿಗಳಿಂದ ಹರಡಿದ ಓಣಿ ರಸ್ತೆ) ಮುಟ್ಟಬಾರದು. ವೃಂದಾವನದಲ್ಲಿ ಇಂತಹ 150 ಕುಂಜ್ ಗಲಿಗಳಿದ್ದು, ಅವನ್ನು ನಾಶಪಡಿಸಿದರೆ ವೃಂದಾವನದ ಮೂಲ ಸ್ವರೂಪವೇ ಬದಲಾಗಲಿದೆ’ ಎಂದು ಸ್ಥಳೀಯ ನಿವಾಸಿ ಛಯಿಲ್ ಬಿಹಾರಿ ತಿಳಿಸಿದರು.</p>.<p>ಯೋಜನೆಯನ್ನು ವಿರೋಧಿಸಿ ಅರ್ಚಕರು ಹಾಗೂ ಸ್ಥಳೀಯ ಅಂಗಡಿ ಮಾಲೀಕರು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯವು ಅರ್ಜಿ ವಜಾಗೊಳಿಸಿದೆ. ₹500 ಕೋಟಿ ವೆಚ್ಚದಲ್ಲಿ ಜಾರಿಯಾಗಲಿರುವ ಈ ಯೋಜನೆಯಿಂದ ದೇವಾಲಯಕ್ಕೆ ಮೂರು ಭಾಗದಿಂದ ಪ್ರವೇಶಿಸಲು ಅವಕಾಶ ಕಲ್ಪಿಸಲಿದೆ. ವಾಹನ ನಿಲುಗಡೆ ಪ್ರದೇಶ, ಅಂಗಡಿ ಮಳಿಗೆ, ಇತರೆ ಸೌಕರ್ಯಗಳು ಹೊಂದಲಿದೆ.</p>.<p>ಮೂಲಗಳ ಪ್ರಕಾರ, ಕಾರಿಡಾರ್ ನಿರ್ಮಾಣಗೊಂಡರೆ 200 ಮನೆಗಳು, 100 ಅಂಗಡಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಹೊಸತಾಗಿ ಟ್ರಸ್ಟ್ ರಚನೆಯಾಗಿ, ದೇವಾಲಯವನ್ನು ತನ್ನ ವಶಕ್ಕೆ ಪಡೆಯಲಿದ್ದು, ಪಾರಂಪರಿಕವಾಗಿ ಕೆಲಸ ಮಾಡುತ್ತಿರುವ ಅರ್ಚಕರು ತಮ್ಮ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ, ಉತ್ತರಪ್ರದೇಶ:</strong> ಇಲ್ಲಿನ ಮಥುರಾ ಜಿಲ್ಲೆಯ ವೃಂದಾವನದಲ್ಲಿ ‘ಬಾಂಕೆ ಬಿಹಾರಿ’ ದೇವಾಲಯ ಕಾರಿಡಾರ್ ನಿರ್ಮಾಣ ಖಂಡಿಸಿ ನೂರಾರು ವ್ಯಾಪಾರಿಗಳು ಹಾಗೂ ಅರ್ಚಕರು ಬೀದಿಗಿಳಿದು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧ ಪ್ರತಿಭಟನೆ ನಡೆಸಿದರು.</p>.<p>ದೇವಾಲಯದ ಕಾರಿಡಾರ್ ನಿರ್ಮಾಣ ಕೈಬಿಡಬೇಕು, ವೃಂದಾವನ ಟ್ರಸ್ಟ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಈ ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಿಲ್ಲ ಎಂದು ಆರೋಪಿಸಿ ಹೇಮಾ ಮಾಲಿನಿ ವಿರುದ್ಧ ಕಿಡಿಕಾರಿದರು.</p>.<p>ಭಗವಾನ್ ಶ್ರೀ ಕೃಷ್ಣನ ಅವಧಿಯಿಂದಲೂ ಇರುವ ‘ಕುಂಜ್ ಗಲಿ’ಗಳನ್ನು ನಾಶಪಡಿಸುವುದಿಲ್ಲ ಎಂದು ರಾಜ್ಯ ಸರ್ಕಾರವು ಲಿಖಿತ ಭರವಸೆ ನೀಡಬೇಕು ಎಂದು ಈ ವೇಳೆ ಆಗ್ರಹಿಸಿದರು. ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷೆ ಮಧು ಶರ್ಮಾ ಕೂಡ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.</p>.<p><strong>ಏಕೆ ನಿರ್ಮಾಣ?</strong></p>.<p>ದೇವಾಲಯಕ್ಕೆ ಪ್ರತಿ ವರ್ಷ ಕೋಟ್ಯಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿಗೆ ತೆರಳುವ ಮಾರ್ಗವು ಇಕ್ಕಟ್ಟಾಗಿದ್ದು, ದೇವರ ದರ್ಶನ ಪಡೆಯುವುದು ಕಷ್ಟವಾಗಿದೆ. ಹಲವು ಸಲ ಭಕ್ತರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಹೀಗಾಗಿ, ಈಗಿನ ಮಾರ್ಗ ವಿಸ್ತರಿಸಿ, ಹೆಚ್ಚಿನ ಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ.</p>.<p>ಸ್ಥಳೀಯರಲ್ಲಿ ಒಡಕು: ಮನೆ, ಅಂಗಡಿ ಕಳೆದುಕೊಳ್ಳುವವರು ಆತಂಕದಲ್ಲಿದ್ದರೆ, ಸ್ಥಳೀಯರು ಕಾಮಗಾರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. </p>.<div><blockquote>ವೃಂದಾವನದ ಸಾಂಸ್ಕೃತಿಕ ಗುರುತನ್ನು ನಾಶಪಡಿಸಲು ರಾಜ್ಯ ಸರ್ಕಾರ ಹೊರಡಿದೆ. ಇದರ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಕಾಂಗ್ರೆಸ್ ಬೆಂಬಲಿಸಲಿದೆ.</blockquote><span class="attribution">ಅಜಯ್ ರಾಯ್, ಉತ್ತರಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ</span></div>.<p>‘ನಾವು ಕಾರಿಡಾರ್ ವಿರೋಧಿಸುತ್ತಿಲ್ಲ. ಆದರೆ ‘ಕುಂಜ್ ಗಲಿ’ಗಳನ್ನು (ಬಳ್ಳಿಗಳಿಂದ ಹರಡಿದ ಓಣಿ ರಸ್ತೆ) ಮುಟ್ಟಬಾರದು. ವೃಂದಾವನದಲ್ಲಿ ಇಂತಹ 150 ಕುಂಜ್ ಗಲಿಗಳಿದ್ದು, ಅವನ್ನು ನಾಶಪಡಿಸಿದರೆ ವೃಂದಾವನದ ಮೂಲ ಸ್ವರೂಪವೇ ಬದಲಾಗಲಿದೆ’ ಎಂದು ಸ್ಥಳೀಯ ನಿವಾಸಿ ಛಯಿಲ್ ಬಿಹಾರಿ ತಿಳಿಸಿದರು.</p>.<p>ಯೋಜನೆಯನ್ನು ವಿರೋಧಿಸಿ ಅರ್ಚಕರು ಹಾಗೂ ಸ್ಥಳೀಯ ಅಂಗಡಿ ಮಾಲೀಕರು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯವು ಅರ್ಜಿ ವಜಾಗೊಳಿಸಿದೆ. ₹500 ಕೋಟಿ ವೆಚ್ಚದಲ್ಲಿ ಜಾರಿಯಾಗಲಿರುವ ಈ ಯೋಜನೆಯಿಂದ ದೇವಾಲಯಕ್ಕೆ ಮೂರು ಭಾಗದಿಂದ ಪ್ರವೇಶಿಸಲು ಅವಕಾಶ ಕಲ್ಪಿಸಲಿದೆ. ವಾಹನ ನಿಲುಗಡೆ ಪ್ರದೇಶ, ಅಂಗಡಿ ಮಳಿಗೆ, ಇತರೆ ಸೌಕರ್ಯಗಳು ಹೊಂದಲಿದೆ.</p>.<p>ಮೂಲಗಳ ಪ್ರಕಾರ, ಕಾರಿಡಾರ್ ನಿರ್ಮಾಣಗೊಂಡರೆ 200 ಮನೆಗಳು, 100 ಅಂಗಡಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಹೊಸತಾಗಿ ಟ್ರಸ್ಟ್ ರಚನೆಯಾಗಿ, ದೇವಾಲಯವನ್ನು ತನ್ನ ವಶಕ್ಕೆ ಪಡೆಯಲಿದ್ದು, ಪಾರಂಪರಿಕವಾಗಿ ಕೆಲಸ ಮಾಡುತ್ತಿರುವ ಅರ್ಚಕರು ತಮ್ಮ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>