ಘಟನೆ ನಡೆಯುವ ಸಂದರ್ಭದಲ್ಲಿ ಅವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದರು.
‘ಮುಚ್ಚಿ ಹಾಕುವಂಥದ್ದು ಬಿಜೆಪಿ ಏನು ಮಾಡಿಲ್ಲ. ಯಾರಾದರೂ ನಮ್ಮ ಜತೆ ಸಂಬಂಧ ಕಡಿದುಕೊಂಡ ಬಳಿಕ ಆರೋಪ ಮಾಡುತ್ತಿದ್ದರೆ, ಜನ ಹಾಗೂ ಮಾಧ್ಯಮದವರು ಅದರ ಬಗ್ಗೆ ಯೋಚನೆ ಮಾಡಬೇಕು‘ ಎಂದು ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಅಮಿತ್ ಶಾ ಹೇಳಿದ್ದರು.
‘ಪ್ರಧಾನಮಂತ್ರಿ ಹುದ್ದೆಗೆ ರಾಜನಾಥ್ ಸಿಂಗ್ ಗಂಭೀರ ಅಭ್ಯರ್ಥಿ‘ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಲಿಕ್ ಅವರ ಹಣೆಬರಹದಲ್ಲಿ ಇದ್ದರೆ, ಒಂದು ದಿನ ಅಗಿಯೇ ಆಗುತ್ತಾರೆ‘ ಎಂದು ಹೇಳಿದ್ದಾರೆ.
ಅದಾನಿ ಪ್ರಕರಣದಲ್ಲಿ ಪ್ರಧಾನಿ ಮೋದಿಯವರ ಮೌನ್ಯ ಅವರಿಗೆ ಹಾನಿಯುಂಟು ಮಾಡಲಿದೆ ಎಂದಿರುವ ಅವರು, ಇದರ ಜತೆಗೆ ಪುಲ್ವಾಮ ದಾಳಿ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಬೇಕು ಎಂದು ಒತ್ತಾಯಿಸಿದರು.