<p><strong>ನವದೆಹಲಿ:</strong> ದೇಶದ ಕಾರಾಗೃಹಗಳಲ್ಲಿ ಕೈದಿಗಳನ್ನು ತೀವ್ರಗಾಮಿಗಳನ್ನಾಗಿ ಮಾಡುತ್ತಿರುವುದು ಗಂಭೀರ ಸವಾಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಜೊತೆಗೆ ಕಾನೂನು ಸುವ್ಯವಸ್ಥೆ ಹಾಗೂ ಆಂತರಿಕ ಭದ್ರತೆ ಖಾತ್ರಿಪಡಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.</p>.<p>ಈ ಕುರಿತು ಸಚಿವಾಲಯವು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದೆ.</p>.<p>‘ಜೈಲುಗಳಲ್ಲಿನ ಕೈದಿಗಳು ಸಮಾಜದಿಂದ ದೂರವಾಗಿರುತ್ತಾರೆ. ಅವರ ಚಲನವಲನಗಳ ಮೇಲೆ ಕಣ್ಣಿಡುವುದು ಅಗತ್ಯ. ಈ ವಿಚಾರದಲ್ಲಿ ತೋರುವ ನಿರ್ಲಕ್ಷ್ಯ ಭಾರಿ ಅಪಾಯಗಳಿಗೆ ದಾರಿ ಮಾಡಿಕೊಡಬಹುದು. ಹೀಗಾಗಿ, ಸೆರೆವಾಸದಲ್ಲಿರುವವರನ್ನು ಮೂಲಭೂತವಾದಿಗಳನ್ನಾಗಿ ಮಾಡುತ್ತಿರುವುದು ಅಪಾಯಕಾರಿ’ ಎಂದು ಸಚಿವಾಲಯ ಹೇಳಿದೆ.</p>.<h2>ಪತ್ರದಲ್ಲಿನ ಪ್ರಮುಖ ಅಂಶಗಳು</h2><ul><li><p>ಕೈದಿಗಳಲ್ಲಿ ಸಾಮಾನ್ಯವಾಗಿ ಪರಕೀಯ ಭಾವನೆ ಮನೆ ಮಾಡಿರುತ್ತದೆ. ಇದು ಅವರನ್ನು ಮೂಲಭೂತವಾದದ ಸಂಕಥನಗಳತ್ತ ಆಕರ್ಷಣೆಗೊಳ್ಳುವಂತೆ ಮಾಡುತ್ತದೆ. ಅವರಲ್ಲಿ ಹಿಂಸಾತ್ಮಕ ವರ್ತನೆ ಅಥವಾ ಸಮಾಜ ವಿರೋಧಿ ಪ್ರವೃತ್ತಿ ಬೆಳೆಯುವಂತೆ ಮಾಡುತ್ತದೆ</p></li><li><p>ಕೆಲ ಪ್ರಕರಣಗಳಲ್ಲಿ ಕೈದಿಗಳು ಇತರ ಕೈದಿಗಳ ಮೇಲೆ ಅಥವಾ ಜೈಲು ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದಕ್ಕೆ ಮೂಲಭೂತವಾದ ಪ್ರಚೋದನೆ ನೀಡಬಹುದು</p></li><li><p>ಕೈದಿಗಳನ್ನು ಮೂಲಭೂತವಾದಿಗಳನ್ನಾಗಿ ಮಾಡುವುದು ಹೆಚ್ಚುತ್ತಿರುವುದು ಹಲವು ಕ್ರಿಮಿನಲ್ ಚಟುವಟಿಕೆಗಳಿಗೂ ಕಾರಣವಾಗಲಿದೆ </p></li></ul>.<h2>ಕೈಗೊಳ್ಳಬೇಕಾದ ಕ್ರಮಗಳು</h2><ul><li><p> ಕೈದಿಗಳು ತೋರುವ ವರ್ತನೆ ಅವರು ಅನುಸರಿಸುವ ಸಿದ್ಧಾಂತಗಳ ಆಧಾರದಲ್ಲಿ ಅವರನ್ನು ಗುರುತಿಸುವುದಕ್ಕಾಗಿ ತಂತ್ರಗಳನ್ನು ಅಭಿವೃದ್ದಿಪಡಿಸಬೇಕು </p></li><li><p>ಜೈಲಿನಲ್ಲಿರಿಸಿದ ದಿನ ಹಾಗೂ ನಂತರದ ಅವಧಿಯಲ್ಲಿ ಕೈದಿಗಳ ಕುರಿತು ನಿಯಮಿತವಾಗಿ ಮೌಲ್ಯಮಾಪನ ನಡೆಸಬೇಕು. ಇದಕ್ಕಾಗಿ ಗುಪ್ತಚರ ಸಂಸ್ಥೆ ಸೇರಿ ವಿವಿಧ ಸಂಸ್ಥೆಗಳ ನೆರವು ಪಡೆಯಬೇಕು</p></li><li><p> ಇತರ ಕೈದಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ಗ್ರಹಿಸಿ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು </p></li><li><p>ಮೂಲಭೂತವಾದ ಸಿದ್ಧಾಂತ ಪ್ರಚುರಪಡಿಸುವ ಒಲವು ಹೊಂದಿರುವ ಅಪಾಯಕಾರಿ ಎನಿಸುವ ಕೈದಿಗಳನ್ನು ಪ್ರತ್ಯೇಕವಾಗಿ ಇರಿಸಬೇಕು</p></li><li><p> ಉಗ್ರರು ಹಾಗೂ ಮೂಲಭೂತವಾದದಿಂದ ಆಕರ್ಷಿತರಾಗಿರುವ ಕೈದಿಗಳನ್ನಿರಿಸುವುದಕ್ಕಾಗಿ ಅಧಿಕ ಭದ್ರತೆ ಇರುವ ಜೈಲು ಸಂಕೀರ್ಣಗಳನ್ನು ನಿರ್ಮಿಸಲು ಪರಿಶೀಲಿಸಬೇಕು. ಇಂಥವರ ಮೇಲೆ ನಿರಂತರ ಕಣ್ಗಾವಲಿರಿಸಬೇಕು </p></li><li><p>ಕೈದಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವುದನ್ನು ಪ್ರೋತ್ಸಾಹಿಸಬೇಕು. ಇದು ಅವರಲ್ಲಿ ಭಾವನಾತ್ಮಕ ಸ್ಥಿರತೆ ಕಾಪಾಡಲು ನೆರವಾಗಲಿದೆ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೇಶದ ಕಾರಾಗೃಹಗಳಲ್ಲಿ ಕೈದಿಗಳನ್ನು ತೀವ್ರಗಾಮಿಗಳನ್ನಾಗಿ ಮಾಡುತ್ತಿರುವುದು ಗಂಭೀರ ಸವಾಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಜೊತೆಗೆ ಕಾನೂನು ಸುವ್ಯವಸ್ಥೆ ಹಾಗೂ ಆಂತರಿಕ ಭದ್ರತೆ ಖಾತ್ರಿಪಡಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.</p>.<p>ಈ ಕುರಿತು ಸಚಿವಾಲಯವು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದೆ.</p>.<p>‘ಜೈಲುಗಳಲ್ಲಿನ ಕೈದಿಗಳು ಸಮಾಜದಿಂದ ದೂರವಾಗಿರುತ್ತಾರೆ. ಅವರ ಚಲನವಲನಗಳ ಮೇಲೆ ಕಣ್ಣಿಡುವುದು ಅಗತ್ಯ. ಈ ವಿಚಾರದಲ್ಲಿ ತೋರುವ ನಿರ್ಲಕ್ಷ್ಯ ಭಾರಿ ಅಪಾಯಗಳಿಗೆ ದಾರಿ ಮಾಡಿಕೊಡಬಹುದು. ಹೀಗಾಗಿ, ಸೆರೆವಾಸದಲ್ಲಿರುವವರನ್ನು ಮೂಲಭೂತವಾದಿಗಳನ್ನಾಗಿ ಮಾಡುತ್ತಿರುವುದು ಅಪಾಯಕಾರಿ’ ಎಂದು ಸಚಿವಾಲಯ ಹೇಳಿದೆ.</p>.<h2>ಪತ್ರದಲ್ಲಿನ ಪ್ರಮುಖ ಅಂಶಗಳು</h2><ul><li><p>ಕೈದಿಗಳಲ್ಲಿ ಸಾಮಾನ್ಯವಾಗಿ ಪರಕೀಯ ಭಾವನೆ ಮನೆ ಮಾಡಿರುತ್ತದೆ. ಇದು ಅವರನ್ನು ಮೂಲಭೂತವಾದದ ಸಂಕಥನಗಳತ್ತ ಆಕರ್ಷಣೆಗೊಳ್ಳುವಂತೆ ಮಾಡುತ್ತದೆ. ಅವರಲ್ಲಿ ಹಿಂಸಾತ್ಮಕ ವರ್ತನೆ ಅಥವಾ ಸಮಾಜ ವಿರೋಧಿ ಪ್ರವೃತ್ತಿ ಬೆಳೆಯುವಂತೆ ಮಾಡುತ್ತದೆ</p></li><li><p>ಕೆಲ ಪ್ರಕರಣಗಳಲ್ಲಿ ಕೈದಿಗಳು ಇತರ ಕೈದಿಗಳ ಮೇಲೆ ಅಥವಾ ಜೈಲು ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದಕ್ಕೆ ಮೂಲಭೂತವಾದ ಪ್ರಚೋದನೆ ನೀಡಬಹುದು</p></li><li><p>ಕೈದಿಗಳನ್ನು ಮೂಲಭೂತವಾದಿಗಳನ್ನಾಗಿ ಮಾಡುವುದು ಹೆಚ್ಚುತ್ತಿರುವುದು ಹಲವು ಕ್ರಿಮಿನಲ್ ಚಟುವಟಿಕೆಗಳಿಗೂ ಕಾರಣವಾಗಲಿದೆ </p></li></ul>.<h2>ಕೈಗೊಳ್ಳಬೇಕಾದ ಕ್ರಮಗಳು</h2><ul><li><p> ಕೈದಿಗಳು ತೋರುವ ವರ್ತನೆ ಅವರು ಅನುಸರಿಸುವ ಸಿದ್ಧಾಂತಗಳ ಆಧಾರದಲ್ಲಿ ಅವರನ್ನು ಗುರುತಿಸುವುದಕ್ಕಾಗಿ ತಂತ್ರಗಳನ್ನು ಅಭಿವೃದ್ದಿಪಡಿಸಬೇಕು </p></li><li><p>ಜೈಲಿನಲ್ಲಿರಿಸಿದ ದಿನ ಹಾಗೂ ನಂತರದ ಅವಧಿಯಲ್ಲಿ ಕೈದಿಗಳ ಕುರಿತು ನಿಯಮಿತವಾಗಿ ಮೌಲ್ಯಮಾಪನ ನಡೆಸಬೇಕು. ಇದಕ್ಕಾಗಿ ಗುಪ್ತಚರ ಸಂಸ್ಥೆ ಸೇರಿ ವಿವಿಧ ಸಂಸ್ಥೆಗಳ ನೆರವು ಪಡೆಯಬೇಕು</p></li><li><p> ಇತರ ಕೈದಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ಗ್ರಹಿಸಿ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು </p></li><li><p>ಮೂಲಭೂತವಾದ ಸಿದ್ಧಾಂತ ಪ್ರಚುರಪಡಿಸುವ ಒಲವು ಹೊಂದಿರುವ ಅಪಾಯಕಾರಿ ಎನಿಸುವ ಕೈದಿಗಳನ್ನು ಪ್ರತ್ಯೇಕವಾಗಿ ಇರಿಸಬೇಕು</p></li><li><p> ಉಗ್ರರು ಹಾಗೂ ಮೂಲಭೂತವಾದದಿಂದ ಆಕರ್ಷಿತರಾಗಿರುವ ಕೈದಿಗಳನ್ನಿರಿಸುವುದಕ್ಕಾಗಿ ಅಧಿಕ ಭದ್ರತೆ ಇರುವ ಜೈಲು ಸಂಕೀರ್ಣಗಳನ್ನು ನಿರ್ಮಿಸಲು ಪರಿಶೀಲಿಸಬೇಕು. ಇಂಥವರ ಮೇಲೆ ನಿರಂತರ ಕಣ್ಗಾವಲಿರಿಸಬೇಕು </p></li><li><p>ಕೈದಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವುದನ್ನು ಪ್ರೋತ್ಸಾಹಿಸಬೇಕು. ಇದು ಅವರಲ್ಲಿ ಭಾವನಾತ್ಮಕ ಸ್ಥಿರತೆ ಕಾಪಾಡಲು ನೆರವಾಗಲಿದೆ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>