<p><strong>ನವದೆಹಲಿ</strong> : ಸಂಸತ್ ಭವನದ ಆವರಣದೊಳಗೆ ಫೋನ್ನಲ್ಲಿ ಮಾತನಾಡುತ್ತಿರುವ ವೇಳೆ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಮೇಲೆ ಕಾಗೆಯೊಂದು ದಾಳಿ ಮಾಡಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಛಡ್ಡಾ ಮೇಲೆ ಕಾಗೆ ದಾಳಿಯಾಗಿರುವುದರ ಬಗ್ಗೆ ಬಿಜೆಪಿ ವ್ಯಂಗ್ಯ ಮಾಡಿದೆ.</p><p>ಕೈಯಲ್ಲಿ ಫೈಲ್ ಹಿಡಿದು ನಿಂತಿರುವ ರಾಘವ್ ಛೆಡ್ಡಾ ಫೋನ್ ಕರೆಯಲ್ಲಿ ತಲ್ಲೀನರಾಗಿದ್ದರು. ಈ ವೇಳೆ ಕಾಗೆಯೊಂದು ಛಡ್ಡಾ ಅವರ ಮೇಲೆ ದಾಳಿ ಮಾಡಿದೆ. ಕಾಗೆ ದಾಳಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p><p>ಕಾಗೆ ದಾಳಿಯ ಫೋಟೋಗಳನ್ನು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಛಡ್ಡಾ ಅವರ ಕಾಲೆಳೆದಿದೆ. 'ಸುಳ್ಳುಗಾರನನ್ನು ಕಾಗೆ ಕಚ್ಚುತ್ತದೆ ಎಂಬ ಮಾತನ್ನು ನಾವು ಕೇಳಿದ್ದೇವು. ಇದೀಗ ನೋಡುತ್ತಿದ್ದೇವೆ' ಎಂದು ಬರೆದುಕೊಂಡಿದೆ.</p><p>ಬಿಜೆಪಿಯ ಟ್ವೀಟ್ಗೆ ತಿರುಗೇಟು ನೀಡಿರುವ ಛಡ್ಡಾ, ಶ್ರೀರಾಮಚಂದ್ರನ ಮಾತನ್ನು ಉಲ್ಲೇಖಿಸಿದ್ದಾರೆ. 'ಕಲಿಯುಗದಲ್ಲಿ ಹಂಸವು ಧಾನ್ಯಗಳನ್ನು ತಿನ್ನುತ್ತದೆ, ಕಾಗೆಗಳು ಮುತ್ತುಗಳನ್ನು ತಿನ್ನುತ್ತವೆ ಎಂಬ ಮಾತನ್ನು ಶ್ರೀರಾಮಚಂದ್ರ ಸೀತೆಗೆ ಹೇಳುತ್ತಾನೆ. ಇಲ್ಲಿಯವರೆಗೆ ನೀವು ಈ ಮಾತನ್ನು ಕೇಳಿದ್ದಿರಿ, ಈಗ ಕಣ್ಣಾರೆ ನೋಡಿದ್ದೀರಿ' ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong> : ಸಂಸತ್ ಭವನದ ಆವರಣದೊಳಗೆ ಫೋನ್ನಲ್ಲಿ ಮಾತನಾಡುತ್ತಿರುವ ವೇಳೆ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಮೇಲೆ ಕಾಗೆಯೊಂದು ದಾಳಿ ಮಾಡಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಛಡ್ಡಾ ಮೇಲೆ ಕಾಗೆ ದಾಳಿಯಾಗಿರುವುದರ ಬಗ್ಗೆ ಬಿಜೆಪಿ ವ್ಯಂಗ್ಯ ಮಾಡಿದೆ.</p><p>ಕೈಯಲ್ಲಿ ಫೈಲ್ ಹಿಡಿದು ನಿಂತಿರುವ ರಾಘವ್ ಛೆಡ್ಡಾ ಫೋನ್ ಕರೆಯಲ್ಲಿ ತಲ್ಲೀನರಾಗಿದ್ದರು. ಈ ವೇಳೆ ಕಾಗೆಯೊಂದು ಛಡ್ಡಾ ಅವರ ಮೇಲೆ ದಾಳಿ ಮಾಡಿದೆ. ಕಾಗೆ ದಾಳಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p><p>ಕಾಗೆ ದಾಳಿಯ ಫೋಟೋಗಳನ್ನು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಛಡ್ಡಾ ಅವರ ಕಾಲೆಳೆದಿದೆ. 'ಸುಳ್ಳುಗಾರನನ್ನು ಕಾಗೆ ಕಚ್ಚುತ್ತದೆ ಎಂಬ ಮಾತನ್ನು ನಾವು ಕೇಳಿದ್ದೇವು. ಇದೀಗ ನೋಡುತ್ತಿದ್ದೇವೆ' ಎಂದು ಬರೆದುಕೊಂಡಿದೆ.</p><p>ಬಿಜೆಪಿಯ ಟ್ವೀಟ್ಗೆ ತಿರುಗೇಟು ನೀಡಿರುವ ಛಡ್ಡಾ, ಶ್ರೀರಾಮಚಂದ್ರನ ಮಾತನ್ನು ಉಲ್ಲೇಖಿಸಿದ್ದಾರೆ. 'ಕಲಿಯುಗದಲ್ಲಿ ಹಂಸವು ಧಾನ್ಯಗಳನ್ನು ತಿನ್ನುತ್ತದೆ, ಕಾಗೆಗಳು ಮುತ್ತುಗಳನ್ನು ತಿನ್ನುತ್ತವೆ ಎಂಬ ಮಾತನ್ನು ಶ್ರೀರಾಮಚಂದ್ರ ಸೀತೆಗೆ ಹೇಳುತ್ತಾನೆ. ಇಲ್ಲಿಯವರೆಗೆ ನೀವು ಈ ಮಾತನ್ನು ಕೇಳಿದ್ದಿರಿ, ಈಗ ಕಣ್ಣಾರೆ ನೋಡಿದ್ದೀರಿ' ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>