ಇದೇ ವೇಳೆ ಉದ್ದವ್ ಠಾಕ್ರೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಒಟ್ಟಾಗಲಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಇಬ್ಬರ ತಾತಂದಿರ ನಡುವೆ ಉತ್ತಮ ಬಾಂಧವ್ಯ ಇತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಪ್ರಭೋದಂಕರ್ ಠಾಕ್ರೆ ಇಬ್ಬರೂ ಸಂಯುಕ್ತ ಮಹಾರಾಷ್ಟ್ರ ಚಳವಳಿಯಲ್ಲಿ ಭಾಗಿಯಾಗಿದ್ದರು. ಅಂಬೇಡ್ಕರ್ ಅವರಿಗೆ ಮರಾಠಿ ಅಸ್ಮಿತೆ ಬಗ್ಗೆ ಬಲವಾದ ಒಲವಿತ್ತು‘ ಎಂದು ಹೇಳಿದ್ದಾರೆ.