ಮುಂಬೈ:ಸಿಬ್ಬಂದಿ, ನೌಕರರ ಸಂಚಾರಕ್ಕಾಗಿ ಇಲ್ಲಿ ಸಬರ್ಬನ್ ರೈಲು (ಉಪನಗರಗಳಿಗೆ) ಸೇವೆಯನ್ನು ಸೋಮವಾರ ಪುನರಾರಂಭಿಸಲಾಗಿದೆ ಎಂದು ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಅಗತ್ಯ ಸಿಬ್ಬಂದಿಯೆಂದು ಸೂಚಿಸಿರುವವರು ಮಾತ್ರ ಇದರಲ್ಲಿ ಪ್ರಯಾಣಿಸಬಹುದು. ಆಯ್ದ ಮಾರ್ಗಗಳಲ್ಲಿ ಮಾತ್ರ ರೈಲು ಸಂಚಾರ ಪುನರಾರಂಭಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇಂತಹ ಮೊದಲ ರೈಲು ಸೋಮವಾರ ಬೆಳಿಗ್ಗೆ ವಿರಾರ್ನಿಂದ ಚರ್ಚ್ಗೇಟ್ಗೆ ಪಯಣಿಸಿತು.ಈ ರೈಲುಗಳಲ್ಲಿ 1200 ಮಂದಿ ಪಯಣಿಸಬಹುದಾದರೂ ಈಗ 700 ಜನರಿಗೆ ಮಾತ್ರ ಅವಕಾಶ ಇರುತ್ತದೆ.