ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಪಾಕ್‌ ಪರ ಗೂಢಚರ್ಯೆ: ಸರ್ಕಾರಿ ನೌಕರನ ಬಂಧನ

Published : 3 ಜೂನ್ 2025, 14:37 IST
Last Updated : 3 ಜೂನ್ 2025, 14:37 IST
ಫಾಲೋ ಮಾಡಿ
Comments
ಆಪರೇಷನ್ ಸಿಂಧೂರ: ರಹಸ್ಯ ಮಾಹಿತಿ ನೀಡಿದ್ದ ವ್ಯಕ್ತಿಯ ಬಂಧನ
ಚಂಡೀಗಢ: ‘ಆಪರೇಷನ್ ಸಿಂಧೂರ’ದ ಸಂದರ್ಭದಲ್ಲಿ ಸೈನಿಕರ ನಿಯೋಜನೆ ಮತ್ತು ಕಾರ್ಯತಂತ್ರದ ಬಗೆಗಿನ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಜೊತೆ ಹಂಚಿಕೊಂಡ ಪಂಜಾಬ್‌ ಮೂಲದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ನ ತರಣ್‌ ತರಣ್‌ ಜಿಲ್ಲೆಯ ಮೊಹಲ್ಲಾ ರೂದುಪುರ ನಿವಾಸಿ ಗಗನ್‌ದೀಪ್ ಸಿಂಗ್‌ ಅಲಿಯಾಸ್‌ ಗಗನ್ ಬಂಧಿತ ಆರೋಪಿಯಾಗಿದ್ದು  ಪಾಕಿಸ್ತಾನ ಮೂಲದ ಖಾನಿಸ್ತಾನಿ ನಾಯಕ ಗೋಪಾಲ್ ಸಿಂಗ್‌ ಛಾವ್ಲಾ ಜೊತೆ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗಗನ್‌ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆಗೂ ಸಂಪರ್ಕದಲ್ಲಿದ್ದರು. ರಹಸ್ಯ ಮಾಹಿತಿಗಳನ್ನು ಹಂಚಿಕೊಂಡು ಹಣ ಪಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT