‘ಈ ಹಿಂದೆ ಚಿಕಿತ್ಸೆಗಾಗಿ ಸಿಂಗಪುರಕ್ಕೆ ಹೋಗಿದ್ದೆ. ಆಗ ತಮಿಳುನಾಡಿನ ಜನ ನನ್ನ ಚೇತರಿಕೆಗಾಗಿ ಹೋಮ, ಹವನಗಳನ್ನು ಮಾಡಿದ್ದರು. ಅವರ ಪ್ರಾರ್ಥನೆಯಿಂದಾಗಿ ನನಗೆ ಪುನರ್ಜನ್ಮ ಸಿಕ್ಕಿತ್ತು. ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಜನರಿಗಾಗಿ ಪ್ರಾಣ ತ್ಯಜಿಸಲೂ ಸಿದ್ಧನಿದ್ದೇನೆ. ರಾಜಕೀಯದಲ್ಲಿ ಬದಲಾವಣೆಯಾಗಬೇಕಿರುವುದು ತುಂಬಾ ಅವಶ್ಯ. ವ್ಯವಸ್ಥೆಯನ್ನು ಬದಲಿಸಲು ಇದು ಸಕಾಲ’ ಎಂದೂ ತಿಳಿಸಿದರು.