<p><strong>ಅಹಮದಾಬಾದ್:</strong> ರಾಜ್ಕೋಟ್ ಮೂಲದ ಟಿಆರ್ಪಿ ಮಾಲ್ ಗೇಮ್ ಜೋನ್ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಗುರುವಾರ ಜಾಮೀನು ಮಂಜೂರು ಮಾಡಿರುವ ಗುಜರಾತ್ ಹೈಕೋರ್ಟ್, ಐವರು ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.</p>.<p>ನ್ಯಾಯಮೂರ್ತಿ ಎಂ.ಆರ್.ಮೆಂಗ್ಡೆ ಅವರ ನೇತೃತ್ವದ ಪೀಠವು, ಸಹಾಯಕ ನಗರ ಯೋಜನಾ ಅಧಿಕಾರಿಗಳಾದ ರಾಜೇಶ್ ಮಕ್ವಾನಾ, ಗೌತಮ್ ಜೋಷಿ, ಸಹಾಯಕ ಎಂಜಿನಿಯರ್ ಜಯದೀಪ್ ಚೌಧರಿ ಅವರಿಗೆ ಜಾಮೀನು ಮಂಜೂರು ಮಾಡಿತು.</p>.<p>ಆದರೆ, ಮುಖ್ಯ ಅಗ್ನಿಶಾಮಕ ಅಧಿಕಾರಿ ಇಲೇಶ್ ಖೇರ್, ಜಮೀನಿನ ಮಾಲೀಕ ಮತ್ತು ಗೇಮ್ ಜೋನ್ನ ಪಾಲುದಾರ ಅಶೋಕ್ ಜಡೇಜಾ, ಮತ್ತೊಬ್ಬ ಪಾಲುದಾರ ಕಿರಿತ್ ಜಡೇಜಾ, ನಗರ ಯೋಜನಾ ಅಧಿಕಾರಿ ಮನ್ಸುಖ್ ಸಾಗತಿಯಾ ಅವರಿಗೆ ಪೀಠವು ಜಾಮೀನು ನಿರಾಕರಿಸಿತು.</p>.<p>ಕಳೆದ ವರ್ಷದ ಮೇ 25ರಂದು ರಾಜ್ಕೋಟ್ನ ಟಿಆರ್ಪಿ ಮಾಲ್ನ ಗೇಮಿಂಗ್ ಜೋನ್ನಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿ ಮಕ್ಕಳು ಸೇರಿದಂತೆ 27 ಮಂದಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 15 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.</p>.ರಾಜ್ಕೋಟ್ ಗೇಮ್ ಜೋನ್ ಅಗ್ನಿ ಅವಘಡ: ದಾಖಲೆ ತಿರುಚಿದ ಇಬ್ಬರ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್:</strong> ರಾಜ್ಕೋಟ್ ಮೂಲದ ಟಿಆರ್ಪಿ ಮಾಲ್ ಗೇಮ್ ಜೋನ್ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಗುರುವಾರ ಜಾಮೀನು ಮಂಜೂರು ಮಾಡಿರುವ ಗುಜರಾತ್ ಹೈಕೋರ್ಟ್, ಐವರು ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.</p>.<p>ನ್ಯಾಯಮೂರ್ತಿ ಎಂ.ಆರ್.ಮೆಂಗ್ಡೆ ಅವರ ನೇತೃತ್ವದ ಪೀಠವು, ಸಹಾಯಕ ನಗರ ಯೋಜನಾ ಅಧಿಕಾರಿಗಳಾದ ರಾಜೇಶ್ ಮಕ್ವಾನಾ, ಗೌತಮ್ ಜೋಷಿ, ಸಹಾಯಕ ಎಂಜಿನಿಯರ್ ಜಯದೀಪ್ ಚೌಧರಿ ಅವರಿಗೆ ಜಾಮೀನು ಮಂಜೂರು ಮಾಡಿತು.</p>.<p>ಆದರೆ, ಮುಖ್ಯ ಅಗ್ನಿಶಾಮಕ ಅಧಿಕಾರಿ ಇಲೇಶ್ ಖೇರ್, ಜಮೀನಿನ ಮಾಲೀಕ ಮತ್ತು ಗೇಮ್ ಜೋನ್ನ ಪಾಲುದಾರ ಅಶೋಕ್ ಜಡೇಜಾ, ಮತ್ತೊಬ್ಬ ಪಾಲುದಾರ ಕಿರಿತ್ ಜಡೇಜಾ, ನಗರ ಯೋಜನಾ ಅಧಿಕಾರಿ ಮನ್ಸುಖ್ ಸಾಗತಿಯಾ ಅವರಿಗೆ ಪೀಠವು ಜಾಮೀನು ನಿರಾಕರಿಸಿತು.</p>.<p>ಕಳೆದ ವರ್ಷದ ಮೇ 25ರಂದು ರಾಜ್ಕೋಟ್ನ ಟಿಆರ್ಪಿ ಮಾಲ್ನ ಗೇಮಿಂಗ್ ಜೋನ್ನಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿ ಮಕ್ಕಳು ಸೇರಿದಂತೆ 27 ಮಂದಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 15 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.</p>.ರಾಜ್ಕೋಟ್ ಗೇಮ್ ಜೋನ್ ಅಗ್ನಿ ಅವಘಡ: ದಾಖಲೆ ತಿರುಚಿದ ಇಬ್ಬರ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>