ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ಸಂದೇಶವನ್ನು ವೈರಲ್ ಮಾಡುವ ಸಾಮರ್ಥ್ಯ ನಮಗಿದೆ: ಅಮಿತ್ ಶಾ

Last Updated 27 ಸೆಪ್ಟೆಂಬರ್ 2018, 11:10 IST
ಅಕ್ಷರ ಗಾತ್ರ

ನವದೆಹಲಿ: ನೀವು ಕಳುಹಿಸುವ ಯಾವುದೇ ಸಂದೇಶ ಸತ್ಯವೊ, ಸುಳ್ಳೊ ಒಟ್ಟಿನಲ್ಲಿ ಅದು ವೈರಲ್‌ ಆಗಬೇಕು ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಜೆಪಿಯ ಸಾಮಾಜಿಕ ಮಾಧ್ಯಮಗಳ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.ರಾಜಸ್ಥಾನದ ಕೋಟದಲ್ಲಿ ನಡೆದ ಬಿಜೆಪಿಯ ಸಾಮಾಜಿಕ ಮಾಧ್ಯಮಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾ ಅವರ ಭಾಷಣವನ್ನು ‘ದಿ ವೈರ್’ ಸುದ್ದಿತಾಣ ವರದಿ ಮಾಡಿದೆ.

ರಾಹುಲ್‌ ಗಾಂಧಿಯ ಬಹುತೇಕ ಹಿಂಬಾಲಕರುವಿದೇಶಿಯರು, ನೀವು ಬಾಡಿಗೆ ಗೂಂಡಾಗಳಿಗೆ ಭಯಪಡಬೇಡಿ. ರಾಜ್ಯ ಮತ್ತು ಕೇಂದ್ರದಲ್ಲಿ ನಾವು ಸರ್ಕಾರ ರಚಿಸಲುಸಾಮಾಜಿಕ ಮಾಧ್ಯಮಗಳೇ ಆಯುಧ.ನೀವು ಕಳುಹಿಸುವ ಸಂದೇಶ ವೈರಲ್ ಆಗಬೇಕು. ಈಗಾಗಲೇ ಉತ್ತರಪ್ರದೇಶದಲ್ಲಿ 32 ಲಕ್ಷ ಜನರಿರುವ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿದ್ದೇವೆ. ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಸಂದೇಶ ಕಳುಹಿಸುತ್ತಿದ್ದೇವೆ ಎಂದು ಅಮಿತ್ ಶಾ ಹೇಳಿರುವುದನ್ನು ’ದೈನಿಕ ಭಾಸ್ಕರ್’ ಪತ್ರಿಕೆ ವರದಿ ಮಾಡಿದೆ.

ಕಳೆದ ವರ್ಷ ನಡೆದ ಉತ್ತರಪ್ರದೇಶವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಸಾಮಾಜಿಕ ಮಾಧ್ಯಮಗಳ ಕಾರ್ಯಕರ್ತರು ಎರಡು ದೊಡ್ವ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಿದ್ದರು. ಒಂದು ಗುಂಪಿನಲ್ಲಿ 15 ಲಕ್ಷ, ಮತ್ತೊಂದು ಗುಂಪಿನಲ್ಲಿ 17 ಲಕ್ಷ ಜನರಿದ್ದರು, ಒಟ್ಟು 31 ಲಕ್ಷ ಜನರುಆ ಎರಡು ವಾಟ್ಸ್‌ಆ್ಯಪ್‌ ಗ್ರೂಪಿನಲ್ಲಿದ್ದಾರೆ.

ಪ್ರತಿ ದಿನ ಬೆಳಗ್ಗೆ ‘ಸತ್ಯ ಏನು ಗೊತ್ತೆ ’ ಎಂಬ ಸಂದೇಶವನ್ನು ಕಳುಹಿಸಲಾಗುತ್ತಿತ್ತು. ಬಿಜೆಪಿ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಸುಳ್ಳು ಸುದ್ದಿಗಳನ್ನು ಪಟ್ಟಿಮಾಡಿ, ವಾಸ್ತವಾಂಶ ವಿವರಿಸುವ ಸಂದೇಶಗಳನ್ನುವಾಟ್ಸ್ಆ್ಯಪ್‌ನಲ್ಲಿ ಕಳುಹಿಸಲಾಗುತ್ತಿತ್ತು. ಇಂತಹ ಸಂದೇಶಗಳು ವೈರಲ್‌ ಆಗುತ್ತಿದ್ದವು. ಪತ್ರಿಕೆ ಜನರಿಗೆ ಸಿಗುವ ಮೊದಲೇ ಸಾಮಾಜಿಕ ಮಾಧ್ಯಮಗಳಲ್ಲಿ ‘ಸತ್ಯ ಏನು ಗೊತ್ತೆ’ ಬಂದಿರುತ್ತಿತ್ತು. ಸುಳ್ಳು ಸುದ್ದಿಗಳನ್ನು ಯಾಕೆ ಪ್ರಕಟಿಸುತ್ತೀರಾ, ಸತ್ಯವಾದುದನ್ನು ಬರೆಯಿರಿ ಎಂದುಜನರೇ ಪತ್ರಕರ್ತರಿಗೆಹೇಳತೊಡಗಿದರು. ಹೀಗೆ ಮಾಡಿದ್ದರಿಂದ ಪತ್ರಿಕೆಗಳು ನಿಧಾನಕ್ಕೆ ತಟಸ್ಥವಾದವು ಎಂದು ಅಮಿತ್ ಶಾ ಹೇಳಿದರು.

ಸಾಮಾಜಿಕ ಮಾಧ್ಯಮಗಳನ್ನು ನಿರ್ವಹಣೆ ಮಾಡುವಕಾರ್ಯಕರ್ತರು ಚುರುಕಾಗಿರಬೇಕು. ನಾವು ಕಳುಹಿಸುವ ಸಂದೇಶ ವೈರಲ್‌ ಆಗಬೇಕು, ಸಮಾಜದ ಎಲ್ಲರನ್ನೂ ತಲುಪಬೇಕು.ಮುಲಾಯಂ ಅವರಿಗೆ ಅಖಿಲೇಶ್ ಯಾದವ್ ಹೊಡೆದರು ಎಂದುಒಬ್ಬ ಕಾರ್ಯಕರ್ತ ಒಂದು ಸಂದೇಶ ಕಳುಹಿಸಿದ್ದ. ಆದರೆ ಈ ಘಟನೆ ನಡೆದೇ ಇರಲಿಲ್ಲ! ಅಖಿಲೇಶ್ ಮತ್ತು ಮುಲಾಯಂ ಬೇರೆ ಸ್ಥಳಗಳಲ್ಲಿ ಇದ್ದರು!ಅದೂ 600 ಕಿ.ಮೀ ದೂರದಲ್ಲಿ! ಈ ಸುದ್ದಿ ಸಾಮಾಜಿಕ ಮಾಧ್ಯಮಗಳ ಮೂಲಕ ಎಲ್ಲಾ ಕಡೆ ಹರಡಿತು, ಬೆಳಗ್ಗೆ ಹತ್ತು ಗಂಟೆಗೆ ನನ್ನ ಪೋನ್ ರಿಂಗಣಿಸಿತು, ಸರ್, ನಿಮಗೆ ಗೊತ್ತೆ, ಮುಲಾಯಂ ಸಿಂಗ್ ಅವರನ್ನು ಅಖಿಲೇಶ್ ಹೊಡೆದರಂತೆ! ಹೀಗೆ ಈ ಸಂದೇಶ ವೈರಲ್ ಆಯ್ತು.

ಇಂಥ ಕೆಲಸಗಳಿಂದ ನಮಗೆ ಒಳ್ಳೆಯದೇ ಆಗಬಹುದು, ಆದರೂ ಇಂಥವಕ್ಕೆ ಕೈ ಹಾಕಬೇಡಿ (ಕಾರ್ಯಕರ್ತರ ಗುಂಪಿನಿಂದಜೋರು ನಗು). ನಾನು ಏನು ಹೇಳುತ್ತಿದ್ದೇನೆ ಎಂಬುದು ನಿಮಗೆ ಅರ್ಥವಾಗಿರಬೇಕು. ನಾವು ಒಳ್ಳೆಯದನ್ನು ಸಹ ಮಾಡಬಹುದು. ನಾವು ಸಾರ್ವಜನಿಕರಿಗೆ ಯಾವುದೇ ಸಂದೇಶವನ್ನು ಕಳುಹಿಸಲು ಸಮರ್ಥರಿದ್ದೇವೆ, ಅದು ಸಿಹಿ ಇರಲಿ, ಕಹಿ ಇರಲಿ ಅಥವಾ ಸತ್ಯವಿರಲಿ, ಸುಳ್ಳಿರಲಿ ಯಾಕೆಂದರೆ ನಮ್ಮ ಗ್ರೂಪಿನಲ್ಲಿ 32 ಲಕ್ಷ ಜನರಿದ್ದಾರೆ. ಹೀಗಾಗಿ ನಮಗೆ ಸಂದೇಶಗಳನ್ನು ವೈರಲ್ ಮಾಡಲು ಸಾಧ್ಯವಾಗುತ್ತಿದೆ ಎಂದು ಅಮಿತ್ ಶಾ ಹೇಳಿದರು.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಅಮಿತ್ ಶಾ ರಾಜಸ್ಥಾನದ ಕೋಟದಲ್ಲಿ ಮೇಲಿನ ರೀತಿ ಹೇಳಿದ್ದರು. ಆದರೆ ಇದೇ ವರ್ಷ ದೆಹಲಿಯಲ್ಲಿ ನಡೆದ ಸಾಮಾಜಿಕ ಮಾಧ್ಯಮಗಳ ಕಾರ್ಯಕರ್ತರ ಸಭೆಯಲ್ಲಿ ಅವರ ಹೇಳಿಕೆಗಳು ಭಿನ್ನವಾಗಿರುವುದನ್ನು ಗಮನಿಸಬಹುದು.ಜುಲೈನಲ್ಲಿ ನಡೆದ ಆ ಸಭೆಯಲ್ಲಿ, ನೀವು ಪ್ರಕಟಿಸುವ ನಕಲಿ ಸುದ್ದಿಗಳು ಪಕ್ಷಕ್ಕೆ ಮುಜುಗರ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತಿವೆ, ತಪ್ಪು ಸಂದೇಶಗಳು, ನಕಲಿ ಚಿತ್ರಗಳು, ಸುಳ್ಳು ಮಾಹಿತಿಯನ್ನು ಟ್ವಿಟ್ಟರ್, ಫೇಸ್‌ಬುಕ್ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬೇಡಿ ಎಂದು ಕಿವಿ ಮಾತು ಹೇಳಿರುವ ಸುದ್ದಿಯನ್ನು ‘ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT