ಆರೋಪಿ ಕಾನ್ಸ್ಟೆಬಲ್ ಅನ್ನು ಬಲೀಂದರ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಈಶಾನ್ಯ ರೈಲ್ವೆಯ (ಎನ್ಇಆರ್) ಆರ್ಪಿಎಫ್ ವಾರಣಾಸಿ ವಿಭಾಗ ತಿಳಿಸಿದೆ.
‘ಅಜಂಗಢ ಆರ್ಪಿಎಫ್ ಇನ್ಸ್ಪೆಕ್ಟರ್ಗಳು ಈ ವಿಷಯವನ್ನು ತನಿಖೆ ಮಾಡುತ್ತಾರೆ. ಈ ಮಧ್ಯೆ, ಆರೋಪಿ ಪೊಲೀಸ್ ಕಾನ್ಸ್ಟೆಬಲ್ ಅನ್ನು ಅಮಾನತುಗೊಳಿಸಲಾಗಿದೆ" ಎಂದು ಅದು ಹೇಳಿದೆ.
‘ಘಟನೆ ಯಾವಾಗ ನಡೆದಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ, ಪ್ರಕರಣದ ತನಿಖೆ ನಡೆಯುತ್ತಿದೆ’ಎಂದು ವಾರಾಣಸಿ ವಿಭಾಗದ ಪಿಆರ್ಒ ಅಶೋಕ್ ಕುಮಾರ್ ಹೇಳಿದ್ದಾರೆ.
ಬಾಲಕ ಪ್ಲಾಟ್ಫಾರ್ಮ್ನಲ್ಲಿ ಮಲಗಿದ್ದಾಗ ಪೊಲೀಸ್ ಆತನನ್ನು ಒದ್ದಿದ್ದಾನೆ ಎಂದು ವರದಿಯಾಗಿದೆ.