ನವದೆಹಲಿ : ಕೋವಿಡ್–19 ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಸತ್ ಸಮಿತಿ ಸಭೆಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲು ಸಾಧ್ಯವೇ ಎನ್ನುವುದರ ಕುರಿತು ರಾಜ್ಯಸಭೆ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಹಾಗೂ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೋಮವಾರ ಚರ್ಚೆ ನಡೆಸಿದರು.
ಹಿರಿಯ ಕಾಂಗ್ರೆಸ್ ನಾಯಕರಾದ ಪಿ.ಚಿದಂಬರಂ, ಶಶಿ ತರೂರ್ ಸೇರಿದಂತೆ ಸಂಸತ್ ಸಮಿತಿಯ ಅಧ್ಯಕ್ಷರು ಹಾಗೂ ವಿಪಕ್ಷಗಳ ಸದಸ್ಯರು ತಕ್ಷಣವೇ ಸಮಿತಿ ಸಭೆಗಳನ್ನು ನಡೆಸಲು ಆಗ್ರಹಿಸಿದ್ದರು.