<p><strong>ನವದೆಹಲಿ:</strong> 40 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ 23 ವರ್ಷದ ಸಾಮಾಜಿಕ ಮಾಧ್ಯಮ ಇನ್ಫ್ಲುಯನ್ಸರ್ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿ ಬುಧವಾರ ಆದೇಶಿಸಿದೆ.</p>.<p>ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಸತೀಶ್ ಚಂದ್ರ ಶರ್ಮಾ ಅವರು ಇದ್ದ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿ, ‘ವ್ಯಕ್ತಿ ವಿರುದ್ಧ ಆರೋಪ ಮಾಡಿರುವ ಮಹಿಳೆ ಮಗು ಅಲ್ಲ. ಅಲ್ಲದೇ, ಒಂದು ಕೈಯಿಂದ ಚಪ್ಪಾಳೆ ಸಾಧ್ಯ ಇಲ್ಲ’ ಎಂದು ಹೇಳಿದೆ.</p>.<p>‘ಆರೋಪಿಯನ್ನು ಜೈಲಿನಲ್ಲಿರಿಸಿ 9 ತಿಂಗಳು ಗತಿಸಿದ್ದರೂ ಆತನ ವಿರುದ್ಧ ಆರೋಪ ನಿಗದಿ ಮಾಡಿಲ್ಲ’ ಎಂದೂ ಹೇಳಿದೆ.</p>.<p>‘ಮಹಿಳೆಯೇನೂ ಸಣ್ಣ ಮಗುವಲ್ಲ. ಆಕೆಗೆ 40 ವರ್ಷವಾಗಿದ್ದು, ಇಬ್ಬರೂ ಜೊತೆಯಾಗಿ ಜಮ್ಮುವಿಗೆ ಹೋಗಿದ್ದಾರೆ. ಮಹಿಳೆ 7 ಬಾರಿ ಆರೋಪಿ ಜೊತೆ ಜಮ್ಮುವಿಗೆ ಹೋಗಿದ್ದರೂ ಆ ಬಗ್ಗೆ ಆಕೆಯ ಪತಿ ತಲೆಕೆಡಿಸಿಕೊಂಡಿಲ್ಲ. ಹೀಗಿರುವಾಗ ಐಪಿಸಿ ಸೆಕ್ಷನ್ 376ರ ಅಡಿ ಪ್ರಕರಣ ದಾಖಲಿಸಿದ್ದು ಏಕೆ’ ಎಂದು ದೆಹಲಿ ಪೊಲೀಸರನ್ನು ನ್ಯಾಯಪೀಠ ಪ್ರಶ್ನಿಸಿದೆ.</p>.<p>‘ಇಂತಹ ವ್ಯಕ್ತಿಗಳಿಂದ ಯಾರು ಪ್ರೇರಣೆ ಪಡೆಯುತ್ತಾರೆ?’ ಎಂದು ಆರೋಪಿ ಕುರಿತು ಪೀಠವು ಹೇಳಿದೆ.</p>.<p>ಆರೋಪಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಆರೋಪಿ ತನಗೆ ದೊರೆತ ಈ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಬಾರದು, ದೂರುದಾರ ಮಹಿಳೆಯನ್ನು ಸಂಪರ್ಕಿಸುವ ಪ್ರಯತ್ನ ಮಾಡಬಾರದು ಎಂದು ಸೂಚಿಸಿದೆ.</p>.<p>ಪ್ರಕರಣ: ದೂರುದಾರ ಮಹಿಳೆಯು 2021ರಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಆರೋಪಿ ಸಂಪರ್ಕಕ್ಕೆ ಬಂದಿದ್ದರು. ತಾನು ಮಾರಾಟ ಮಾಡುವ ಬಟ್ಟೆಗಳ ಬ್ರ್ಯಾಂಡ್ಗೆ ಪ್ರಚಾರ ನೀಡುವಂತೆ ಕೋರಿದ್ದರು.</p>.<p>‘ಕೆಲ ದಿನಗಳ ನಂತರ, ಭಿನ್ನಾಭಿಪ್ರಾಯಗಳಿಂದಾಗಿ ಆತನೊಂದಿಗಿನ ವ್ಯಾವಹಾರಿಕ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ್ದೆ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.</p>.<p>‘2021ರ ಡಿಸೆಂಬರ್ನಲ್ಲಿ ಕನಾಟ್ ಪ್ಲೇಸ್ಗೆ ತೆರಳಿ, ಬ್ರ್ಯಾಂಡ್ವೊಂದರ ಚಿತ್ರೀಕರಣಕ್ಕೆ ಹೋಗಲು ಆರೋಪಿ ಮನವೊಲಿಸಿದ್ದ. ಪ್ರಯಾಣದ ವೇಳೆ, ಅಮಲು ಬರಿಸುವ ಪದಾರ್ಥಗಳನ್ನು ಲೇಪಿಸಿದ್ದ ಸಿಹಿಖಾದ್ಯಗಳನ್ನು ನೀಡಿದ್ದ. ಅವುಗಳನ್ನು ಸೇವಿಸಿದ ನಂತರ ನನಗೆ ಪ್ರಜ್ಞೆ ತಪ್ಪಿತ್ತು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.</p>.<p>‘ಹಿಂದೂ ರಾವ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ, ಆರೋಪಿಯು ನನ್ನನ್ನು ಆಸ್ಪತ್ರೆ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನನ್ನ ಹಣವನ್ನು ಕದ್ದ. ನಾನು ನಗ್ನಳಾಗಿರುವ ಫೋಟೊಗಳನ್ನು ಸೆರೆಹಿಡಿದ’ ಎಂದೂ ಮಹಿಳೆ ದೂರಿದ್ದಾರೆ.</p>.<p>‘ನಂತರ ನನ್ನನ್ನು ಬಲವಂತದಿಂದ ಜಮ್ಮುವಿಗೆ ಕರೆದುಕೊಂಡು ಹೋಗಿದ್ದಲ್ಲದೇ, ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿ, ಸುಲಿಗೆ ಮಾಡಿದ್ದಾನೆ. ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಬೆದರಿಕೆ ಹಾಕುತ್ತಾ ಬಂದಿದ್ದಾನೆ’ ಎಂದೂ ದೂರಿನಲ್ಲಿ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> 40 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ 23 ವರ್ಷದ ಸಾಮಾಜಿಕ ಮಾಧ್ಯಮ ಇನ್ಫ್ಲುಯನ್ಸರ್ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿ ಬುಧವಾರ ಆದೇಶಿಸಿದೆ.</p>.<p>ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಸತೀಶ್ ಚಂದ್ರ ಶರ್ಮಾ ಅವರು ಇದ್ದ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿ, ‘ವ್ಯಕ್ತಿ ವಿರುದ್ಧ ಆರೋಪ ಮಾಡಿರುವ ಮಹಿಳೆ ಮಗು ಅಲ್ಲ. ಅಲ್ಲದೇ, ಒಂದು ಕೈಯಿಂದ ಚಪ್ಪಾಳೆ ಸಾಧ್ಯ ಇಲ್ಲ’ ಎಂದು ಹೇಳಿದೆ.</p>.<p>‘ಆರೋಪಿಯನ್ನು ಜೈಲಿನಲ್ಲಿರಿಸಿ 9 ತಿಂಗಳು ಗತಿಸಿದ್ದರೂ ಆತನ ವಿರುದ್ಧ ಆರೋಪ ನಿಗದಿ ಮಾಡಿಲ್ಲ’ ಎಂದೂ ಹೇಳಿದೆ.</p>.<p>‘ಮಹಿಳೆಯೇನೂ ಸಣ್ಣ ಮಗುವಲ್ಲ. ಆಕೆಗೆ 40 ವರ್ಷವಾಗಿದ್ದು, ಇಬ್ಬರೂ ಜೊತೆಯಾಗಿ ಜಮ್ಮುವಿಗೆ ಹೋಗಿದ್ದಾರೆ. ಮಹಿಳೆ 7 ಬಾರಿ ಆರೋಪಿ ಜೊತೆ ಜಮ್ಮುವಿಗೆ ಹೋಗಿದ್ದರೂ ಆ ಬಗ್ಗೆ ಆಕೆಯ ಪತಿ ತಲೆಕೆಡಿಸಿಕೊಂಡಿಲ್ಲ. ಹೀಗಿರುವಾಗ ಐಪಿಸಿ ಸೆಕ್ಷನ್ 376ರ ಅಡಿ ಪ್ರಕರಣ ದಾಖಲಿಸಿದ್ದು ಏಕೆ’ ಎಂದು ದೆಹಲಿ ಪೊಲೀಸರನ್ನು ನ್ಯಾಯಪೀಠ ಪ್ರಶ್ನಿಸಿದೆ.</p>.<p>‘ಇಂತಹ ವ್ಯಕ್ತಿಗಳಿಂದ ಯಾರು ಪ್ರೇರಣೆ ಪಡೆಯುತ್ತಾರೆ?’ ಎಂದು ಆರೋಪಿ ಕುರಿತು ಪೀಠವು ಹೇಳಿದೆ.</p>.<p>ಆರೋಪಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಆರೋಪಿ ತನಗೆ ದೊರೆತ ಈ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಬಾರದು, ದೂರುದಾರ ಮಹಿಳೆಯನ್ನು ಸಂಪರ್ಕಿಸುವ ಪ್ರಯತ್ನ ಮಾಡಬಾರದು ಎಂದು ಸೂಚಿಸಿದೆ.</p>.<p>ಪ್ರಕರಣ: ದೂರುದಾರ ಮಹಿಳೆಯು 2021ರಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಆರೋಪಿ ಸಂಪರ್ಕಕ್ಕೆ ಬಂದಿದ್ದರು. ತಾನು ಮಾರಾಟ ಮಾಡುವ ಬಟ್ಟೆಗಳ ಬ್ರ್ಯಾಂಡ್ಗೆ ಪ್ರಚಾರ ನೀಡುವಂತೆ ಕೋರಿದ್ದರು.</p>.<p>‘ಕೆಲ ದಿನಗಳ ನಂತರ, ಭಿನ್ನಾಭಿಪ್ರಾಯಗಳಿಂದಾಗಿ ಆತನೊಂದಿಗಿನ ವ್ಯಾವಹಾರಿಕ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ್ದೆ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.</p>.<p>‘2021ರ ಡಿಸೆಂಬರ್ನಲ್ಲಿ ಕನಾಟ್ ಪ್ಲೇಸ್ಗೆ ತೆರಳಿ, ಬ್ರ್ಯಾಂಡ್ವೊಂದರ ಚಿತ್ರೀಕರಣಕ್ಕೆ ಹೋಗಲು ಆರೋಪಿ ಮನವೊಲಿಸಿದ್ದ. ಪ್ರಯಾಣದ ವೇಳೆ, ಅಮಲು ಬರಿಸುವ ಪದಾರ್ಥಗಳನ್ನು ಲೇಪಿಸಿದ್ದ ಸಿಹಿಖಾದ್ಯಗಳನ್ನು ನೀಡಿದ್ದ. ಅವುಗಳನ್ನು ಸೇವಿಸಿದ ನಂತರ ನನಗೆ ಪ್ರಜ್ಞೆ ತಪ್ಪಿತ್ತು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.</p>.<p>‘ಹಿಂದೂ ರಾವ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ, ಆರೋಪಿಯು ನನ್ನನ್ನು ಆಸ್ಪತ್ರೆ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನನ್ನ ಹಣವನ್ನು ಕದ್ದ. ನಾನು ನಗ್ನಳಾಗಿರುವ ಫೋಟೊಗಳನ್ನು ಸೆರೆಹಿಡಿದ’ ಎಂದೂ ಮಹಿಳೆ ದೂರಿದ್ದಾರೆ.</p>.<p>‘ನಂತರ ನನ್ನನ್ನು ಬಲವಂತದಿಂದ ಜಮ್ಮುವಿಗೆ ಕರೆದುಕೊಂಡು ಹೋಗಿದ್ದಲ್ಲದೇ, ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿ, ಸುಲಿಗೆ ಮಾಡಿದ್ದಾನೆ. ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಬೆದರಿಕೆ ಹಾಕುತ್ತಾ ಬಂದಿದ್ದಾನೆ’ ಎಂದೂ ದೂರಿನಲ್ಲಿ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>