ಬೇಡಿ ಸಮಿತಿ ಸಲ್ಲಿಸಿದ್ದ ಅಂತಿಮ ವರದಿಯಲ್ಲಿ ಗುಜರಾತಿನ ಪೊಲೀಸರು ನಡೆಸಿದ ನಕಲಿ ಎನ್ಕೌಂಟರ್ಗಳಲ್ಲಿ ಸಮೀರ್ ಖಾನ್, ಕಸಮ್ ಜಾಫರ್ ಮತ್ತು ಹಾಜಿ ಇಸ್ಮಾಯಿಲ್ ಎಂಬುವರು ಹತ್ಯೆಯಾಗಿದ್ದಾರೆ ಎಂದು ಉಲ್ಲೇಖಿಸಿದೆ. ಸಮಿತಿಯು ಮೂವರು ಇನ್ಸ್ಪೆಕ್ಟರ್ಗಳು ಸೇರಿದಂತೆ ಒಂಬತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ದೋಷಾರೋಪ ಹೊರಿಸಿದೆ. ಆದರೆ, ಯಾವುದೇ ಐಪಿಎಸ್ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಮಿತಿ ಶಿಫಾರಸು ಮಾಡಿಲ್ಲ.