<p><strong>ನಾಗಪುರ: ‘</strong>2024ರ ಚುನಾವಣೆಗೂ ಮುನ್ನ ನವದೆಹಲಿಯಲ್ಲಿ ನನ್ನನ್ನು ಭೇಟಿಯಾಗಿದ್ದ ಇಬ್ಬರು ವ್ಯಕ್ತಿಗಳು, 288 ವಿಧಾನಸಭಾ ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳನ್ನು (ಮಹಾ ವಿಕಾಸ್ ಅಘಡಿ) ಗೆಲ್ಲಿಸುವ ಖಾತರಿ ನೀಡಿದ್ದರು’ ಎಂದು ಎನ್ಸಿಪಿ (ಎಸ್ಪಿ) ನಾಯಕ ಶರದ್ ಪವಾರ್ ಶನಿವಾರ ಹೇಳಿದ್ದಾರೆ.</p>.<p>‘ಅವರನ್ನು ನಾನು ರಾಹುಲ್ ಗಾಂಧಿ ಅವರಿಗೆ ಪರಿಚಯಿಸಿದೆ. ಅವರು ಹೇಳಿದ ಮಾತನ್ನು ರಾಹುಲ್ ನಿರ್ಲಕ್ಷಿಸಿದರು. ಇಂತಹ ಕೆಲಸಗಳಲ್ಲಿ ನಾವು ತೊಡಗಬಾರದು. ಜನರ ಬಳಿಗೆ ನೇರವಾಗಿ ಹೋಗಿ ಎಂದು ಹೇಳಿದ್ದರು’ ಎಂದು ತಿಳಿಸಿದ್ದಾರೆ.</p>.<p>‘ಆ ಇಬ್ಬರ ಮಾತಿಗೆ ಪ್ರಾಮುಖ್ಯತೆ ನೀಡಲಿಲ್ಲ. ಹೀಗಾಗಿ, ಅವರ ಹೆಸರು ಹಾಗೂ ಸಂಪರ್ಕ ವಿವರಗಳನ್ನು ಪಡೆಯಲಿಲ್ಲ’ ಎಂದಿದ್ದಾರೆ. </p>.<p>ವಿಧಾನಸಭಾ ಚುನಾವಣೆಯಲ್ಲಿ 132 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಮಿತ್ರ ಪಕ್ಷಗಳಾದ ಶಿವಸೇನಾ ಹಾಗೂ ಎನ್ಸಿಪಿ ಕ್ರಮವಾಗಿ 57 ಹಾಗೂ 41 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದವು.</p>.<p><strong>ಪವಾರ್ ಬೆಂಬಲಿಸಿದ ಠಾಕ್ರೆ</strong>: ಶರದ್ ಪವಾರ್ ಅವರ ಹೇಳಿಕೆಯನ್ನು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಬೆಂಬಲಿಸಿದ್ದು, ‘ಚುನಾವಣಾ ಆಯೋಗದ ಕಚೇರಿಯು ಬಿಜೆಪಿ ಕಚೇರಿಯಂತೆ ಕೆಲಸ ಮಾಡುತ್ತಿರುವ ಅನುಭವವಾಗಿದೆ’ ಎಂದು ಹೇಳಿದ್ದಾರೆ.</p>.<p> <strong>ಪವಾರ್ ಹೇಳಿಕೆ ನಿರಾಕರಿಸಿದ ಫಡಣವೀಸ್ </strong></p><p><strong>ಮುಂಬೈ:</strong> ಶರದ್ ಪವಾರ್ ಆರೋಪವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನಿರಾಕರಿಸಿದ್ದಾರೆ. ‘ಮತ ಕಳವು ಕುರಿತು ರಾಹುಲ್ ಗಾಂಧಿ ಆರೋಪಿಸಿದ ಬಳಿಕ ಪವಾರ್ ಅವರು ಈ ವಿಚಾರವನ್ನು ಏಕೆ ಬಹಿರಂಗಪಡಿಸುತ್ತಿದ್ದಾರೆ? ಇವಿಎಂ ಕಾರ್ಯನಿರ್ವಹಣೆ ಬಗ್ಗೆ ರಾಹುಲ್ ನೀಡಿದ್ದ ಹೇಳಿಕೆಯನ್ನು ಪವಾರ್ ಎಂದಿಗೂ ಅನುಮೋದಿಸಿರಲಿಲ್ಲ. ರಾಹುಲ್ ಗಾಂಧಿ ಅವರು ಸಲೀಂ–ಜಾವೇದ್ ರೀತಿ ‘ಸ್ಕ್ರಿಪ್ಟ್ ಕೆಲಸ’ ಮಾಡುತ್ತಿದ್ದಾರೆ. ಪವಾರ್ ಅವರು ಅದೇ ಸ್ಕ್ರಿಪ್ಟ್ ಹೇಳುತ್ತಿದ್ದಾರೆ’ ಎಂದು ಫಡಣವೀಸ್ ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಪುರ: ‘</strong>2024ರ ಚುನಾವಣೆಗೂ ಮುನ್ನ ನವದೆಹಲಿಯಲ್ಲಿ ನನ್ನನ್ನು ಭೇಟಿಯಾಗಿದ್ದ ಇಬ್ಬರು ವ್ಯಕ್ತಿಗಳು, 288 ವಿಧಾನಸಭಾ ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳನ್ನು (ಮಹಾ ವಿಕಾಸ್ ಅಘಡಿ) ಗೆಲ್ಲಿಸುವ ಖಾತರಿ ನೀಡಿದ್ದರು’ ಎಂದು ಎನ್ಸಿಪಿ (ಎಸ್ಪಿ) ನಾಯಕ ಶರದ್ ಪವಾರ್ ಶನಿವಾರ ಹೇಳಿದ್ದಾರೆ.</p>.<p>‘ಅವರನ್ನು ನಾನು ರಾಹುಲ್ ಗಾಂಧಿ ಅವರಿಗೆ ಪರಿಚಯಿಸಿದೆ. ಅವರು ಹೇಳಿದ ಮಾತನ್ನು ರಾಹುಲ್ ನಿರ್ಲಕ್ಷಿಸಿದರು. ಇಂತಹ ಕೆಲಸಗಳಲ್ಲಿ ನಾವು ತೊಡಗಬಾರದು. ಜನರ ಬಳಿಗೆ ನೇರವಾಗಿ ಹೋಗಿ ಎಂದು ಹೇಳಿದ್ದರು’ ಎಂದು ತಿಳಿಸಿದ್ದಾರೆ.</p>.<p>‘ಆ ಇಬ್ಬರ ಮಾತಿಗೆ ಪ್ರಾಮುಖ್ಯತೆ ನೀಡಲಿಲ್ಲ. ಹೀಗಾಗಿ, ಅವರ ಹೆಸರು ಹಾಗೂ ಸಂಪರ್ಕ ವಿವರಗಳನ್ನು ಪಡೆಯಲಿಲ್ಲ’ ಎಂದಿದ್ದಾರೆ. </p>.<p>ವಿಧಾನಸಭಾ ಚುನಾವಣೆಯಲ್ಲಿ 132 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಮಿತ್ರ ಪಕ್ಷಗಳಾದ ಶಿವಸೇನಾ ಹಾಗೂ ಎನ್ಸಿಪಿ ಕ್ರಮವಾಗಿ 57 ಹಾಗೂ 41 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದವು.</p>.<p><strong>ಪವಾರ್ ಬೆಂಬಲಿಸಿದ ಠಾಕ್ರೆ</strong>: ಶರದ್ ಪವಾರ್ ಅವರ ಹೇಳಿಕೆಯನ್ನು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಬೆಂಬಲಿಸಿದ್ದು, ‘ಚುನಾವಣಾ ಆಯೋಗದ ಕಚೇರಿಯು ಬಿಜೆಪಿ ಕಚೇರಿಯಂತೆ ಕೆಲಸ ಮಾಡುತ್ತಿರುವ ಅನುಭವವಾಗಿದೆ’ ಎಂದು ಹೇಳಿದ್ದಾರೆ.</p>.<p> <strong>ಪವಾರ್ ಹೇಳಿಕೆ ನಿರಾಕರಿಸಿದ ಫಡಣವೀಸ್ </strong></p><p><strong>ಮುಂಬೈ:</strong> ಶರದ್ ಪವಾರ್ ಆರೋಪವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನಿರಾಕರಿಸಿದ್ದಾರೆ. ‘ಮತ ಕಳವು ಕುರಿತು ರಾಹುಲ್ ಗಾಂಧಿ ಆರೋಪಿಸಿದ ಬಳಿಕ ಪವಾರ್ ಅವರು ಈ ವಿಚಾರವನ್ನು ಏಕೆ ಬಹಿರಂಗಪಡಿಸುತ್ತಿದ್ದಾರೆ? ಇವಿಎಂ ಕಾರ್ಯನಿರ್ವಹಣೆ ಬಗ್ಗೆ ರಾಹುಲ್ ನೀಡಿದ್ದ ಹೇಳಿಕೆಯನ್ನು ಪವಾರ್ ಎಂದಿಗೂ ಅನುಮೋದಿಸಿರಲಿಲ್ಲ. ರಾಹುಲ್ ಗಾಂಧಿ ಅವರು ಸಲೀಂ–ಜಾವೇದ್ ರೀತಿ ‘ಸ್ಕ್ರಿಪ್ಟ್ ಕೆಲಸ’ ಮಾಡುತ್ತಿದ್ದಾರೆ. ಪವಾರ್ ಅವರು ಅದೇ ಸ್ಕ್ರಿಪ್ಟ್ ಹೇಳುತ್ತಿದ್ದಾರೆ’ ಎಂದು ಫಡಣವೀಸ್ ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>