ರಾಜ್ಯಪಾಲರು ಅಲಭ್ಯರಾಗಿದ್ದರೂ, ಆಜಾದ್ ಮೈದಾನದಲ್ಲಿ ನಡೆದ ಸಭೆಯ ನಂತರ, ರೈತರು ರಾಜಭವನಕ್ಕೆ ಮೆರವಣಿಗೆ ಪ್ರಾರಂಭಿಸಿದರು. ಮೆಟ್ರೊ ಸಿನಿಮಾ ಚೌಕದಲ್ಲಿ ಅವರನ್ನು ತಡೆಯಲಾಯಿತು. ರಾಜ್ಯಪಾಲರ ಕಾರ್ಯದರ್ಶಿಯನ್ನು ಭೇಟಿ ಮಾಡಿ ಮನವಿ ನೀಡುವ ಬದಲು ಅದನ್ನು ಹರಿದು ಹಾಕಿದರು. ಹೊಸ ಮನವಿಪತ್ರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಕಳುಹಿಸಿದರು.