<p><strong>ಕೋಯಿಕ್ಕೋಡ್ (ಕೇರಳ):</strong> ‘ಕಾಂಗ್ರೆಸ್ ಪಕ್ಷದ ಜೊತೆ ನನಗೆ ಕೆಲ ವಿಷಯಗಳ ಕುರಿತು ಸಮಸ್ಯೆಗಳಿವೆ. ಅವುಗಳ ಕುರಿತು ನಾಯಕರ ಗಮನಕ್ಕೆ ತರುವೆ. ಆದರೆ, ಸಂಸತ್ನಲ್ಲಿ ಪಕ್ಷದ ನಿಲುವುಗಳನ್ನು ಎಂದಿಗೂ ವಿರೋಧಿಸಿಲ್ಲ. ಆದರೆ, ಆಪರೇಷನ್ ಸಿಂಧೂರ ಬಗ್ಗೆ ಮಾತ್ರ ಸಾರ್ವಜನಿಕವಾಗಿ ಪಕ್ಷದ ನಿಲುವು ಒಪ್ಪಿರಲಿಲ್ಲ’ ಎಂದು ಸಂಸದ ಶಶಿ ತರೂರ್ ಶನಿವಾರ ತಿಳಿಸಿದ್ದಾರೆ.</p><p>‘ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳನ್ನು ಪಕ್ಷದ ಒಳಗೆ ಚರ್ಚಿಸಬೇಕು. ಮಾಧ್ಯಮಗಳ ಮೂಲಕ ಅಲ್ಲ. ಸಂಸತ್ ಅಧಿವೇಶನಕ್ಕಾಗಿ ನಾನು ದೆಹಲಿಗೆ ಹೋಗುತ್ತೇನೆ. ಅಲ್ಲಿ ಪಕ್ಷದ ನಾಯಕರಿಗೆ ನನ್ನ ಕಳಕಳಿ, ಅಭಿಪ್ರಾಯವನ್ನು ಸ್ಪಷ್ಟಪಡಿಸುತ್ತೇನೆ. ಅವರ ಅಭಿಪ್ರಾಯವನ್ನು ತಿಳಿದುಕೊಳ್ಳಲು ನನಗೆ ಅವಕಾಶ ಸಿಗುತ್ತದೆ ಎಂಬ ನಂಬಿಕೆ ಇದೆ. ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.</p><p>’ನಾನು ಕಳೆದ 17 ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದೇನೆ. ಏನೇ ತಪ್ಪಾಗಿದ್ದರೂ ಅದನ್ನು ಸರಿಪಡಿಸಬೇಕಾಗಿದೆ ಮತ್ತು ಅದನ್ನು ಸೂಕ್ತ ವೇದಿಕೆಯಲ್ಲಿ ಸರಿಪಡಿಸಲಾಗುವುದು’ ಎಂದಿದ್ದಾರೆ.</p><p>’ನನ್ನ ಬಗ್ಗೆ ಪ್ರಕಟವಾಗಿರುವ ಕೆಲವು ವರದಿಗಳು ಸತ್ಯವಾಗಿರಬಹುದು ಮತ್ತು ಕೆಲವು ಸುಳ್ಳಾಗಿರಬಹುದು‘ ಎಂದು ಹೇಳಿದರು.</p><p>ಕೊಚ್ಚಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಶಶಿ ತರೂರ್ ಅವರನ್ನು ರಾಹುಲ್ ಗಾಂಧಿ ಅವರು ಕಡೆಗಣಿಸಿದ್ದರು ಎಂದು ವರದಿಯಾಗಿತ್ತು. ಜತೆಗೆ, ಪಕ್ಷದ ರಾಜ್ಯ ಘಟಕದ ನಾಯಕರು ಸಹ ತಮ್ಮನ್ನು ಪದೇ ಪದೇ ಕಡೆಗಣಿಸಲು ಪ್ರಯತ್ನಿಸಿರುವುದರಿಂದ ತರೂರ್ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳು ಪ್ರಕಟಗೊಂಡ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.</p><p>‘ಆಪರೇಷನ್ ಸಿಂಧೂರ ವಿಚಾರ– ವಿಷಾದ ಇಲ್ಲ’: </p><p>ಕೇರಳ ಸಾಹಿತ್ಯ ಉತ್ಸವದ ಗೋಷ್ಠಿಯಲ್ಲಿ ಮಾತನಾಡಿದ ತರೂರ್, ‘ಆಪರೇಷನ್ ಸಿಂಧೂರ ವಿಚಾರದಲ್ಲಿ ಕಠಿಣ ನಿಲವು ತೆಗೆದುಕೊಂಡಿದ್ದೆ ಮತ್ತು ಈ ಬಗ್ಗೆ ನನಗೆ ಯಾವುದೇ ವಿಷಾದ ಇಲ್ಲ’ ಎಂದು ಹೇಳಿದ್ದಾರೆ.</p><p>’ಪಹಲ್ಗಾಮ್ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ ನಂತರ ದಿನಪತ್ರಿಕೆಗೆ ಅಂಕಣ ಬರೆದಿದ್ದೆ. ಈ ಕೃತ್ಯವು ಶಿಕ್ಷೆಗೆ ಅರ್ಹವಾದದ್ದು. ಸೇನಾ ಕಾರ್ಯಾಚರಣೆ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ಹೇಳಿದ್ದೆ.</p><p>‘ಭಾರತವು ಅಭಿವೃದ್ಧಿ ಕಡೆ ಕೇಂದ್ರೀಕರಿಸಿದ್ದರೂ ಪಾಕಿಸ್ತಾನದೊಂದಿಗಿನ ದೀರ್ಘಕಾಲದ ಸಂಘರ್ಷಕ್ಕೆ ಅದನ್ನು ಎಳೆಯಬಾರದು. ಯಾವುದೇ ಕ್ರಮವು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸುವುದಕ್ಕೆ ಸೀಮಿತವಾಗಿರಬೇಕು ಎಂದು ಹೇಳಿದ್ದೆ. ಅದನ್ನೇ ಕೇಂದ್ರ ಸರ್ಕಾರ ಮಾಡಿತು. ಇದು ನನಗೆ ಆಶ್ಚರ್ಯ ತಂದಿತು’ ಎಂದು ತಿಳಿಸಿದ್ದಾರೆ.</p><p>‘ನಾನೇ ಮಾಡಿದ ಶಿಫಾರಸು ಕುರಿತು ನಾನೇ ಟೀಕಿಸಬೇಕು ಎಂಬುದನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಾಗೂ ಆ ನಂತರವೂ ನಾನು ಅದನ್ನು ಸಂಪೂರ್ಣವಾಗಿ ಬೆಂಬಲಿಸಿದೆ’ ಎಂದಿದ್ದಾರೆ.</p><p>ಕೇಂದ್ರ ಸರ್ಕಾರವು ಆಪರೇಷನ್ ಸಿಂಧೂರದ ನಂತರ ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ ವಿದೇಶಗಳಿಗೆ ಕಳುಹಿಸಿದ್ದ ಸರ್ವ ಪಕ್ಷಗಳ ನಿಯೋಗದಲ್ಲಿ ತರೂರ್ ಸಹ ಇದ್ದರು. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಯಿಕ್ಕೋಡ್ (ಕೇರಳ):</strong> ‘ಕಾಂಗ್ರೆಸ್ ಪಕ್ಷದ ಜೊತೆ ನನಗೆ ಕೆಲ ವಿಷಯಗಳ ಕುರಿತು ಸಮಸ್ಯೆಗಳಿವೆ. ಅವುಗಳ ಕುರಿತು ನಾಯಕರ ಗಮನಕ್ಕೆ ತರುವೆ. ಆದರೆ, ಸಂಸತ್ನಲ್ಲಿ ಪಕ್ಷದ ನಿಲುವುಗಳನ್ನು ಎಂದಿಗೂ ವಿರೋಧಿಸಿಲ್ಲ. ಆದರೆ, ಆಪರೇಷನ್ ಸಿಂಧೂರ ಬಗ್ಗೆ ಮಾತ್ರ ಸಾರ್ವಜನಿಕವಾಗಿ ಪಕ್ಷದ ನಿಲುವು ಒಪ್ಪಿರಲಿಲ್ಲ’ ಎಂದು ಸಂಸದ ಶಶಿ ತರೂರ್ ಶನಿವಾರ ತಿಳಿಸಿದ್ದಾರೆ.</p><p>‘ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳನ್ನು ಪಕ್ಷದ ಒಳಗೆ ಚರ್ಚಿಸಬೇಕು. ಮಾಧ್ಯಮಗಳ ಮೂಲಕ ಅಲ್ಲ. ಸಂಸತ್ ಅಧಿವೇಶನಕ್ಕಾಗಿ ನಾನು ದೆಹಲಿಗೆ ಹೋಗುತ್ತೇನೆ. ಅಲ್ಲಿ ಪಕ್ಷದ ನಾಯಕರಿಗೆ ನನ್ನ ಕಳಕಳಿ, ಅಭಿಪ್ರಾಯವನ್ನು ಸ್ಪಷ್ಟಪಡಿಸುತ್ತೇನೆ. ಅವರ ಅಭಿಪ್ರಾಯವನ್ನು ತಿಳಿದುಕೊಳ್ಳಲು ನನಗೆ ಅವಕಾಶ ಸಿಗುತ್ತದೆ ಎಂಬ ನಂಬಿಕೆ ಇದೆ. ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.</p><p>’ನಾನು ಕಳೆದ 17 ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದೇನೆ. ಏನೇ ತಪ್ಪಾಗಿದ್ದರೂ ಅದನ್ನು ಸರಿಪಡಿಸಬೇಕಾಗಿದೆ ಮತ್ತು ಅದನ್ನು ಸೂಕ್ತ ವೇದಿಕೆಯಲ್ಲಿ ಸರಿಪಡಿಸಲಾಗುವುದು’ ಎಂದಿದ್ದಾರೆ.</p><p>’ನನ್ನ ಬಗ್ಗೆ ಪ್ರಕಟವಾಗಿರುವ ಕೆಲವು ವರದಿಗಳು ಸತ್ಯವಾಗಿರಬಹುದು ಮತ್ತು ಕೆಲವು ಸುಳ್ಳಾಗಿರಬಹುದು‘ ಎಂದು ಹೇಳಿದರು.</p><p>ಕೊಚ್ಚಿಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಶಶಿ ತರೂರ್ ಅವರನ್ನು ರಾಹುಲ್ ಗಾಂಧಿ ಅವರು ಕಡೆಗಣಿಸಿದ್ದರು ಎಂದು ವರದಿಯಾಗಿತ್ತು. ಜತೆಗೆ, ಪಕ್ಷದ ರಾಜ್ಯ ಘಟಕದ ನಾಯಕರು ಸಹ ತಮ್ಮನ್ನು ಪದೇ ಪದೇ ಕಡೆಗಣಿಸಲು ಪ್ರಯತ್ನಿಸಿರುವುದರಿಂದ ತರೂರ್ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳು ಪ್ರಕಟಗೊಂಡ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.</p><p>‘ಆಪರೇಷನ್ ಸಿಂಧೂರ ವಿಚಾರ– ವಿಷಾದ ಇಲ್ಲ’: </p><p>ಕೇರಳ ಸಾಹಿತ್ಯ ಉತ್ಸವದ ಗೋಷ್ಠಿಯಲ್ಲಿ ಮಾತನಾಡಿದ ತರೂರ್, ‘ಆಪರೇಷನ್ ಸಿಂಧೂರ ವಿಚಾರದಲ್ಲಿ ಕಠಿಣ ನಿಲವು ತೆಗೆದುಕೊಂಡಿದ್ದೆ ಮತ್ತು ಈ ಬಗ್ಗೆ ನನಗೆ ಯಾವುದೇ ವಿಷಾದ ಇಲ್ಲ’ ಎಂದು ಹೇಳಿದ್ದಾರೆ.</p><p>’ಪಹಲ್ಗಾಮ್ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ ನಂತರ ದಿನಪತ್ರಿಕೆಗೆ ಅಂಕಣ ಬರೆದಿದ್ದೆ. ಈ ಕೃತ್ಯವು ಶಿಕ್ಷೆಗೆ ಅರ್ಹವಾದದ್ದು. ಸೇನಾ ಕಾರ್ಯಾಚರಣೆ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ಹೇಳಿದ್ದೆ.</p><p>‘ಭಾರತವು ಅಭಿವೃದ್ಧಿ ಕಡೆ ಕೇಂದ್ರೀಕರಿಸಿದ್ದರೂ ಪಾಕಿಸ್ತಾನದೊಂದಿಗಿನ ದೀರ್ಘಕಾಲದ ಸಂಘರ್ಷಕ್ಕೆ ಅದನ್ನು ಎಳೆಯಬಾರದು. ಯಾವುದೇ ಕ್ರಮವು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸುವುದಕ್ಕೆ ಸೀಮಿತವಾಗಿರಬೇಕು ಎಂದು ಹೇಳಿದ್ದೆ. ಅದನ್ನೇ ಕೇಂದ್ರ ಸರ್ಕಾರ ಮಾಡಿತು. ಇದು ನನಗೆ ಆಶ್ಚರ್ಯ ತಂದಿತು’ ಎಂದು ತಿಳಿಸಿದ್ದಾರೆ.</p><p>‘ನಾನೇ ಮಾಡಿದ ಶಿಫಾರಸು ಕುರಿತು ನಾನೇ ಟೀಕಿಸಬೇಕು ಎಂಬುದನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಾಗೂ ಆ ನಂತರವೂ ನಾನು ಅದನ್ನು ಸಂಪೂರ್ಣವಾಗಿ ಬೆಂಬಲಿಸಿದೆ’ ಎಂದಿದ್ದಾರೆ.</p><p>ಕೇಂದ್ರ ಸರ್ಕಾರವು ಆಪರೇಷನ್ ಸಿಂಧೂರದ ನಂತರ ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ ವಿದೇಶಗಳಿಗೆ ಕಳುಹಿಸಿದ್ದ ಸರ್ವ ಪಕ್ಷಗಳ ನಿಯೋಗದಲ್ಲಿ ತರೂರ್ ಸಹ ಇದ್ದರು. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>