<p><strong>ಮುಂಬೈ</strong>: ‘ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯಲ್ಲಿ ಬಿಜೆಪಿಯ ಮೇಯರ್ ಇರುವುದನ್ನು ಏಕನಾಥ ಶಿಂದೆ ಹಾಗೂ ಆವರ ಪಕ್ಷದ ಚುನಾಯಿತ ಸದಸ್ಯರು ಬಯಸುತ್ತಿಲ್ಲ’ ಎಂದು ಶಿವಸೇನಾ(ಯುಬಿಟಿ) ರಾಜ್ಯಸಭಾ ಸಂಸದ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.</p>.<p>ಬಿಎಂಸಿಗೆ ಚುನಾವಣೆಯ ಫಲಿತಾಂಶ ಬಳಿಕ, ಶಿಂದೆ ನೇತೃತ್ವದ ಶಿವಸೇನಾ ತನ್ನ ನೂತನ ಚುನಾಯಿತ ಸದಸ್ಯರನ್ನು ಹೋಟೆಲ್ವೊಂದಕ್ಕೆ ಸ್ಥಳಾಂತರಿದೆ. ಈ ಬೆಳವಣಿಗೆ ಬೆನ್ನಲ್ಲೇ ರಾವುತ್ ಈ ಹೇಳಿಕೆ ನೀಡಿದ್ದಾರೆ.</p>.<p>‘ತೆರೆಮರೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಕಾರ್ಪೋರೇಟರ್ಗಳನ್ನು ಹೋಟೆಲ್ನಲ್ಲಿ ಕೂಡಿಹಾಕಿದ್ದರೂ, ಸಂದೇಶ ರವಾನಿಸಲು ಹಾಗೂ ಸ್ವೀಕರಿಸಲು ಬೇರೆ ಮೂಲಗಳು ಇವೆ’ ಎಂದು ಹೇಳಿದ್ದಾರೆ. ಹೀಗಾಗಿ, ರಾವುತ್ ಹೇಳಿಕೆ ಈಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.</p>.<p> <strong>ಪರಭಣಿ: ಒಂದು ಮತದಿಂದ ಗೆಲುವು </strong></p><p>ಛತ್ರಪತಿ ಸಂಭಾಜಿನಗರ: ಪರಭಣಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನಾ(ಯುಬಿಟಿ) ಅಭ್ಯರ್ಥಿ ವೆಂಕಟ ದಹಾಳೆ ಅವರು ಕೇವಲ ಒಂದು ಮತ ಅಂತರದಿಂದ ಗೆದ್ದಿದ್ದಾರೆ. ದಹಾಳೆ 4312 ಮತ ಪಡೆದಿದ್ದು ಪ್ರತಿಸ್ಪರ್ಧಿ ಬಿಜೆಪಿಯ ಪ್ರಸಾದ್ ನಗರೆ 4311 ಮತಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ‘ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯಲ್ಲಿ ಬಿಜೆಪಿಯ ಮೇಯರ್ ಇರುವುದನ್ನು ಏಕನಾಥ ಶಿಂದೆ ಹಾಗೂ ಆವರ ಪಕ್ಷದ ಚುನಾಯಿತ ಸದಸ್ಯರು ಬಯಸುತ್ತಿಲ್ಲ’ ಎಂದು ಶಿವಸೇನಾ(ಯುಬಿಟಿ) ರಾಜ್ಯಸಭಾ ಸಂಸದ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.</p>.<p>ಬಿಎಂಸಿಗೆ ಚುನಾವಣೆಯ ಫಲಿತಾಂಶ ಬಳಿಕ, ಶಿಂದೆ ನೇತೃತ್ವದ ಶಿವಸೇನಾ ತನ್ನ ನೂತನ ಚುನಾಯಿತ ಸದಸ್ಯರನ್ನು ಹೋಟೆಲ್ವೊಂದಕ್ಕೆ ಸ್ಥಳಾಂತರಿದೆ. ಈ ಬೆಳವಣಿಗೆ ಬೆನ್ನಲ್ಲೇ ರಾವುತ್ ಈ ಹೇಳಿಕೆ ನೀಡಿದ್ದಾರೆ.</p>.<p>‘ತೆರೆಮರೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಕಾರ್ಪೋರೇಟರ್ಗಳನ್ನು ಹೋಟೆಲ್ನಲ್ಲಿ ಕೂಡಿಹಾಕಿದ್ದರೂ, ಸಂದೇಶ ರವಾನಿಸಲು ಹಾಗೂ ಸ್ವೀಕರಿಸಲು ಬೇರೆ ಮೂಲಗಳು ಇವೆ’ ಎಂದು ಹೇಳಿದ್ದಾರೆ. ಹೀಗಾಗಿ, ರಾವುತ್ ಹೇಳಿಕೆ ಈಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.</p>.<p> <strong>ಪರಭಣಿ: ಒಂದು ಮತದಿಂದ ಗೆಲುವು </strong></p><p>ಛತ್ರಪತಿ ಸಂಭಾಜಿನಗರ: ಪರಭಣಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನಾ(ಯುಬಿಟಿ) ಅಭ್ಯರ್ಥಿ ವೆಂಕಟ ದಹಾಳೆ ಅವರು ಕೇವಲ ಒಂದು ಮತ ಅಂತರದಿಂದ ಗೆದ್ದಿದ್ದಾರೆ. ದಹಾಳೆ 4312 ಮತ ಪಡೆದಿದ್ದು ಪ್ರತಿಸ್ಪರ್ಧಿ ಬಿಜೆಪಿಯ ಪ್ರಸಾದ್ ನಗರೆ 4311 ಮತಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>