ಮಹಾರಾಷ್ಟ್ರದ ಮರಾಠವಾಡದ ವಿಭಾಗೀಯ ಕ್ಷೇತ್ರವಾದ ಔರಂಗಬಾದ್, ರಾಜ್ಯದ ಪ್ರವಾಸೋದ್ಯಮ ರಾಜಧಾನಿಯಾಗಿದ್ದು, ಈ ನಗರದ ಹೆಸರನ್ನು ಬದಲಿಸಬೇಕು ಎನ್ನುವುದು ಶಿವಸೇನಾದ ಬಹು ದಿನಗಳಿಂದ ಬೇಡಿಕೆ ಇಟ್ಟಿತ್ತು. ಈಗ ಆ ಬೇಡಿಕೆಗೆ ಮೈತ್ರಿ ಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಸದ್ಯ ಔರಂಗಬಾದ್ ಮುನ್ಸಿಪಲ್ ಕಾರ್ಪೊರೇಷನ್(ಎಎಂಸಿ) ಚುನಾವಣೆ ಕೂಡ ಬಾಕಿ ಇರುವುದರಿಂದ, ಈ ವಿಚಾರ ಮತ್ತೆ ಮಹತ್ವ ಪಡೆದುಕೊಂಡಿದೆ.