‘ಪಕ್ಷದ ಮುಖಂಡ ವೀರೇಂದ್ರ ರಘುವಂಶಿಗೆ ಟಿಕೆಟ್ ಕೊಡುವ ವಿಚಾರವನ್ನು ದಿಗ್ವಿಜಯ್ ಮತ್ತು ಅವರ ಮಗನಿಗೆ ಬಿಟ್ಟಿದ್ದೇನೆ. ಟಿಕೆಟ್ ಹಿಂಚಿಕೆ ವಿಚಾರದಲ್ಲಿ ಆಗಿರುವ ಗೊಂದಲವನ್ನು ದಿಗ್ವಿಜಯ್ ಬಳಿ ಅವರ ಬಟ್ಟೆ ಹರಿದು ಕೇಳಿ’ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ನಾಥ್ ಅವರು ರಘುವಂಶಿ ಬೆಂಬಲಿಗರಿಗೆ ಹೇಳುತ್ತಿರುವ ವಿಡಿಯೊ ಈಗ ಬಹಿರಂಗವಾಗಿದೆ.