<p><strong>ಕೊಚ್ಚಿ</strong>: ಕೇರಳದ ಕರಾವಳಿಯಲ್ಲಿ ‘ಎಂವಿ ವಾನ್ ಹೈ 503’ ಸರಕು ಸಾಗಣೆ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿ ನಿಯಂತ್ರಣಕ್ಕೆ ಕಾರ್ಯಾಚರಣೆ ಮುಂದುವರಿದಿದ್ದು, ಶನಿವಾರ ಟೋಯಿಂಗ್ ಮೂಲಕ ಹಡಗನ್ನು ಸಮುದ್ರದಲ್ಲಿ 40 ನಾಟಿಕಲ್ ಮೈಲು ದೂರದವರೆಗೆ ಸಾಗಿಸಲಾಯಿತು’ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ. </p>.<p>ಸಿಂಗಪುರ ಧ್ವಜ ಹೊಂದಿದ್ದ ಈ ಹಡಗು, ಕೊಲಂಬೊದಿಂದ ಮುಂಬೈಗೆ ಬರುವ ದಾರಿಯಲ್ಲಿ ಕೇರಳದ ಕರಾವಳಿಯಲ್ಲಿ ಕಂಟೇನರ್ ಸ್ಫೋಟಗೊಂಡು ಬೆಂಕಿ ಅವಘಡಕ್ಕೆ ಸಿಲುಕಿತ್ತು. ಕೇರಳ ಕರಾವಳಿಯಿಂದ 27 ನಾಟಿಕಲ್ ಮೈಲು ದೂರದಲ್ಲಿದ್ದ ಈ ಹಡಗನ್ನು ಟೋಯಿಂಗ್ ಕಾರ್ಯಾಚರಣೆ ನಡೆಸಿ ಇನ್ನಷ್ಟು ದೂರಕ್ಕೆ ಸಾಗಿಸಲಾಯಿತು.</p>.<p>‘ಪ್ರತಿಕೂಲ ಹವಾಮಾನ ಪರಿಸ್ಥಿತಿಯ ನಡುವೆಯೇ ಟೋಯಿಂಗ್ ನಡೆಯಿತು. ಕರಾವಳಿ ಕಾವಲು ಪಡೆಯ ಸಾಕ್ಷಂ, ಸಮರ್ಥ್, ವಿಕ್ರಮ್ ಮತ್ತು ನೌಕಾಪಡೆಯ ಶಾರದಾ ಹಡಗುಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು. ಹಡಗಿನ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿಯಲಿದೆ. ಕರಾವಳಿ ಕಾವಲು ಪಡೆಯು, ನೌಕಾ ನಿರ್ದೇಶನಾಲಯದ ಸಹಯೋಗದಲ್ಲಿ ಈ ಹಡಗು ತೀರದಿಂದ ಕನಿಷ್ಠ 50 ನಾಟಿಕಲ್ ಮೈಲು ದೂರದಲ್ಲಿ ಇರುವಂತೆ ನೋಡಿಕೊಳ್ಳಲಿದೆ’ ’ ಎಂದು ಪ್ರಕಟಣೆ ತಿಳಿಸಿದೆ. </p>.<p>‘22 ಮಂದಿ ಸಿಬ್ಬಂದಿ ಹಡಗಿನಲ್ಲಿದ್ದರು. ಇವರಲ್ಲಿ 18 ಜನರನ್ನು ರಕ್ಷಿಸಲಾಗಿದೆ. ಉಳಿದ ನಾಲ್ವರು ನಾಪತ್ತೆಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ</strong>: ಕೇರಳದ ಕರಾವಳಿಯಲ್ಲಿ ‘ಎಂವಿ ವಾನ್ ಹೈ 503’ ಸರಕು ಸಾಗಣೆ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿ ನಿಯಂತ್ರಣಕ್ಕೆ ಕಾರ್ಯಾಚರಣೆ ಮುಂದುವರಿದಿದ್ದು, ಶನಿವಾರ ಟೋಯಿಂಗ್ ಮೂಲಕ ಹಡಗನ್ನು ಸಮುದ್ರದಲ್ಲಿ 40 ನಾಟಿಕಲ್ ಮೈಲು ದೂರದವರೆಗೆ ಸಾಗಿಸಲಾಯಿತು’ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ. </p>.<p>ಸಿಂಗಪುರ ಧ್ವಜ ಹೊಂದಿದ್ದ ಈ ಹಡಗು, ಕೊಲಂಬೊದಿಂದ ಮುಂಬೈಗೆ ಬರುವ ದಾರಿಯಲ್ಲಿ ಕೇರಳದ ಕರಾವಳಿಯಲ್ಲಿ ಕಂಟೇನರ್ ಸ್ಫೋಟಗೊಂಡು ಬೆಂಕಿ ಅವಘಡಕ್ಕೆ ಸಿಲುಕಿತ್ತು. ಕೇರಳ ಕರಾವಳಿಯಿಂದ 27 ನಾಟಿಕಲ್ ಮೈಲು ದೂರದಲ್ಲಿದ್ದ ಈ ಹಡಗನ್ನು ಟೋಯಿಂಗ್ ಕಾರ್ಯಾಚರಣೆ ನಡೆಸಿ ಇನ್ನಷ್ಟು ದೂರಕ್ಕೆ ಸಾಗಿಸಲಾಯಿತು.</p>.<p>‘ಪ್ರತಿಕೂಲ ಹವಾಮಾನ ಪರಿಸ್ಥಿತಿಯ ನಡುವೆಯೇ ಟೋಯಿಂಗ್ ನಡೆಯಿತು. ಕರಾವಳಿ ಕಾವಲು ಪಡೆಯ ಸಾಕ್ಷಂ, ಸಮರ್ಥ್, ವಿಕ್ರಮ್ ಮತ್ತು ನೌಕಾಪಡೆಯ ಶಾರದಾ ಹಡಗುಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು. ಹಡಗಿನ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿಯಲಿದೆ. ಕರಾವಳಿ ಕಾವಲು ಪಡೆಯು, ನೌಕಾ ನಿರ್ದೇಶನಾಲಯದ ಸಹಯೋಗದಲ್ಲಿ ಈ ಹಡಗು ತೀರದಿಂದ ಕನಿಷ್ಠ 50 ನಾಟಿಕಲ್ ಮೈಲು ದೂರದಲ್ಲಿ ಇರುವಂತೆ ನೋಡಿಕೊಳ್ಳಲಿದೆ’ ’ ಎಂದು ಪ್ರಕಟಣೆ ತಿಳಿಸಿದೆ. </p>.<p>‘22 ಮಂದಿ ಸಿಬ್ಬಂದಿ ಹಡಗಿನಲ್ಲಿದ್ದರು. ಇವರಲ್ಲಿ 18 ಜನರನ್ನು ರಕ್ಷಿಸಲಾಗಿದೆ. ಉಳಿದ ನಾಲ್ವರು ನಾಪತ್ತೆಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>