ಬಾಮ್ಡಿಲಾದಲ್ಲಿ ನಡೆದ ಬುದ್ಧ ಮಹೋತ್ಸವ ಉತ್ಸವದಲ್ಲಿ ನಾಗರಿಕರು ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಯೋಧರ ಗುಂಪು ಅಸಭ್ಯವಾಗಿ ವರ್ತಿಸಿದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಸ್ಥಳೀಯ ಠಾಣೆಯ ಅಧಿಕಾರಿ ಸ್ಥಳಕ್ಕೆ ತೆರಳಿ ಇಬ್ಬರು ಯೋಧರನ್ನು ಪೊಲೀಸ್ ಠಾಣೆಗೆ ಕರೆತಂದಿದ್ದರು. ಇದಕ್ಕೆ ಕೆರಳಿದ ಯೋಧರು, ಬಾಮ್ಡಿಲಾ ಠಾಣೆ ಧ್ವಂಸಗೊಳಿಸಿ, ಪೊಲೀಸರು ಹಾಗೂ ಕೆಲವು ನಾಗರಿಕರ ಮೇಲೆ ಹಲ್ಲೆ ನಡೆಸಿದ್ದರು.