ಮಂಗಳವಾರ ಸುರಿದ ಮಳೆಗೆ ಇಲ್ಲಿನ ವಸತಿ ಸಂಕೀರ್ಣ ಸಂಪೂರ್ಣಗಿ ನೀರಿನಿಂದ ಆವೃತವಾಗಿತ್ತು. ಇಲ್ಲಿನ ಫ್ಲಾಟ್ಗಳಲ್ಲಿ 500ಕ್ಕೂ ಹೆಚ್ಚು ಜನರು ವಾಸವಾಗಿದ್ದರು. ಫ್ಲಾಟ್ನಿಂದ ಹೊರ ಬರಲಾಗದೇ ಅವರು ಪರದಾಡುತ್ತಿದ್ದರು. ಈ ವೇಳೆ ರಾಜ್ಯ ಸರ್ಕಾರದ ಸಹಾಯವಾಣಿಗೆ ನಾಗರಿಕರೊಬ್ಬರು ಕರೆ ಮಾಡಿದ್ದರು. ಒಂದು ಗಂಟೆಯ ಬಳಿಕ ಎರಡು ದೋಣಿಗಳಲ್ಲಿ ಆಗಮಿಸಿದ ರಕ್ಷಣಾ ಕಾರ್ಯಕರ್ತರ ತಮ್ಮಿಂದ ಸಾಧ್ಯವಾಗದಿದ್ದಾಗ ಸೇನಾ ಪಡೆಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.