<p><strong>ಬಾರಾಬಂಕಿ:</strong> ಶಾಸಕ, ಸಂಸದರು ಸರ್ಕಾರಿ ಅಧಿಕಾರಿಗಳಿಗೆ 'ಸರ್' ಎಂದು ಸಂಬೋಧಿಸಿ ಗೌರವ ತೋರಿಸುವವರನ್ನು ಬಿಜೆಪಿ ಸಂಸದ ಬೃಜಭೂಷಣ್ ಶರಣ್ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ. ಜನಪ್ರತಿನಿಧಿಗಳಾಗಿ ಆಯ್ಕೆಗೊಂಡ ಮೇಲೂ ಕೆಲವರು ತಮ್ಮ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಎಂದು ಟೀಕಿಸಿದ್ದಾರೆ.</p>.<p>ಉತ್ತರ ಪ್ರದೇಶದ ಕೈಸರ್ಗಂಜ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬೃಜಭೂಷಣ್, ಕೆಲವು ನಾಯಕರು ಅಧಿಕಾರಿಗಳ ಕಾಲಿಗೂ ಬೀಳುತ್ತಾರೆ ಎಂದು ಆರೋಪಿಸಿದ್ದಾರೆ.</p>.<p>ಉತ್ತರ ಪ್ರದೇಶದ ಮಾಜಿ ಸಚಿವ ಅರವಿಂದ್ ಸಿಂಗ್ 'ಗೊಪೆ' ಅವರ ಸಹೋದರ ಅಶೋಕ್ ಸಿಂಗ್ ಅವರ ಸಾವಿಗೆ ಸಂತಾಪ ಸೂಚಿಸಲು ಬಾರಬಂಕಿಗೆ ಬಂದಿದ್ದ ಸಂದರ್ಭ ಈ ಹೇಳಿಕೆ ನೀಡಿದ್ದಾರೆ.</p>.<p>ಮೊದಲೆಲ್ಲ ನಾಯಕರೆಂದರೆ ಚಳುವಳಿ ಮೂಲಕ ಅಥವಾ ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಹೋರಾಟ ನಡೆಸಿದವರಾಗಿರುತ್ತಿದ್ದರು. ಆದರೆ ಈಗ ಅಂತಹದ್ದೆಲ್ಲವೂ ನಿಂತಿದೆ. ಅಂತಹ ನಾಯಕರ ಸಂಖ್ಯೆ ಕ್ಷೀಣಿಸಿದೆ. ಈಗ ಪದನಿಮಿತ್ತ ನಾಯಕರು ಮೇಲೆ ಬರುತ್ತಿದ್ದಾರೆ ಎಂದು ಬೃಜಭೂಷಣ್ ಹೇಳಿದ್ದಾರೆ.</p>.<p>ಇಂತಹ ಪದನಿಮಿತ್ತ ನಾಯಕರು ಶಾಸಕರಾಗಿ ಆಯ್ಕಗೊಳ್ಳುತ್ತಾರೆ, ಆದರೆ ಅವರಿಗೆ ಧೈರ್ಯ ಇರುವುದಿಲ್ಲ. ಅವರು ಸಂಸದರೂ ಆಗುತ್ತಾರೆ, ಆದರೆ ಅಧಿಕಾರಿಗಳನ್ನು 'ಸರ್' ಸಂಬೋಧಿಸುವ ತಮ್ಮ ಹಳೆಯ ಚಾಳಿಯನ್ನು ಬಿಡುವುದಿಲ್ಲ. ಈ ದಿನಗಳಲ್ಲಿ ಸಂಸದರು ಮತ್ತು ಶಾಸಕರು ಅಧಿಕಾರಿಗಳ ಕಾಲಿಗೂ ಬೀಳುತ್ತಿದ್ದಾರೆ ಎಂದು ಬೃಜಭೂಷಣ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾರಾಬಂಕಿ:</strong> ಶಾಸಕ, ಸಂಸದರು ಸರ್ಕಾರಿ ಅಧಿಕಾರಿಗಳಿಗೆ 'ಸರ್' ಎಂದು ಸಂಬೋಧಿಸಿ ಗೌರವ ತೋರಿಸುವವರನ್ನು ಬಿಜೆಪಿ ಸಂಸದ ಬೃಜಭೂಷಣ್ ಶರಣ್ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ. ಜನಪ್ರತಿನಿಧಿಗಳಾಗಿ ಆಯ್ಕೆಗೊಂಡ ಮೇಲೂ ಕೆಲವರು ತಮ್ಮ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಎಂದು ಟೀಕಿಸಿದ್ದಾರೆ.</p>.<p>ಉತ್ತರ ಪ್ರದೇಶದ ಕೈಸರ್ಗಂಜ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬೃಜಭೂಷಣ್, ಕೆಲವು ನಾಯಕರು ಅಧಿಕಾರಿಗಳ ಕಾಲಿಗೂ ಬೀಳುತ್ತಾರೆ ಎಂದು ಆರೋಪಿಸಿದ್ದಾರೆ.</p>.<p>ಉತ್ತರ ಪ್ರದೇಶದ ಮಾಜಿ ಸಚಿವ ಅರವಿಂದ್ ಸಿಂಗ್ 'ಗೊಪೆ' ಅವರ ಸಹೋದರ ಅಶೋಕ್ ಸಿಂಗ್ ಅವರ ಸಾವಿಗೆ ಸಂತಾಪ ಸೂಚಿಸಲು ಬಾರಬಂಕಿಗೆ ಬಂದಿದ್ದ ಸಂದರ್ಭ ಈ ಹೇಳಿಕೆ ನೀಡಿದ್ದಾರೆ.</p>.<p>ಮೊದಲೆಲ್ಲ ನಾಯಕರೆಂದರೆ ಚಳುವಳಿ ಮೂಲಕ ಅಥವಾ ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಹೋರಾಟ ನಡೆಸಿದವರಾಗಿರುತ್ತಿದ್ದರು. ಆದರೆ ಈಗ ಅಂತಹದ್ದೆಲ್ಲವೂ ನಿಂತಿದೆ. ಅಂತಹ ನಾಯಕರ ಸಂಖ್ಯೆ ಕ್ಷೀಣಿಸಿದೆ. ಈಗ ಪದನಿಮಿತ್ತ ನಾಯಕರು ಮೇಲೆ ಬರುತ್ತಿದ್ದಾರೆ ಎಂದು ಬೃಜಭೂಷಣ್ ಹೇಳಿದ್ದಾರೆ.</p>.<p>ಇಂತಹ ಪದನಿಮಿತ್ತ ನಾಯಕರು ಶಾಸಕರಾಗಿ ಆಯ್ಕಗೊಳ್ಳುತ್ತಾರೆ, ಆದರೆ ಅವರಿಗೆ ಧೈರ್ಯ ಇರುವುದಿಲ್ಲ. ಅವರು ಸಂಸದರೂ ಆಗುತ್ತಾರೆ, ಆದರೆ ಅಧಿಕಾರಿಗಳನ್ನು 'ಸರ್' ಸಂಬೋಧಿಸುವ ತಮ್ಮ ಹಳೆಯ ಚಾಳಿಯನ್ನು ಬಿಡುವುದಿಲ್ಲ. ಈ ದಿನಗಳಲ್ಲಿ ಸಂಸದರು ಮತ್ತು ಶಾಸಕರು ಅಧಿಕಾರಿಗಳ ಕಾಲಿಗೂ ಬೀಳುತ್ತಿದ್ದಾರೆ ಎಂದು ಬೃಜಭೂಷಣ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>