<p><strong>ಮಥುರಾ</strong>:ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ಇತ್ಯರ್ಥಕ್ಕೆ ಬಂಧಿಸಿದಂತೆ ಸುಪ್ರೀಂ ಕೋರ್ಟ್ ರಚಿಸಿರುವ ಸಂಧಾನ ಸಮಿತಿಯಿಂದಶ್ರೀ ಶ್ರೀ ರವಿಶಂಕರ್ ಅವರನ್ನು ಕೈಬಿಡಬೇಕು ಎಂದು ಧಾರ್ಮಿಕ ಮುಖಂಡ ಅಧೋಕ್ಷಜಾನಂದ ತೀರ್ಥ ಮಹಾರಾಜ್ ಶನಿವಾರ ಮನವಿ ಮಾಡಿದ್ದಾರೆ.</p>.<p>‘ಸಂಧಾನ ಸಮಿತಿ ರಚಿಸುವ ಮೂಲಕ ವಿವಾದವನ್ನು ಸೌಹಾರ್ದವಾಗಿ ಪರಿಹರಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಗೌರವಿಸುತ್ತೇನೆ. ಆದರೆ ರವಿಶಂಕರ್ ಅವರನ್ನು ಕೈಬಿಡಬೇಕು. ಏಕೆಂದರೆ ಅವರು ಈ ಹಿಂದೆ ಸಂಧಾನ ಸೂತ್ರದಲ್ಲಿ ಸೋಲು ಕಂಡಿದ್ದಾರೆ. ಆದ್ದರಿಂದ ಎರಡೂ ಕಡೆಯಿಂದ ಅವರನ್ನು ಮತ್ತು ಅವರ ಸಂಧಾನ ಸೂತ್ರವನ್ನು ಗಂಭೀರವಾಗಿ ಪರಿಗಣಿಸಲಾಗದು’ ಎಂದು ಮಹಾರಾಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.</p>.<p>‘ರವಿಶಂಕರ್ ಅವರ ವಿರುದ್ಧ ನನಗೆ ಯಾವುದೇ ದ್ವೇಷ ಇಲ್ಲ. ತಾಳ್ಮೆ ಹೊಂದಿರುವ ಸಮರ್ಥ ವ್ಯಕ್ತಿ ಮಾತ್ರವೇ ಸಂಧಾನಕ್ಕೆ ಯಶಸ್ಸು ತಂದುಕೊಡಬಲ್ಲರು’ ಎಂದು ಹೇಳಿದ್ದಾರೆ.</p>.<p>ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಇಬ್ರಾಹಿಂ ಕಲೀಫುಲ್ಲಾ, ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ನ ಶ್ರೀಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನೊಳಗೊಂಡ ಸಂಧಾನ ಸಮಿತಿಯನ್ನು ಸುಪ್ರೀಂ ಇತ್ತೀಚೆಗೆ ರಚಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಥುರಾ</strong>:ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ಇತ್ಯರ್ಥಕ್ಕೆ ಬಂಧಿಸಿದಂತೆ ಸುಪ್ರೀಂ ಕೋರ್ಟ್ ರಚಿಸಿರುವ ಸಂಧಾನ ಸಮಿತಿಯಿಂದಶ್ರೀ ಶ್ರೀ ರವಿಶಂಕರ್ ಅವರನ್ನು ಕೈಬಿಡಬೇಕು ಎಂದು ಧಾರ್ಮಿಕ ಮುಖಂಡ ಅಧೋಕ್ಷಜಾನಂದ ತೀರ್ಥ ಮಹಾರಾಜ್ ಶನಿವಾರ ಮನವಿ ಮಾಡಿದ್ದಾರೆ.</p>.<p>‘ಸಂಧಾನ ಸಮಿತಿ ರಚಿಸುವ ಮೂಲಕ ವಿವಾದವನ್ನು ಸೌಹಾರ್ದವಾಗಿ ಪರಿಹರಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಗೌರವಿಸುತ್ತೇನೆ. ಆದರೆ ರವಿಶಂಕರ್ ಅವರನ್ನು ಕೈಬಿಡಬೇಕು. ಏಕೆಂದರೆ ಅವರು ಈ ಹಿಂದೆ ಸಂಧಾನ ಸೂತ್ರದಲ್ಲಿ ಸೋಲು ಕಂಡಿದ್ದಾರೆ. ಆದ್ದರಿಂದ ಎರಡೂ ಕಡೆಯಿಂದ ಅವರನ್ನು ಮತ್ತು ಅವರ ಸಂಧಾನ ಸೂತ್ರವನ್ನು ಗಂಭೀರವಾಗಿ ಪರಿಗಣಿಸಲಾಗದು’ ಎಂದು ಮಹಾರಾಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.</p>.<p>‘ರವಿಶಂಕರ್ ಅವರ ವಿರುದ್ಧ ನನಗೆ ಯಾವುದೇ ದ್ವೇಷ ಇಲ್ಲ. ತಾಳ್ಮೆ ಹೊಂದಿರುವ ಸಮರ್ಥ ವ್ಯಕ್ತಿ ಮಾತ್ರವೇ ಸಂಧಾನಕ್ಕೆ ಯಶಸ್ಸು ತಂದುಕೊಡಬಲ್ಲರು’ ಎಂದು ಹೇಳಿದ್ದಾರೆ.</p>.<p>ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಇಬ್ರಾಹಿಂ ಕಲೀಫುಲ್ಲಾ, ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ನ ಶ್ರೀಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನೊಳಗೊಂಡ ಸಂಧಾನ ಸಮಿತಿಯನ್ನು ಸುಪ್ರೀಂ ಇತ್ತೀಚೆಗೆ ರಚಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>