ಪ್ರತಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗಿದ್ದರಿಂದ ರಾಜ್ಯಸಭೆಯಲ್ಲಿ ಬೆಳಗಿನ ಕಲಾಪ ನಡೆಯಲಿಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಎನ್ಸಿಪಿ, ಜೆಎಂಎಂ, ಸಿಪಿಎಂ, ಸಿಪಿಐ, ಮುಸ್ಲಿಂ ಲೀಗ, ಆರ್ಎಸ್ಪಿ, ಎಂಡಿಎಂಕೆ ಮತ್ತು ವಿಸಿಕೆ ಸಂಸದರು ಪ್ರತಿಭಟನೆ ನಡೆಸಿ, ಕಲಾಪವನ್ನು ಬಹಿಷ್ಕರಿಸಿದರು.