<blockquote>ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ. ಈ ದಿನವನ್ನು (ಜನವರಿ 23) ‘ಪರಾಕ್ರಮ ದಿವಸ್’ ಆಗಿ ಆಚರಿಸಲಾಗುತ್ತದೆ.</blockquote>. <h2>'ಪರಾಕ್ರಮ ದಿನ'ವನ್ನು ಆಚರಿಸುವುದು ಏಕೆ?</h2><p>ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೋಸ್ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲು 2021ರಲ್ಲಿ ಅವರ ಹುಟ್ಟುಹಬ್ಬದ ದಿನವಾದ ಜ.23ರಂದು ಪರಾಕ್ರಮ ದಿನ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿತು. ಈ ದಿನದ ಆಚರಣೆಯ ಮೂಲ ಉದ್ದೇಶ ಸ್ವಾತಂತ್ರ್ಯ ಹೋರಾಟಕ್ಕಾಗಿ ಅವರು ಮಾಡಿದ ತ್ಯಾಗವನ್ನು ಮುಂದಿನ ಪೀಳಿಗೆಯವರಿಗೆ ತಿಳಿಸುವುದಾಗಿದೆ.</p>.ನೇತಾಜಿ ಪತ್ನಿಯ ತ್ಯಾಗದ ಬದುಕು.<blockquote>ನೇತಾಜಿ ಅವರ ಪ್ರೇರಣಾತ್ಮಕ ನುಡಿಗಳು</blockquote>. <ul><li><p>ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ.</p></li><li><p>ಒಬ್ಬ ವ್ಯಕ್ತಿ ತನ್ನ ಸಿದ್ದಾಂತಕ್ಕಾಗಿ ಸಾಯಬಹುದು, ಆದರೆ ಅವನ ಮರಣದ ನಂತರವೂ ಉಳಿಯುವ ಆ ಸಿದ್ದಾಂತ ಸಾವಿರ ಜನರಲ್ಲಿ ಅವತರಿಸುತ್ತದೆ</p></li><li><p>ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ. ಅದನ್ನು ನಾವೇ ಪಡೆಯಬೇಕು</p></li><li><p>ಬದುಕಿನಲ್ಲಿ ಯಾವುದೇ ಸವಾಲು, ಹೋರಾಟ ಇಲ್ಲದಿದ್ದರೆ ಜೀವನವು ಅರ್ಧದಷ್ಟು ಆಸಕ್ತಿಯನ್ನು ಕಳೆದುಕೊಳ್ಳುತ್ತದೆ.</p></li><li><p> ಜನ, ಹಣ ಮತ್ತು ವಸ್ತುಗಳಿಂದ ಮಾತ್ರ ಗೆಲುವು ಅಥವಾ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಿಲ್ಲ. ವೀರೋಚಿತ ಸಾಧನೆಗಳಿಗೆ ಪ್ರೇರೇಪಿಸುವ ಪ್ರೇರಕ ಶಕ್ತಿಯೂ ನಮ್ಮಲ್ಲಿರಬೇಕು.</p></li><li><p>ಅನ್ಯಾಯವನ್ನು ಸಹಿಸಿಕೊಳ್ಳುವುದು ಹಾಗೂ ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಅತ್ಯಂತ ಘೋರ ಅಪರಾಧ.</p></li><li><p>ಕೇವಲ ಚರ್ಚೆಗಳಿಂದ ಇತಿಹಾಸದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯವಿಲ್ಲ.</p></li><li><p>ಭಾರತದ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ. ದೇಶವನ್ನು ಬಂಧನದಲ್ಲಿಡುವ ಯಾವ ಶಕ್ತಿಯೂ ಭೂಮಿಯಲ್ಲಿ ಇಲ್ಲ. ಶೀಘ್ರದಲ್ಲೇ ಭಾರತ ಸ್ವತಂತ್ರವಾಗಲಿದೆ.</p></li><li><p>ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ವಾತಂತ್ರ್ಯವೊಂದೇ ಪರಿಹಾರ. ಗುಲಾಮಿತನದ ಸಂಕೋಲೆಯನ್ನು ಕಿತ್ತೆಸೆಯಲು ಒಂದೇ ಹೃದಯ, ಒಂದು ಪ್ರಾಣವಾಗಿ ಎಲ್ಲರೂ ಕಟಿಬದ್ಧರಾಗಬೇಕಾಗಿದೆ.</p></li><li><p>ಯಶಸ್ಸು ಯಾವಾಗಲೂ ವೈಫಲ್ಯದ ಸ್ತಂಭದ ಮೇಲೆ ನಿಂತಿದೆ. ಆದ್ದರಿಂದ ಯಾರೂ ಸೋಲಿಗೆ ಭಯಪಡಬಾರದು.</p></li><li><p>ನಿಮ್ಮ ಸ್ವಂತ ಶಕ್ತಿಯನ್ನು ನಂಬಿ, ಎರವಲು ಪಡೆದ ಶಕ್ತಿ ನಿಮಗೆ ಎಂದಿಗೂ ಮಾರಕ.</p></li><li><p>ಉತ್ಸಾಹ ಇಲ್ಲದೆ ಯಾವ ಮಹತ್ತರ ಕೆಲಸವೂ ನಡೆಯಲ್ಲ.</p></li><li><p>ತಾಯಿಯ ಪ್ರೀತಿ ಅತ್ಯಂತ ಆಳವಾದದ್ದು. ಏಕೆಂದರೆ ಅದರಲ್ಲಿ ಯಾವುದೇ ಸ್ವಾರ್ಥ ಇರುವುದಿಲ್ಲ.</p></li></ul>.ನೇತಾಜಿ ನಾಪತ್ತೆ: ಕಾರಣಗಳ ಕೆದಕುತ್ತಾ....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ. ಈ ದಿನವನ್ನು (ಜನವರಿ 23) ‘ಪರಾಕ್ರಮ ದಿವಸ್’ ಆಗಿ ಆಚರಿಸಲಾಗುತ್ತದೆ.</blockquote>. <h2>'ಪರಾಕ್ರಮ ದಿನ'ವನ್ನು ಆಚರಿಸುವುದು ಏಕೆ?</h2><p>ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೋಸ್ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲು 2021ರಲ್ಲಿ ಅವರ ಹುಟ್ಟುಹಬ್ಬದ ದಿನವಾದ ಜ.23ರಂದು ಪರಾಕ್ರಮ ದಿನ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿತು. ಈ ದಿನದ ಆಚರಣೆಯ ಮೂಲ ಉದ್ದೇಶ ಸ್ವಾತಂತ್ರ್ಯ ಹೋರಾಟಕ್ಕಾಗಿ ಅವರು ಮಾಡಿದ ತ್ಯಾಗವನ್ನು ಮುಂದಿನ ಪೀಳಿಗೆಯವರಿಗೆ ತಿಳಿಸುವುದಾಗಿದೆ.</p>.ನೇತಾಜಿ ಪತ್ನಿಯ ತ್ಯಾಗದ ಬದುಕು.<blockquote>ನೇತಾಜಿ ಅವರ ಪ್ರೇರಣಾತ್ಮಕ ನುಡಿಗಳು</blockquote>. <ul><li><p>ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ.</p></li><li><p>ಒಬ್ಬ ವ್ಯಕ್ತಿ ತನ್ನ ಸಿದ್ದಾಂತಕ್ಕಾಗಿ ಸಾಯಬಹುದು, ಆದರೆ ಅವನ ಮರಣದ ನಂತರವೂ ಉಳಿಯುವ ಆ ಸಿದ್ದಾಂತ ಸಾವಿರ ಜನರಲ್ಲಿ ಅವತರಿಸುತ್ತದೆ</p></li><li><p>ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ. ಅದನ್ನು ನಾವೇ ಪಡೆಯಬೇಕು</p></li><li><p>ಬದುಕಿನಲ್ಲಿ ಯಾವುದೇ ಸವಾಲು, ಹೋರಾಟ ಇಲ್ಲದಿದ್ದರೆ ಜೀವನವು ಅರ್ಧದಷ್ಟು ಆಸಕ್ತಿಯನ್ನು ಕಳೆದುಕೊಳ್ಳುತ್ತದೆ.</p></li><li><p> ಜನ, ಹಣ ಮತ್ತು ವಸ್ತುಗಳಿಂದ ಮಾತ್ರ ಗೆಲುವು ಅಥವಾ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಿಲ್ಲ. ವೀರೋಚಿತ ಸಾಧನೆಗಳಿಗೆ ಪ್ರೇರೇಪಿಸುವ ಪ್ರೇರಕ ಶಕ್ತಿಯೂ ನಮ್ಮಲ್ಲಿರಬೇಕು.</p></li><li><p>ಅನ್ಯಾಯವನ್ನು ಸಹಿಸಿಕೊಳ್ಳುವುದು ಹಾಗೂ ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಅತ್ಯಂತ ಘೋರ ಅಪರಾಧ.</p></li><li><p>ಕೇವಲ ಚರ್ಚೆಗಳಿಂದ ಇತಿಹಾಸದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯವಿಲ್ಲ.</p></li><li><p>ಭಾರತದ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ. ದೇಶವನ್ನು ಬಂಧನದಲ್ಲಿಡುವ ಯಾವ ಶಕ್ತಿಯೂ ಭೂಮಿಯಲ್ಲಿ ಇಲ್ಲ. ಶೀಘ್ರದಲ್ಲೇ ಭಾರತ ಸ್ವತಂತ್ರವಾಗಲಿದೆ.</p></li><li><p>ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ವಾತಂತ್ರ್ಯವೊಂದೇ ಪರಿಹಾರ. ಗುಲಾಮಿತನದ ಸಂಕೋಲೆಯನ್ನು ಕಿತ್ತೆಸೆಯಲು ಒಂದೇ ಹೃದಯ, ಒಂದು ಪ್ರಾಣವಾಗಿ ಎಲ್ಲರೂ ಕಟಿಬದ್ಧರಾಗಬೇಕಾಗಿದೆ.</p></li><li><p>ಯಶಸ್ಸು ಯಾವಾಗಲೂ ವೈಫಲ್ಯದ ಸ್ತಂಭದ ಮೇಲೆ ನಿಂತಿದೆ. ಆದ್ದರಿಂದ ಯಾರೂ ಸೋಲಿಗೆ ಭಯಪಡಬಾರದು.</p></li><li><p>ನಿಮ್ಮ ಸ್ವಂತ ಶಕ್ತಿಯನ್ನು ನಂಬಿ, ಎರವಲು ಪಡೆದ ಶಕ್ತಿ ನಿಮಗೆ ಎಂದಿಗೂ ಮಾರಕ.</p></li><li><p>ಉತ್ಸಾಹ ಇಲ್ಲದೆ ಯಾವ ಮಹತ್ತರ ಕೆಲಸವೂ ನಡೆಯಲ್ಲ.</p></li><li><p>ತಾಯಿಯ ಪ್ರೀತಿ ಅತ್ಯಂತ ಆಳವಾದದ್ದು. ಏಕೆಂದರೆ ಅದರಲ್ಲಿ ಯಾವುದೇ ಸ್ವಾರ್ಥ ಇರುವುದಿಲ್ಲ.</p></li></ul>.ನೇತಾಜಿ ನಾಪತ್ತೆ: ಕಾರಣಗಳ ಕೆದಕುತ್ತಾ....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>