<p><strong>ನವದೆಹಲಿ:</strong> ‘ಬೀದಿಗಳಿಂದ ಎಲ್ಲ ಬೀದಿನಾಯಿಗಳನ್ನೂ ತೆರವು ಮಾಡಿ ಎಂದು ನ್ಯಾಯಾಲಯವು ನಿರ್ದೇಶನ ನೀಡಿಲ್ಲ. ಪ್ರಾಣಿ ಜನನ ನಿಯಂತ್ರಣ (ಎಬಿಸಿ) ನಿಯಮಗಳ ಅನ್ವಯ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದ್ದೇವೆ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.</p>.<p>ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಬೀದಿನಾಯಿಗಳ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿತು. ವಿವಿಧ ವಕೀಲರು ವಾದ ಮಂಡಿಸಿದರು.</p>.<p>‘ತಮ್ಮ ಬಗ್ಗೆ ಭಯ ಇರುವ ವ್ಯಕ್ತಿಯನ್ನು ನಾಯಿಗಳು ಗುರುತಿಸುತ್ತವೆ. ಜೊತೆಗೆ, ಈ ಹಿಂದೆ ನಾಯಿಯಿಂದ ಕಡಿತಕ್ಕೆ ಒಳಗಾಗಿದ್ದರೂ ಅವುಗಳಿಗೆ ತಿಳಿಯುತ್ತವೆ. ಇಂಥ ವ್ಯಕ್ತಿಗಳ ಮೇಲೆಯೇ ನಾಯಿಗಳು ದಾಳಿ ನಡೆಸುತ್ತವೆ’ ಎಂದು ಪೀಠ ಅಭಿಪ್ರಾಯಪಟ್ಟಿತು. </p>.<p>‘ದೆಹಲಿಯಂಥ ನಗರಗಳಲ್ಲಿ ಇಲಿಗಳ ಕಾಟ ಇದೆ. ಇಲ್ಲಿ ಮಂಗಗಳ ಕಾಟವೂ ಇದೆ. ಹೀಗಿರುವಾಗಿ ಬೀದಿನಾಯಿಗಳನ್ನು ತೆರವು ಮಾಡಿಬಿಟ್ಟರೆ, ಕೆಟ್ಟ ಪರಿಮಾಣ ಎದುರಿಸಬೇಕಾಗಬಹುದು’ ಎಂದು ಬೀದಿನಾಯಿಗಳ ಕುರಿತು ಪೀಠಕ್ಕೆ ಅಮ್ಯುಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಗೌರವ್ ಅಗರ್ವಾಲ್ ಹೇಳಿದರು. </p>.<p>ತಿಳಿಹಾಸ್ಯದ ಮೂಲಕ ಪ್ರತಿಕ್ರಿಯಿಸಿದ ಪೀಠ, ‘ನಾಯಿಗಳು ಮತ್ತು ಬೆಕ್ಕುಗಳು ಶತ್ರುಗಳು. ಇಲಿಗಳನ್ನು ಬೆಕ್ಕುಗಳು ಕೊಲ್ಲುತ್ತವೆ. ಆ ಲೆಕ್ಕದಲ್ಲಿ ಬೆಕ್ಕುಗಳನ್ನೇ ನಾವು ಉಳಿಸಿಕೊಳ್ಳಬೇಕು’ ಎಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಬೀದಿಗಳಿಂದ ಎಲ್ಲ ಬೀದಿನಾಯಿಗಳನ್ನೂ ತೆರವು ಮಾಡಿ ಎಂದು ನ್ಯಾಯಾಲಯವು ನಿರ್ದೇಶನ ನೀಡಿಲ್ಲ. ಪ್ರಾಣಿ ಜನನ ನಿಯಂತ್ರಣ (ಎಬಿಸಿ) ನಿಯಮಗಳ ಅನ್ವಯ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದ್ದೇವೆ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.</p>.<p>ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಬೀದಿನಾಯಿಗಳ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿತು. ವಿವಿಧ ವಕೀಲರು ವಾದ ಮಂಡಿಸಿದರು.</p>.<p>‘ತಮ್ಮ ಬಗ್ಗೆ ಭಯ ಇರುವ ವ್ಯಕ್ತಿಯನ್ನು ನಾಯಿಗಳು ಗುರುತಿಸುತ್ತವೆ. ಜೊತೆಗೆ, ಈ ಹಿಂದೆ ನಾಯಿಯಿಂದ ಕಡಿತಕ್ಕೆ ಒಳಗಾಗಿದ್ದರೂ ಅವುಗಳಿಗೆ ತಿಳಿಯುತ್ತವೆ. ಇಂಥ ವ್ಯಕ್ತಿಗಳ ಮೇಲೆಯೇ ನಾಯಿಗಳು ದಾಳಿ ನಡೆಸುತ್ತವೆ’ ಎಂದು ಪೀಠ ಅಭಿಪ್ರಾಯಪಟ್ಟಿತು. </p>.<p>‘ದೆಹಲಿಯಂಥ ನಗರಗಳಲ್ಲಿ ಇಲಿಗಳ ಕಾಟ ಇದೆ. ಇಲ್ಲಿ ಮಂಗಗಳ ಕಾಟವೂ ಇದೆ. ಹೀಗಿರುವಾಗಿ ಬೀದಿನಾಯಿಗಳನ್ನು ತೆರವು ಮಾಡಿಬಿಟ್ಟರೆ, ಕೆಟ್ಟ ಪರಿಮಾಣ ಎದುರಿಸಬೇಕಾಗಬಹುದು’ ಎಂದು ಬೀದಿನಾಯಿಗಳ ಕುರಿತು ಪೀಠಕ್ಕೆ ಅಮ್ಯುಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಗೌರವ್ ಅಗರ್ವಾಲ್ ಹೇಳಿದರು. </p>.<p>ತಿಳಿಹಾಸ್ಯದ ಮೂಲಕ ಪ್ರತಿಕ್ರಿಯಿಸಿದ ಪೀಠ, ‘ನಾಯಿಗಳು ಮತ್ತು ಬೆಕ್ಕುಗಳು ಶತ್ರುಗಳು. ಇಲಿಗಳನ್ನು ಬೆಕ್ಕುಗಳು ಕೊಲ್ಲುತ್ತವೆ. ಆ ಲೆಕ್ಕದಲ್ಲಿ ಬೆಕ್ಕುಗಳನ್ನೇ ನಾವು ಉಳಿಸಿಕೊಳ್ಳಬೇಕು’ ಎಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>