‘ಇಡೀ ಮುಸ್ಲಿಂ ಸಮುದಾಯವನ್ನು ರಾಕ್ಷಸೀಕರಿಸುವ ಉದ್ದೇಶದಿಂದ ‘ಕೊರೊನಾ ಜಿಹಾದ್, ಕೊರೊನಾ ಭಯೋತ್ಪಾದನೆ, ಕೊರೊನಾ ಬಾಂಬ್, ಮುಸ್ಲಿಂ ದಂಗೆ’ ಮುಂತಾದ ಪದಗಳನ್ನು ಮಾಧ್ಯಮಗಳು ಬಳಸುತ್ತಿವೆ’ ಎಂದು ಮುಸ್ಲಿಂ ವಿದ್ವಾಂಸರನ್ನೊಳಗೊಂಡ ಸಂಸ್ಥೆಯು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.ನಿಜಾಮುದ್ದೀನ್ ಮರ್ಕಜ್ ಘಟನೆಗೆ ಕೋಮುವಾದಿ ಬಣ್ಣ ನೀಡಿದ ಮಾಧ್ಯಮಗಳನ್ನು ಗುರುತಿಸಿ, ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದೂ ಮನವಿ ಮಾಡಲಾಗಿದೆ.