ರಯೀಸ್ಗೆ ಮುಂಬೈನಲ್ಲಿ ಅರ್ಮಾನ್ ಎಂಬಾತನ ಪರಿಚಯವಾಗಿತ್ತು. ದುಬೈನಲ್ಲಿ ಉದ್ಯೋಗ ಕೊಡಿಸುವ ಆಮಿಷ ತೋರಿದ್ದ ಅರ್ಮಾನ್, ಭಾರತದ ವಿರುದ್ಧ ಬೇಹುಗಾರಿಕೆ ನಡೆಸುವಂತೆ ರಯೀಸ್ನನ್ನು ಪ್ರೇರೇಪಿಸಿದ್ದ. ಬಳಿಕ, ಹುಸೇನ್ ಎಂಬಾತನನ್ನು ಸಂಪರ್ಕಿಸುವಂತೆ 2022ರಲ್ಲಿ ರಯೀಸ್ಗೆ ವಾಟ್ಸ್ಆ್ಯಪ್ ಕರೆಬಂದಿತ್ತು. ಭಾರತದ ಮಿಲಿಟರಿ ಸ್ಥಾಪನೆಗೆ ಸಂಬಂಧಿಸಿದ ಚಿತ್ರಗಳನ್ನು ಕಳಿಸುವಂತೆ ಆಗ ರಯೀಸ್ಗೆ ಹೇಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.