<p><strong>ವಾರಾಣಸಿ</strong>: ಪ್ರಧಾನಿ ನರೇಂದ್ರ ಮೋದಿ ಅವರ ‘ಸ್ವಚ್ಛ ಭಾರತ ಅಭಿಯಾನ’ ದೇವಾಲಯಗಳು ಮತ್ತು ಅವುಗಳ ಸ್ವಚ್ಛತೆಯ ಮೇಲೆ ಆಳವಾದ ಪರಿಣಾಮ ಬೀರಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ಹೇಳಿದ್ದಾರೆ.</p>.<p>ಮೂರು ದಿನಗಳ ಅಂತರರಾಷ್ಟ್ರೀಯ ದೇವಾಲಯಗಳ ಸಮಾವೇಶ ಮತ್ತು ಎಕ್ಸ್ಪೋ (ಐಟಿಸಿಎಕ್ಸ್) 2023 ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪೂಜಾ ಸ್ಥಳಗಳು ಸಹ ‘ಶುದ್ಧತೆಯ ಸಂಕೇತ’ ಆಗಿರುವುದರಿಂದ ಸ್ವಚ್ಛತೆಯು ದೇವಾಲಯ ನಿರ್ವಹಣೆಯ ನಿರ್ಣಾಯಕ ಅಂಶವಾಗಿದೆ ಎಂದು ಪ್ರತಿಪಾದಿಸಿದರು.</p>.<p>‘ದೇವಾಲಯಗಳು ಪರಿಶುದ್ಧತೆಯ ಸಂಕೇತವಾಗಿದೆ. ಸ್ವಚ್ಛ ಭಾರತ ದೇವಾಲಯಗಳ ಮೇಲೂ ಹೆಚ್ಚಿನ ಪರಿಣಾಮ ಬೀರಿದೆ. ದೇವಾಲಯ ಸೇವೆ ಪರಂಪರೆಯನ್ನು ಮುಂದಿನ ಪೀಳಿಗೆಗೆ ರವಾನಿಸಬೇಕಾಗಿದೆ. ಇದಕ್ಕಾಗಿ ದೇವಾಲಯ ಪರಿಸರ ವ್ಯವಸ್ಥೆಯ ಬಗ್ಗೆ ಶಿಕ್ಷಣ ಮತ್ತು ಜಾಗೃತಿ ಮುಖ್ಯವಾಗಿದೆ’ ಎಂದರು. </p>.<p>32 ದೇಶಗಳು ಮತ್ತು ಭಾರತದ 350 ದೇವಾಲಯಗಳ ಸಿಇಒಗಳು ಮತ್ತು ನಿರ್ವಹಣಾ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಒಟ್ಟು 16 ಅಧಿವೇಶನಗಳು ನಡೆಯಲಿವೆ ಎಂದು ಇಂಟರ್ನ್ಯಾಷನಲ್ ಟೆಂಪಲ್ಸ್ ಕನ್ವೆನ್ಷನ್ ಮತ್ತು ಎಕ್ಸ್ಪೋ 2023 ರ ಸಂಸ್ಥಾಪಕ ಗಿರೀಶ್ ಕುಲಕರ್ಣಿ ಹೇಳಿದ್ದಾರೆ.</p>.<p>ಸುರಕ್ಷತೆ, ವಿಪತ್ತು ನಿರ್ವಹಣೆ, ಭದ್ರತೆ, ನಿಧಿ ನಿರ್ವಹಣೆ, ಕಣ್ಗಾವಲು, ವೈದ್ಯಕೀಯ ಉಪಕ್ರಮ ಮತ್ತು 'ಲಂಗರ್' (ಸಮುದಾಯ ಅಡುಗೆಮನೆ) ಮುಂತಾದ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದರು.</p>.<p>ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಈ ಕಾರ್ಯಕ್ರಮವನ್ನು ಕಾಶಿಯಲ್ಲಿ ಆಯೋಜಿಸಿದ್ದಕ್ಕಾಗಿ ಸಂಘಟಕರನ್ನು ಶ್ಲಾಘಿಸಿದರು.</p>.<p>ಐಟಿಸಿಎಕ್ಸ್ ಅಧ್ಯಕ್ಷ ಪ್ರಸಾದ್ ಮಾತನಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾರಾಣಸಿ</strong>: ಪ್ರಧಾನಿ ನರೇಂದ್ರ ಮೋದಿ ಅವರ ‘ಸ್ವಚ್ಛ ಭಾರತ ಅಭಿಯಾನ’ ದೇವಾಲಯಗಳು ಮತ್ತು ಅವುಗಳ ಸ್ವಚ್ಛತೆಯ ಮೇಲೆ ಆಳವಾದ ಪರಿಣಾಮ ಬೀರಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ಹೇಳಿದ್ದಾರೆ.</p>.<p>ಮೂರು ದಿನಗಳ ಅಂತರರಾಷ್ಟ್ರೀಯ ದೇವಾಲಯಗಳ ಸಮಾವೇಶ ಮತ್ತು ಎಕ್ಸ್ಪೋ (ಐಟಿಸಿಎಕ್ಸ್) 2023 ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪೂಜಾ ಸ್ಥಳಗಳು ಸಹ ‘ಶುದ್ಧತೆಯ ಸಂಕೇತ’ ಆಗಿರುವುದರಿಂದ ಸ್ವಚ್ಛತೆಯು ದೇವಾಲಯ ನಿರ್ವಹಣೆಯ ನಿರ್ಣಾಯಕ ಅಂಶವಾಗಿದೆ ಎಂದು ಪ್ರತಿಪಾದಿಸಿದರು.</p>.<p>‘ದೇವಾಲಯಗಳು ಪರಿಶುದ್ಧತೆಯ ಸಂಕೇತವಾಗಿದೆ. ಸ್ವಚ್ಛ ಭಾರತ ದೇವಾಲಯಗಳ ಮೇಲೂ ಹೆಚ್ಚಿನ ಪರಿಣಾಮ ಬೀರಿದೆ. ದೇವಾಲಯ ಸೇವೆ ಪರಂಪರೆಯನ್ನು ಮುಂದಿನ ಪೀಳಿಗೆಗೆ ರವಾನಿಸಬೇಕಾಗಿದೆ. ಇದಕ್ಕಾಗಿ ದೇವಾಲಯ ಪರಿಸರ ವ್ಯವಸ್ಥೆಯ ಬಗ್ಗೆ ಶಿಕ್ಷಣ ಮತ್ತು ಜಾಗೃತಿ ಮುಖ್ಯವಾಗಿದೆ’ ಎಂದರು. </p>.<p>32 ದೇಶಗಳು ಮತ್ತು ಭಾರತದ 350 ದೇವಾಲಯಗಳ ಸಿಇಒಗಳು ಮತ್ತು ನಿರ್ವಹಣಾ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಒಟ್ಟು 16 ಅಧಿವೇಶನಗಳು ನಡೆಯಲಿವೆ ಎಂದು ಇಂಟರ್ನ್ಯಾಷನಲ್ ಟೆಂಪಲ್ಸ್ ಕನ್ವೆನ್ಷನ್ ಮತ್ತು ಎಕ್ಸ್ಪೋ 2023 ರ ಸಂಸ್ಥಾಪಕ ಗಿರೀಶ್ ಕುಲಕರ್ಣಿ ಹೇಳಿದ್ದಾರೆ.</p>.<p>ಸುರಕ್ಷತೆ, ವಿಪತ್ತು ನಿರ್ವಹಣೆ, ಭದ್ರತೆ, ನಿಧಿ ನಿರ್ವಹಣೆ, ಕಣ್ಗಾವಲು, ವೈದ್ಯಕೀಯ ಉಪಕ್ರಮ ಮತ್ತು 'ಲಂಗರ್' (ಸಮುದಾಯ ಅಡುಗೆಮನೆ) ಮುಂತಾದ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದರು.</p>.<p>ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಈ ಕಾರ್ಯಕ್ರಮವನ್ನು ಕಾಶಿಯಲ್ಲಿ ಆಯೋಜಿಸಿದ್ದಕ್ಕಾಗಿ ಸಂಘಟಕರನ್ನು ಶ್ಲಾಘಿಸಿದರು.</p>.<p>ಐಟಿಸಿಎಕ್ಸ್ ಅಧ್ಯಕ್ಷ ಪ್ರಸಾದ್ ಮಾತನಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>