ನವದೆಹಲಿ: ಸ್ವಾಮಿ ಅಗ್ನಿವೇಶ್ ವಂಚಕ ಮತ್ತು ವಿದೇಶಿ ಏಜೆಂಟ್ ಎಂದು ಜಾರ್ಖಂಡ್ ರಾಜ್ಯದ ನಗರಾಭಿವೃದ್ಧಿ ಸಚಿವ ಸಿ.ಪಿ.ಸಿಂಗ್ ಹೇಳಿದ್ದಾರೆ. ನನಗೆ ತಿಳಿದಿರುವಂತೆ ಸ್ವಾಮಿ ಅಗ್ನಿವೇಶ್ ವಿದೇಶದಿಂದ ಬರುವ ದೇಣಿಗೆಯಿಂದ ಬದುಕುತ್ತಿದ್ದಾರೆ. ಕಾವಿ ವಸ್ತ್ರದಿಂದ ಅವರು ಮೋಸ ಮಾಡುತ್ತಿದ್ದಾರೆ.ಅವರೊಬ್ಬ ವಂಚಕ, ಸ್ವಾಮಿ ಅಲ್ಲ.ಜನಪ್ರಿಯತೆ ಗಳಿಸುವುದಕ್ಕಾಗಿ ಅವರು ತಮ್ಮ ಮೇಲೆಯೇ ದಾಳಿ ಸಂಚು ರೂಪಿಸಿದ್ದಾರೆ ಎಂದು ಸಚಿವರು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.