<p><strong>ಚೆನ್ನೈ</strong>: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ನಟ ವಿಜಯ್ ಅವರಿಗೆ ಸ್ಫರ್ಧಿಸಲು ಯಾವ ಕ್ಷೇತ್ರವನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತು ಪಕ್ಷದ ನಾಯಕರು ಯೋಚಿಸುತ್ತಿದ್ದಾರೆ. </p>.<p>ಚೆನ್ನೈನ 16 ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು ಅಥವಾ ತಮಿಳುನಾಡಿನ ಮಧ್ಯಭಾಗದ ಕ್ಷೇತ್ರವೊಂದರಿಂದ ವಿಜಯ್ ಅವರು ಸ್ಫರ್ಧಿಸುತ್ತಾರೆ ಎಂದು ಟಿವಿಕೆ ಮೂಲಗಳು ತಿಳಿಸಿವೆ. </p>.<p>ತಮಿಳುನಾಡಿನ ವಿರುಗಂಬಕ್ಕಂ, ಚೆನ್ನೈನ ವೇಲಾಚೆರಿ, ವಿಲ್ಲುಪುರಂ ಜಿಲ್ಲೆಯ ವಿಕ್ರವಂಡಿ, ವೇದಾರಣ್ಯಂ ಹಾಗೂ ನಾಗಪತ್ತಿನಂ ಸೇರಿದಂತೆ ಹಲವು ಕ್ಷೇತ್ರಗಳನ್ನು ಸ್ಫರ್ಧೆಗೆ ಪರಿಗಣಿಸಲಾಗಿದೆ. ಶೀಘ್ರವೇ ಕ್ಷೇತ್ರವನ್ನು ಆಯ್ಕೆ ಮಾಡಿ, ಸಾರ್ವಜನಿಕವಾಗಿ ಘೋಷಿಸಲಾಗುವುದು. </p>.<p>‘ವಿ’ ಅಕ್ಷರಗಳಿಂದ ಪ್ರಾರಂಭವಾಗುವ ಕ್ಷೇತ್ರವು ‘ವಿಜಯ್’ ಹಾಗೂ ‘ವಿಕ್ಟರಿ’ಯನ್ನು ಸಂಕೇತಿಸುತ್ತದೆ. ಇದು ಚೊಚ್ಚಲ ಚುನಾವಣೆಯ ಗೆಲುವನ್ನು ಸೂಚಿಸುತ್ತದೆ. ವಿಜಯ್ ಅವರು ಜೋತಿಷಿಗಳು, ‘ವಿ’ ಅಕ್ಷರದಿಂದ ಪ್ರಾರಂಭವಾಗುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದ್ದಾರೆ ಎನ್ನಲಾಗಿದೆ. </p>.<p>ಏಪ್ರಿಲ್– ಮೇನಲ್ಲಿ ತಮಿಳುನಾಡು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ನಟ ವಿಜಯ್ ಅವರಿಗೆ ಸ್ಫರ್ಧಿಸಲು ಯಾವ ಕ್ಷೇತ್ರವನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತು ಪಕ್ಷದ ನಾಯಕರು ಯೋಚಿಸುತ್ತಿದ್ದಾರೆ. </p>.<p>ಚೆನ್ನೈನ 16 ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು ಅಥವಾ ತಮಿಳುನಾಡಿನ ಮಧ್ಯಭಾಗದ ಕ್ಷೇತ್ರವೊಂದರಿಂದ ವಿಜಯ್ ಅವರು ಸ್ಫರ್ಧಿಸುತ್ತಾರೆ ಎಂದು ಟಿವಿಕೆ ಮೂಲಗಳು ತಿಳಿಸಿವೆ. </p>.<p>ತಮಿಳುನಾಡಿನ ವಿರುಗಂಬಕ್ಕಂ, ಚೆನ್ನೈನ ವೇಲಾಚೆರಿ, ವಿಲ್ಲುಪುರಂ ಜಿಲ್ಲೆಯ ವಿಕ್ರವಂಡಿ, ವೇದಾರಣ್ಯಂ ಹಾಗೂ ನಾಗಪತ್ತಿನಂ ಸೇರಿದಂತೆ ಹಲವು ಕ್ಷೇತ್ರಗಳನ್ನು ಸ್ಫರ್ಧೆಗೆ ಪರಿಗಣಿಸಲಾಗಿದೆ. ಶೀಘ್ರವೇ ಕ್ಷೇತ್ರವನ್ನು ಆಯ್ಕೆ ಮಾಡಿ, ಸಾರ್ವಜನಿಕವಾಗಿ ಘೋಷಿಸಲಾಗುವುದು. </p>.<p>‘ವಿ’ ಅಕ್ಷರಗಳಿಂದ ಪ್ರಾರಂಭವಾಗುವ ಕ್ಷೇತ್ರವು ‘ವಿಜಯ್’ ಹಾಗೂ ‘ವಿಕ್ಟರಿ’ಯನ್ನು ಸಂಕೇತಿಸುತ್ತದೆ. ಇದು ಚೊಚ್ಚಲ ಚುನಾವಣೆಯ ಗೆಲುವನ್ನು ಸೂಚಿಸುತ್ತದೆ. ವಿಜಯ್ ಅವರು ಜೋತಿಷಿಗಳು, ‘ವಿ’ ಅಕ್ಷರದಿಂದ ಪ್ರಾರಂಭವಾಗುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದ್ದಾರೆ ಎನ್ನಲಾಗಿದೆ. </p>.<p>ಏಪ್ರಿಲ್– ಮೇನಲ್ಲಿ ತಮಿಳುನಾಡು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>