<p class="title"><strong>ಆಂಧ್ರಪ್ರದೇಶ:</strong> ಅಧಿಕಾರ ವಹಿಸಿಕೊಂಡ ನಂತರವಷ್ಟೆ ಮತ್ತೆ ಆಂಧ್ರಪ್ರದೇಶ ವಿಧಾನಸಭೆಗೆ ಕಾಲಿಡುವುದಾಗಿ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಶುಕ್ರವಾರ ಪ್ರತಿಜ್ಞೆ ಮಾಡಿದ್ದಾರೆ.</p>.<p class="title">ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸದಸ್ಯರು ತಮ್ಮ ಮೇಲೆ ಮಾಡುತ್ತಿರುವ ನಿರಂತರ ನಿಂದನೆಯಿಂದ ತಾವು ಮನನೊಂದಿರುವುದಾಗಿ ವಿರೋಧ ಪಕ್ಷದ ನಾಯಕರೂ ಆಗಿರುವ ನಾಯ್ಡು ಅವರು ಸದನದಲ್ಲಿ ಭಾವುಕವಾಗಿ ನುಡಿದರು.</p>.<p class="bodytext">‘ಕಳೆದ ಎರಡೂವರೆ ವರ್ಷಗಳಿಂದ ಅವರು ಮಾಡುತ್ತಿರುವ ಅವಮಾನಗಳನ್ನು ಸಹಿಸಿಕೊಂಡು ಸುಮ್ಮನಿದ್ದೆ. ಇಂದು ನನ್ನ ಪತ್ನಿಯನ್ನೂ ಗುರಿಯಾಗಿಸಿದ್ದಾರೆ. ನಾನು ಯಾವಾಗಲೂ ಗೌರವದಿಂದ ಮತ್ತು ಗೌರವಕ್ಕಾಗಿ ಬದುಕಿದ್ದೇನೆ. ಇನ್ನು ಇದನ್ನು ಸಹಿಸಲಾಗುವುದಿಲ್ಲ’ ಎಂದು ಹೇಳಿದರು.</p>.<p class="bodytext">ನಾಯ್ಡು ತಮ್ಮ ಮಾತು ಮುಂದುವರೆಸಿದ್ದರು. ಆದರೆ ಆಡಳಿತ ಪಕ್ಷದ ಸದಸ್ಯರು ಇದೊಂದು ನಾಟಕ ಎಂದು ಕೂಗಾಡಿದರು. ಪರಿಸ್ಥಿತಿ ಶಾಂತಗೊಳಿಸಲು ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಅವರು ನಾಯ್ಡು ಅವರ ಮೈಕ್ ಅನ್ನು ಆರಿಸಿದರು.</p>.<p class="bodytext">ಸದನದಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದ ಕಿರು ಚರ್ಚೆಯ ವೇಳೆ ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಚಂದ್ರಬಾಬು ನಾಯ್ಡು ತಮ್ಮ ಹತಾಶೆಯನ್ನು ಮಾತುಗಳಲ್ಲಿ ಹೊರಹಾಕಿದರು.</p>.<p>ಬಳಿಕ ತಮ್ಮ ಕೊಠಡಿಗೆ ತೆರಳಿದ ನಾಯ್ಡು ಅವರು ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದರು. ಈ ವೇಳೆ ನಾಯ್ಡು ಭಾವುಕರಾಗಿ ಕಣ್ಣೀರು ಹಾಕಿದರು. ಇದರಿಂದ ದಿಗ್ಭ್ರಮೆಗೊಳಗಾದ ಶಾಸಕರು ನಾಯ್ಡು ಅವರನ್ನು ಸಮಾಧಾನಗೊಳಿಸಿದರು. ನಂತರ ಸದನಕ್ಕೆ ಬಂದ ನಾಯ್ಡು ಈ ಘೋಷಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಆಂಧ್ರಪ್ರದೇಶ:</strong> ಅಧಿಕಾರ ವಹಿಸಿಕೊಂಡ ನಂತರವಷ್ಟೆ ಮತ್ತೆ ಆಂಧ್ರಪ್ರದೇಶ ವಿಧಾನಸಭೆಗೆ ಕಾಲಿಡುವುದಾಗಿ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಶುಕ್ರವಾರ ಪ್ರತಿಜ್ಞೆ ಮಾಡಿದ್ದಾರೆ.</p>.<p class="title">ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸದಸ್ಯರು ತಮ್ಮ ಮೇಲೆ ಮಾಡುತ್ತಿರುವ ನಿರಂತರ ನಿಂದನೆಯಿಂದ ತಾವು ಮನನೊಂದಿರುವುದಾಗಿ ವಿರೋಧ ಪಕ್ಷದ ನಾಯಕರೂ ಆಗಿರುವ ನಾಯ್ಡು ಅವರು ಸದನದಲ್ಲಿ ಭಾವುಕವಾಗಿ ನುಡಿದರು.</p>.<p class="bodytext">‘ಕಳೆದ ಎರಡೂವರೆ ವರ್ಷಗಳಿಂದ ಅವರು ಮಾಡುತ್ತಿರುವ ಅವಮಾನಗಳನ್ನು ಸಹಿಸಿಕೊಂಡು ಸುಮ್ಮನಿದ್ದೆ. ಇಂದು ನನ್ನ ಪತ್ನಿಯನ್ನೂ ಗುರಿಯಾಗಿಸಿದ್ದಾರೆ. ನಾನು ಯಾವಾಗಲೂ ಗೌರವದಿಂದ ಮತ್ತು ಗೌರವಕ್ಕಾಗಿ ಬದುಕಿದ್ದೇನೆ. ಇನ್ನು ಇದನ್ನು ಸಹಿಸಲಾಗುವುದಿಲ್ಲ’ ಎಂದು ಹೇಳಿದರು.</p>.<p class="bodytext">ನಾಯ್ಡು ತಮ್ಮ ಮಾತು ಮುಂದುವರೆಸಿದ್ದರು. ಆದರೆ ಆಡಳಿತ ಪಕ್ಷದ ಸದಸ್ಯರು ಇದೊಂದು ನಾಟಕ ಎಂದು ಕೂಗಾಡಿದರು. ಪರಿಸ್ಥಿತಿ ಶಾಂತಗೊಳಿಸಲು ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಅವರು ನಾಯ್ಡು ಅವರ ಮೈಕ್ ಅನ್ನು ಆರಿಸಿದರು.</p>.<p class="bodytext">ಸದನದಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದ ಕಿರು ಚರ್ಚೆಯ ವೇಳೆ ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಚಂದ್ರಬಾಬು ನಾಯ್ಡು ತಮ್ಮ ಹತಾಶೆಯನ್ನು ಮಾತುಗಳಲ್ಲಿ ಹೊರಹಾಕಿದರು.</p>.<p>ಬಳಿಕ ತಮ್ಮ ಕೊಠಡಿಗೆ ತೆರಳಿದ ನಾಯ್ಡು ಅವರು ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದರು. ಈ ವೇಳೆ ನಾಯ್ಡು ಭಾವುಕರಾಗಿ ಕಣ್ಣೀರು ಹಾಕಿದರು. ಇದರಿಂದ ದಿಗ್ಭ್ರಮೆಗೊಳಗಾದ ಶಾಸಕರು ನಾಯ್ಡು ಅವರನ್ನು ಸಮಾಧಾನಗೊಳಿಸಿದರು. ನಂತರ ಸದನಕ್ಕೆ ಬಂದ ನಾಯ್ಡು ಈ ಘೋಷಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>