ತಿರುಪತಿ: ತೆಲಂಗಾಣದ ಭಕ್ತರೊಬ್ಬರು ಚಿನ್ನದ ಜರಿ ಇರುವುದು ಸೇರಿ ಎರಡು ವಿಶಿಷ್ಟ ಸೀರೆಗಳನ್ನು ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ಮತ್ತು ತಿರುಚನೂರು ಪದ್ಮಾವತಿ ದೇಗುಲಕ್ಕೆ ಕಾಣಿಕೆಯಾಗಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಪೊಟ್ಟಣದಲ್ಲಿ ಮಡಚಿಡಬಹುದಾದ ಈ ಸೀರೆಗಳನ್ನು ನಲ್ಲ ವಿಜಯ್ ಅವರು ಆಂಧ್ರಪ್ರದೇಶದ ಮುಖ್ಯಕಾರ್ಯದರ್ಶಿ ಕೆ.ಎಸ್.ಜವಾಹರ್ ರೆಡ್ಡಿ ಮೂಲಕ ದೇಗುಲದ ಆಡಳಿತ ಮಂಡಳಿಗೆ (ಟಿಟಿಡಿ) ಹಸ್ತಾಂತರಿಸಿದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಂದು ಸೀರೆಯ ಬೆಲೆ ₹45,000 ಆಗಿದ್ದರೆ, ಅಮ್ಮನವರಿಗೆ ನೀಡಿರುವ ಸೀರೆಯ ಜರಿಯಲ್ಲಿ 5 ಗ್ರಾಂ ಚಿನ್ನ ಇದೆ ಎಂದು ಅವರು ತಿಳಿಸಿದ್ದಾರೆ.