<p><strong>ಹೈದರಾಬಾದ್</strong>: ತೆಲಂಗಾಣದ ‘ಕಾಳೇಶ್ವರಂ ನೀರಾವರಿ ಯೋಜನೆ’ಯಲ್ಲಿ ತೆಲಂಗಾಣದ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ಭಾರಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಯಾಶಂಕರ ಭೂಪಾಲಪಲ್ಲಿ ಜಿಲ್ಲೆಯಲ್ಲಿ ನಡೆದಿದೆ.</p><p>ಭೂಪಾಲಪಲ್ಲಿ ಜಿಲ್ಲೆಯ ನಾಗವೆಲ್ಲಿ ರಾಜಲಿಂಗಮೂರ್ತಿ ಕೊಲೆಯಾದವರು.</p><p>ಫೆಬ್ರುವರಿ 19 ರಂದು ರಾತ್ರಿ ಜಯಾಶಂಕರ ಭೂಪಾಲಪಲ್ಲಿ ಜಿಲ್ಲೆಯಲ್ಲಿ ಗ್ರಾಮವೊಂದಕ್ಕೆ ಬೈಕ್ನಲ್ಲಿ ತೆರಳುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಹರಿತವಾದ ಆಯುಧಗಳಿಂದ ಹತ್ಯೆ ಮಾಡಿದ್ದರು.</p><p>ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದರೆ, ಹಂತಕರ ಬಂಧನ ಇನ್ನೂ ಆಗಿಲ್ಲ.</p><p>ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ನಾಯಕರು ಬಿಆರ್ಎಸ್ ಮೇಲೆ ವಾಗ್ದಾಳಿ ನಡೆಸಿವೆ. ಈ ಕೊಲೆಯ ಹಿಂದೆ ಮಾಜಿ ಶಾಸಕ ಬಿಆರ್ಎಸ್ನ ಗಂದ್ರಾ ವೆಂಕಟರಮಣ ರೆಡ್ಡಿ ಸೇರಿದಂತೆ ಅನೇಕ ಬಿಆರ್ಎಸ್ ನಾಯಕರಿದ್ದಾರೆ ಎಂದು ತೆಲಂಗಾಣ ಸಚಿವ ಕೋಮಿಟಿರೆಡ್ಡಿ ವೆಂಕಟರೆಡ್ಡಿ ಪತ್ರಿಕಾಗೋಷ್ಟಿಯಲ್ಲಿ ಬಹಿರಂಗವಾಗಿ ಆರೋಪ ಮಾಡಿದ್ದಾರೆ.</p><p>ತೆಲಂಗಾಣದ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಮೇಲೆ ಭಾರಿ ಭ್ರಷ್ಟಾಚಾರದ ಆರೋಪ ಮಾಡಿದ್ದರಿಂದಲೇ ಅವರ ಹತ್ಯೆಯಾಗಿದೆ ಎಂದು ರಾಜಲಿಂಗಮೂರ್ತಿ ಕುಟುಂಬದವರು ಆರೋಪಿಸಿದ್ದಾರೆ.</p><p>ಕಾಳೇಶ್ವರಂ ನೀರಾವರಿ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ನಾಗವೆಲ್ಲಿ ರಾಜಲಿಂಗಮೂರ್ತಿ ಜಯಾಶಂಕರ ಭೂಪಾಲಪಲ್ಲಿ ಜಿಲ್ಲಾಧಿಕಾರಿಗೆ ದೂರು ಹಾಗೂ ಹೈಕೋರ್ಟ್ಗೆ ಅರ್ಜಿ ದಾಖಲಿಸಿದ್ದರು.</p>.ಸದ್ದಿಲ್ಲದೇ ಮದುವೆಯಾದರೇ ರಾಕ್ಸ್ಟಾರ್ ಖ್ಯಾತಿಯ ಬಾಲಿವುಡ್ ನಟಿ ನರ್ಗಿಸ್ ಫಕ್ರಿ?.ಬಾತ್ರೂಂನಲ್ಲಿ ಆಲ್ಕೋಹಾಲ್ ಹೀರುತ್ತಾ ಎದೆಹಾಲು ತೆಗೆದ ನಟಿ ರಾಧಿಕಾ ಆಪ್ಟೆ: ಟೀಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ತೆಲಂಗಾಣದ ‘ಕಾಳೇಶ್ವರಂ ನೀರಾವರಿ ಯೋಜನೆ’ಯಲ್ಲಿ ತೆಲಂಗಾಣದ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ಭಾರಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಯಾಶಂಕರ ಭೂಪಾಲಪಲ್ಲಿ ಜಿಲ್ಲೆಯಲ್ಲಿ ನಡೆದಿದೆ.</p><p>ಭೂಪಾಲಪಲ್ಲಿ ಜಿಲ್ಲೆಯ ನಾಗವೆಲ್ಲಿ ರಾಜಲಿಂಗಮೂರ್ತಿ ಕೊಲೆಯಾದವರು.</p><p>ಫೆಬ್ರುವರಿ 19 ರಂದು ರಾತ್ರಿ ಜಯಾಶಂಕರ ಭೂಪಾಲಪಲ್ಲಿ ಜಿಲ್ಲೆಯಲ್ಲಿ ಗ್ರಾಮವೊಂದಕ್ಕೆ ಬೈಕ್ನಲ್ಲಿ ತೆರಳುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಹರಿತವಾದ ಆಯುಧಗಳಿಂದ ಹತ್ಯೆ ಮಾಡಿದ್ದರು.</p><p>ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದರೆ, ಹಂತಕರ ಬಂಧನ ಇನ್ನೂ ಆಗಿಲ್ಲ.</p><p>ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ನಾಯಕರು ಬಿಆರ್ಎಸ್ ಮೇಲೆ ವಾಗ್ದಾಳಿ ನಡೆಸಿವೆ. ಈ ಕೊಲೆಯ ಹಿಂದೆ ಮಾಜಿ ಶಾಸಕ ಬಿಆರ್ಎಸ್ನ ಗಂದ್ರಾ ವೆಂಕಟರಮಣ ರೆಡ್ಡಿ ಸೇರಿದಂತೆ ಅನೇಕ ಬಿಆರ್ಎಸ್ ನಾಯಕರಿದ್ದಾರೆ ಎಂದು ತೆಲಂಗಾಣ ಸಚಿವ ಕೋಮಿಟಿರೆಡ್ಡಿ ವೆಂಕಟರೆಡ್ಡಿ ಪತ್ರಿಕಾಗೋಷ್ಟಿಯಲ್ಲಿ ಬಹಿರಂಗವಾಗಿ ಆರೋಪ ಮಾಡಿದ್ದಾರೆ.</p><p>ತೆಲಂಗಾಣದ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಮೇಲೆ ಭಾರಿ ಭ್ರಷ್ಟಾಚಾರದ ಆರೋಪ ಮಾಡಿದ್ದರಿಂದಲೇ ಅವರ ಹತ್ಯೆಯಾಗಿದೆ ಎಂದು ರಾಜಲಿಂಗಮೂರ್ತಿ ಕುಟುಂಬದವರು ಆರೋಪಿಸಿದ್ದಾರೆ.</p><p>ಕಾಳೇಶ್ವರಂ ನೀರಾವರಿ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ನಾಗವೆಲ್ಲಿ ರಾಜಲಿಂಗಮೂರ್ತಿ ಜಯಾಶಂಕರ ಭೂಪಾಲಪಲ್ಲಿ ಜಿಲ್ಲಾಧಿಕಾರಿಗೆ ದೂರು ಹಾಗೂ ಹೈಕೋರ್ಟ್ಗೆ ಅರ್ಜಿ ದಾಖಲಿಸಿದ್ದರು.</p>.ಸದ್ದಿಲ್ಲದೇ ಮದುವೆಯಾದರೇ ರಾಕ್ಸ್ಟಾರ್ ಖ್ಯಾತಿಯ ಬಾಲಿವುಡ್ ನಟಿ ನರ್ಗಿಸ್ ಫಕ್ರಿ?.ಬಾತ್ರೂಂನಲ್ಲಿ ಆಲ್ಕೋಹಾಲ್ ಹೀರುತ್ತಾ ಎದೆಹಾಲು ತೆಗೆದ ನಟಿ ರಾಧಿಕಾ ಆಪ್ಟೆ: ಟೀಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>