<p><strong>ಠಾಣೆ:</strong> ಮಹಾರಾಷ್ಟ್ರದ ಠಾಣೆಯಲ್ಲಿ ಸಹಜೀವನ ಸಂಗಾತಿಯ ಭೀಕರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ 56 ವರ್ಷದ ವ್ಯಕ್ತಿ ತಾನು ಎಚ್ಐವಿ-ಪಾಸಿಟಿವ್ ಎಂದು ಪೊಲೀಸರಿಗೆ ಹೇಳಿದ್ದಾನೆ. ಮೃತ 32 ವರ್ಷದ ಮಹಿಳೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರಲಿಲ್ಲ, ಆಕೆ ನನ್ನ ಮಗಳಿದ್ದಂತೆ ಎಂದು ಹೇಳಿದ್ದಾನೆ. </p>.<p>ತನ್ನ ಸಹಜೀವನ ಸಂಗಾತಿಯಾಗಿದ್ದ ಸರಸ್ವತಿ ವೈದ್ಯ ಅವರು ಜೂನ್ 3ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣದಲ್ಲಿ ಸಿಲುಕಿಕೊಳ್ಳುವ ಭಯದಿಂದ ಆಕೆಯ ದೇಹವನ್ನು ತಾನೇ ವಿಲೇವಾರಿ ಮಾಡಲು ಮುಂದಾಗಿದ್ದಾಗಿ ಅರೋಪಿ ಮನೋಜ್ ಸಾನೆ ತಿಳಿಸಿದ್ದಾನೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. </p><p>‘2008 ರಲ್ಲಿ ತನಗೆ ಎಚ್ಐವಿ ಇರುವುದು ಪತ್ತೆಯಾಗಿತ್ತು ಎಂದು ಸಾನೆ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.</p><p>‘ಸರಸ್ವತಿ ವೈದ್ಯ ನನ್ನ ಮೇಲೆ ಸದಾ ಅನುಮಾನಪಡುತ್ತಿದ್ದಳು. ತಡವಾಗಿ ಮನೆಗೆ ಬಂದಾಗೆಲ್ಲವೂ ನನ್ನನ್ನು ವಿಶ್ವಾಸದ್ರೋಹಿ ಎಂದು ನಿಂದಿಸುತ್ತಿದ್ದಳು. ಆಕೆ 10 ನೇ ತರಗತಿ ಪರೀಕ್ಷೆಗೆ ಕುಳಿತುಕೊಳ್ಳಲು ಚಿಂತಿಸಿದ್ದಳು. ನಾನೇ ಗಣಿತ ಪಾಠ ಮಾಡುತ್ತಿದ್ದೆ’ ಎಂದು ಮನೋಜ್ ಹೇಳಿದ್ದಾನೆ.</p>.<h3>ಇದನ್ನೂ ಓದಿ: <a href="https://www.prajavani.net/news/india-news/mumbai-man-kills-live-in-partner-chops-up-body-boils-in-cooker-in-thane-2320749">ಸಹಜೀವನ ಸಂಗಾತಿ ಕೊಂದು ತುಂಡು ತುಂಡು ಮಾಡಿ ನಾಯಿಗಳಿಗೆ ಹಾಕಿದ!</a></h3>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಠಾಣೆ:</strong> ಮಹಾರಾಷ್ಟ್ರದ ಠಾಣೆಯಲ್ಲಿ ಸಹಜೀವನ ಸಂಗಾತಿಯ ಭೀಕರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ 56 ವರ್ಷದ ವ್ಯಕ್ತಿ ತಾನು ಎಚ್ಐವಿ-ಪಾಸಿಟಿವ್ ಎಂದು ಪೊಲೀಸರಿಗೆ ಹೇಳಿದ್ದಾನೆ. ಮೃತ 32 ವರ್ಷದ ಮಹಿಳೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರಲಿಲ್ಲ, ಆಕೆ ನನ್ನ ಮಗಳಿದ್ದಂತೆ ಎಂದು ಹೇಳಿದ್ದಾನೆ. </p>.<p>ತನ್ನ ಸಹಜೀವನ ಸಂಗಾತಿಯಾಗಿದ್ದ ಸರಸ್ವತಿ ವೈದ್ಯ ಅವರು ಜೂನ್ 3ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣದಲ್ಲಿ ಸಿಲುಕಿಕೊಳ್ಳುವ ಭಯದಿಂದ ಆಕೆಯ ದೇಹವನ್ನು ತಾನೇ ವಿಲೇವಾರಿ ಮಾಡಲು ಮುಂದಾಗಿದ್ದಾಗಿ ಅರೋಪಿ ಮನೋಜ್ ಸಾನೆ ತಿಳಿಸಿದ್ದಾನೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. </p><p>‘2008 ರಲ್ಲಿ ತನಗೆ ಎಚ್ಐವಿ ಇರುವುದು ಪತ್ತೆಯಾಗಿತ್ತು ಎಂದು ಸಾನೆ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.</p><p>‘ಸರಸ್ವತಿ ವೈದ್ಯ ನನ್ನ ಮೇಲೆ ಸದಾ ಅನುಮಾನಪಡುತ್ತಿದ್ದಳು. ತಡವಾಗಿ ಮನೆಗೆ ಬಂದಾಗೆಲ್ಲವೂ ನನ್ನನ್ನು ವಿಶ್ವಾಸದ್ರೋಹಿ ಎಂದು ನಿಂದಿಸುತ್ತಿದ್ದಳು. ಆಕೆ 10 ನೇ ತರಗತಿ ಪರೀಕ್ಷೆಗೆ ಕುಳಿತುಕೊಳ್ಳಲು ಚಿಂತಿಸಿದ್ದಳು. ನಾನೇ ಗಣಿತ ಪಾಠ ಮಾಡುತ್ತಿದ್ದೆ’ ಎಂದು ಮನೋಜ್ ಹೇಳಿದ್ದಾನೆ.</p>.<h3>ಇದನ್ನೂ ಓದಿ: <a href="https://www.prajavani.net/news/india-news/mumbai-man-kills-live-in-partner-chops-up-body-boils-in-cooker-in-thane-2320749">ಸಹಜೀವನ ಸಂಗಾತಿ ಕೊಂದು ತುಂಡು ತುಂಡು ಮಾಡಿ ನಾಯಿಗಳಿಗೆ ಹಾಕಿದ!</a></h3>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>