ತನ್ನ ಸಹಜೀವನ ಸಂಗಾತಿಯಾಗಿದ್ದ ಸರಸ್ವತಿ ವೈದ್ಯ ಅವರು ಜೂನ್ 3ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣದಲ್ಲಿ ಸಿಲುಕಿಕೊಳ್ಳುವ ಭಯದಿಂದ ಆಕೆಯ ದೇಹವನ್ನು ತಾನೇ ವಿಲೇವಾರಿ ಮಾಡಲು ಮುಂದಾಗಿದ್ದಾಗಿ ಅರೋಪಿ ಮನೋಜ್ ಸಾನೆ ತಿಳಿಸಿದ್ದಾನೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
‘2008 ರಲ್ಲಿ ತನಗೆ ಎಚ್ಐವಿ ಇರುವುದು ಪತ್ತೆಯಾಗಿತ್ತು ಎಂದು ಸಾನೆ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಸರಸ್ವತಿ ವೈದ್ಯ ನನ್ನ ಮೇಲೆ ಸದಾ ಅನುಮಾನಪಡುತ್ತಿದ್ದಳು. ತಡವಾಗಿ ಮನೆಗೆ ಬಂದಾಗೆಲ್ಲವೂ ನನ್ನನ್ನು ವಿಶ್ವಾಸದ್ರೋಹಿ ಎಂದು ನಿಂದಿಸುತ್ತಿದ್ದಳು. ಆಕೆ 10 ನೇ ತರಗತಿ ಪರೀಕ್ಷೆಗೆ ಕುಳಿತುಕೊಳ್ಳಲು ಚಿಂತಿಸಿದ್ದಳು. ನಾನೇ ಗಣಿತ ಪಾಠ ಮಾಡುತ್ತಿದ್ದೆ’ ಎಂದು ಮನೋಜ್ ಹೇಳಿದ್ದಾನೆ.