<p class="title"><strong>ನವದೆಹಲಿ</strong>: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಚರಿತ್ರೆ ರಚಿಸಿದ್ದಾರೆ. ‘ಅಂಬೇಡ್ಕರ್: ಎ ಲೈಫ್’ ಎಂಬ ಈ ಪುಸ್ತಕವು ಅಕ್ಟೋಬರ್ 1ರಂದು ಬಿಡುಗಡೆ ಆಗಲಿದೆ ಎಂದು ಈ ಪುಸ್ತಕದ ಪ್ರಕಾಶಕರಾಗಿರುವ ಆಲೆಪ್ ಬುಕ್ ಕಂಪನಿ ತಿಳಿಸಿದೆ.</p>.<p class="bodytext">ಈ ಪುಸ್ತಕದಲ್ಲಿ ತರೂರ್ ಅವರು ಅಂಬೇಡ್ಕರ್ ಅವರ ಜೀವನದ ಒಳನೋಟಗಳನ್ನು ತೆರೆದಟ್ಟಿದ್ದಾರೆ. ಅಲ್ಲದೇ, ಜವಾಹರ್ಲಾಲ್ ನೆಹರೂ, ಮಹಾತ್ಮ ಗಾಂಧಿ ಸೇರಿ ತಮ್ಮ ಸಮಕಾಲೀನ ನಾಯಕರ ಜೊತೆ ಅಂಬೇಡ್ಕರ್ ಅವರು ಹೊಂದಿದ್ದ ಬಿನ್ನಾಭಿಪ್ರಾಗಳ ಕುರಿತೂ ಈ ಪುಸ್ತಕದಲ್ಲಿ ಮಾಹಿತಿ ನೀಡಲಾಗಿದೆ.</p>.<p class="bodytext">ಅಂದಿನ ಬಾಂಬೆ ಪ್ರಾಂತ್ಯದಲ್ಲಿ ಮಹಾರ್ ಸಮುದಾಯದಲ್ಲಿ ಅಂಬೇಡ್ಕರ್ ಅವರು 1891ರ ಏಪ್ರಿಲ್ 14ರಂದು ಜನಿಸಿದ್ದಾಗಿನಿಂದ 1956ರ ಡಿಸೆಂಬರ್ 6ರಂದು ಅವರು ದೆಹಲಿಯಲ್ಲಿ ನಿಧನರಾದವರೆಗೂ ಅವರ ಜೀವನದ ಪ್ರಮುಖ ಘಟ್ಟಗಳನ್ನು ತರೂರ್ ಅವರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.</p>.<p class="bodytext">ಸಾಮಾಜಿಕ ನಿಂದನೆಗೆ ಗುರಿಯಾಗಿದ್ದ ಸಮುದಾಯದಲ್ಲಿ ಜನಿಸಿದ್ದ ಅವರು ಅನುಭವಿಸಿದ ಹಲವಾರು ಅಪಮಾನಗಳು ಮತ್ತು ಅಡ್ಡಿ ಆತಂಕಗಳು ಮತ್ತು ಅವೆಲ್ಲವನ್ನು ಮೀರಲು ಅವರಿಗಿದ್ದ ದೃಢನಿಶ್ಚಯ, ಅಸ್ಪೃಶ್ಯತೆಯನ್ನು ಕಾನೂನುಬಾಹಿರಗೊಳಿಸಿಲು ಅವರು ನಡೆಸಿದ ಹೋರಾಟ, ದೂರದೃಷ್ಟಿಯುಳ್ಳ ಸಂವಿಧಾನವನ್ನು ದೇಶಕ್ಕೆ ನೀಡುವುದರಲ್ಲಿ ಅವರಿಗಿದ್ದ ಬದ್ಧತೆ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ ಎಂದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. </p>.<p class="bodytext">‘ಇನ್ನೂ ಜನಿಸದೇ ಇರುವ ಲಕ್ಷಾಂತರ ಜನರ ಜೀವನವನ್ನುಹಲವಾರು ಹೋರಾಟಗಳ ಮೂಲಕ ಅಂಬೇಡ್ಕರ್ ಅವರು ಬದಲಾಯಿಸಿದರು. ತಮ್ಮ ಬೌದ್ಧಿಕ ಶಕ್ತಿ ಮತ್ತು ಲೇಖನಿಯಿಂದ ಪ್ರಚೀನ ನಾಗರಿಕತೆ ಆಗಿದ್ದ ಭಾರತವನ್ನು ಆಧುನಿಕ ಯುಗಕ್ಕೆ ಕರೆದುಕೊಂಡು ಬಂದರು’ ಎಂದು ತರೂರ್ ಅಂಬೇಡ್ಕರ್ ಕುರಿತು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಚರಿತ್ರೆ ರಚಿಸಿದ್ದಾರೆ. ‘ಅಂಬೇಡ್ಕರ್: ಎ ಲೈಫ್’ ಎಂಬ ಈ ಪುಸ್ತಕವು ಅಕ್ಟೋಬರ್ 1ರಂದು ಬಿಡುಗಡೆ ಆಗಲಿದೆ ಎಂದು ಈ ಪುಸ್ತಕದ ಪ್ರಕಾಶಕರಾಗಿರುವ ಆಲೆಪ್ ಬುಕ್ ಕಂಪನಿ ತಿಳಿಸಿದೆ.</p>.<p class="bodytext">ಈ ಪುಸ್ತಕದಲ್ಲಿ ತರೂರ್ ಅವರು ಅಂಬೇಡ್ಕರ್ ಅವರ ಜೀವನದ ಒಳನೋಟಗಳನ್ನು ತೆರೆದಟ್ಟಿದ್ದಾರೆ. ಅಲ್ಲದೇ, ಜವಾಹರ್ಲಾಲ್ ನೆಹರೂ, ಮಹಾತ್ಮ ಗಾಂಧಿ ಸೇರಿ ತಮ್ಮ ಸಮಕಾಲೀನ ನಾಯಕರ ಜೊತೆ ಅಂಬೇಡ್ಕರ್ ಅವರು ಹೊಂದಿದ್ದ ಬಿನ್ನಾಭಿಪ್ರಾಗಳ ಕುರಿತೂ ಈ ಪುಸ್ತಕದಲ್ಲಿ ಮಾಹಿತಿ ನೀಡಲಾಗಿದೆ.</p>.<p class="bodytext">ಅಂದಿನ ಬಾಂಬೆ ಪ್ರಾಂತ್ಯದಲ್ಲಿ ಮಹಾರ್ ಸಮುದಾಯದಲ್ಲಿ ಅಂಬೇಡ್ಕರ್ ಅವರು 1891ರ ಏಪ್ರಿಲ್ 14ರಂದು ಜನಿಸಿದ್ದಾಗಿನಿಂದ 1956ರ ಡಿಸೆಂಬರ್ 6ರಂದು ಅವರು ದೆಹಲಿಯಲ್ಲಿ ನಿಧನರಾದವರೆಗೂ ಅವರ ಜೀವನದ ಪ್ರಮುಖ ಘಟ್ಟಗಳನ್ನು ತರೂರ್ ಅವರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.</p>.<p class="bodytext">ಸಾಮಾಜಿಕ ನಿಂದನೆಗೆ ಗುರಿಯಾಗಿದ್ದ ಸಮುದಾಯದಲ್ಲಿ ಜನಿಸಿದ್ದ ಅವರು ಅನುಭವಿಸಿದ ಹಲವಾರು ಅಪಮಾನಗಳು ಮತ್ತು ಅಡ್ಡಿ ಆತಂಕಗಳು ಮತ್ತು ಅವೆಲ್ಲವನ್ನು ಮೀರಲು ಅವರಿಗಿದ್ದ ದೃಢನಿಶ್ಚಯ, ಅಸ್ಪೃಶ್ಯತೆಯನ್ನು ಕಾನೂನುಬಾಹಿರಗೊಳಿಸಿಲು ಅವರು ನಡೆಸಿದ ಹೋರಾಟ, ದೂರದೃಷ್ಟಿಯುಳ್ಳ ಸಂವಿಧಾನವನ್ನು ದೇಶಕ್ಕೆ ನೀಡುವುದರಲ್ಲಿ ಅವರಿಗಿದ್ದ ಬದ್ಧತೆ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ ಎಂದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. </p>.<p class="bodytext">‘ಇನ್ನೂ ಜನಿಸದೇ ಇರುವ ಲಕ್ಷಾಂತರ ಜನರ ಜೀವನವನ್ನುಹಲವಾರು ಹೋರಾಟಗಳ ಮೂಲಕ ಅಂಬೇಡ್ಕರ್ ಅವರು ಬದಲಾಯಿಸಿದರು. ತಮ್ಮ ಬೌದ್ಧಿಕ ಶಕ್ತಿ ಮತ್ತು ಲೇಖನಿಯಿಂದ ಪ್ರಚೀನ ನಾಗರಿಕತೆ ಆಗಿದ್ದ ಭಾರತವನ್ನು ಆಧುನಿಕ ಯುಗಕ್ಕೆ ಕರೆದುಕೊಂಡು ಬಂದರು’ ಎಂದು ತರೂರ್ ಅಂಬೇಡ್ಕರ್ ಕುರಿತು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>