ಚೆನ್ನೈ (ಪಿಟಿಐ): ಇಲ್ಲಿನ ಹೊರವಲಯದ ಊರಪಕ್ಕಂ ಬಳಿ ಮೂವರು ಬಾಲಕರ ಮೇಲೆ ಉಪನಗರ ರೈಲು ಹರಿದಿದೆ.
ಮೂವರು ಬಾಲಕರು ಕರ್ನಾಟಕದವರಾಗಿದ್ದು, ಹಳಿ ದಾಟುವಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಬಾಲಕರು ಸಹೋದರರಾಗಿದ್ದು, ಅವರಿಗೆ ವಾಕ್ ಮತ್ತು ಶ್ರವಣ ದೋಷ ಇತ್ತು. ಇನ್ನೊಬ್ಬ ಬಾಲಕನಿಗೆ ಮಾತು ಬರುತ್ತಿರಲಿಲ್ಲ ಎಂದು ವಿವರಿಸಿದ್ದಾರೆ. ಬಾಲಕರ ಪೋಷಕರು ಚೆನ್ನೈನಲ್ಲಿ ದಿನಗೂಲಿ ಮಾಡುತ್ತಿದ್ದರು.