ಕೃಷ್ಣ ಅವರಿಗೆ ‘ಸಂಗೀತ ಕಲಾನಿಧಿ’ ಪ್ರಶಸ್ತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದವರನ್ನು ಪರೋಕ್ಷವಾಗಿ ಉಲ್ಲೇಖಿಸಿ, ‘ವಿವಾದದಲ್ಲಿ ಪೆರಿಯಾರ್ ಅವರನ್ನು ಎಳೆದು ತರುವುದು ಮತ್ತು ಸುಧಾರಣೆಗೆ ಶ್ರಮಿಸಿದ ನಾಯಕನನ್ನು ಟೀಕಿಸುವುದು ಸರಿಯಾದ ನಡೆ ಅಲ್ಲ. 75 ವರ್ಷಗಳ ಕಾಲ ಪೆರಿಯಾರ್ ಅವರು ಶಾಂತಿ ಮಾರ್ಗದಲ್ಲಿ ಮಾನವೀಯತೆ ಮತ್ತು ಮಹಿಳೆಯರ ಹಕ್ಕುಗಳ ಪರ ಹೋರಾಡಿದರು. ಪೆರಿಯಾರ್ ಅವರ ನಿಸ್ವಾರ್ಥ ಜೀವನ ಮತ್ತು ಚಿಂತನೆಗಳ ಬಗ್ಗೆ ಅರಿವಿರುವ ಯಾರೂ ಅವರತ್ತ ಕೆಸರು ಎರಚುವ ಪ್ರಯತ್ನ ಮಾಡುವುದಿಲ್ಲ’ ಎಂದು ಹೇಳಿದ್ದಾರೆ