<p><strong>ಇಡುಕ್ಕಿ (ಕೇರಳ):</strong> ಕೇರಳದ ಮುನ್ನಾರ್ನಲ್ಲಿ ಶನಿವಾರ ಪ್ರವಾಸಿಗರ ಕಾರಿನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು, ಪವಾಡ ಸದೃಶವಾಗಿ ಪಾರಾಗಿದ್ದಾರೆ.</p><p>ಮುನ್ನಾರ್–ದೇವಿಕುಳಂ ರಸ್ತೆಯ ಸಿಗ್ನಲ್ ಪಾಯಿಂಟ್ನಲ್ಲಿ ಘಟನೆ ಜರುಗಿದ್ದಾಗಿ ಅರಣ್ಯ ಇಲಾಖೆಯ ಮೂಲಗಳಿಂದ ಗೊತ್ತಾಗಿದೆ.</p>.ವಯನಾಡ್: ಚೂರಲ್ಮಲ ಸಮೀಪ ಕಾಡಾನೆ ದಾಳಿಯಲ್ಲಿ ವ್ಯಕ್ತಿ ಸಾವು .<p>ಆನೆಯು ಚಲಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿ, ಮಗುಚಿ ಹಾಕಿದೆ ಎಂದು ನಿವಾಸಿಗಳನ್ನು ಉಲ್ಲೇಖಿಸಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ. </p><p>ಸುದೈವಶಾತ್ ಚಾಲಕ ಸೇರಿ ನಾಲ್ವರು ಪ್ರವಾಸಿಗರು ಯಾವುದೇ ಗಾಯಗಳಿಲ್ಲದೆ ಪವಾಡಸದೃಶರಾಗಿ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆನೆಯನ್ನು ವನ್ಯಜೀವಿ ವಿಭಾಗದ ರಾಪಿಡ್ ರೆಸ್ಪಾನ್ಸ್ ಟೀಮ್ ಕಾಡಿಗೆ ಅಟ್ಟಿದೆ.</p><p>‘ನಾನು ಕಾರನ್ನು ಹಿಂದೆ ತಿರುಗಿಸಲು ಪ್ರಯತ್ನಿಸಿದೆ, ಆದರೆ ಕೂಡಲೇ ಓಡಿ ಬಂದ ಆನೆ ಕಾರಿನ ಮೇಲೆ ದಾಳಿ ಮಾಡಿತು’ ಎಂದು ಚಾಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.</p>.ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ಮುಂದೆ ಪುಂಡಾಟ; ₹25,000 ದಂಡ.<p>ಆನೆ ದಾಳಿಯಿಂದ ಭಯಭೀತರಾದ ಪ್ರವಾಸಿಗರು, ಹಾನಿಗೀಡಾದ ಕಾರಿನ ಬಳಿ ನಡುಗುತ್ತಾ ನಿಂತಿರುವ ದೃಶ್ಯಗನ್ನು ಟಿ.ವಿ ವಾಹಿನಿಗಳು ಪ್ರಸಾರ ಮಾಡಿವೆ. ಆನೆ ದಾಳಿಯಿಂದಾಗಿ ಒಂದು ಬದಿಯ ಡೋರ್ಗಳು ಹಾಗೂ ಮಿರರ್ಗಳು ಹಾನಿಗೀಡಾಗಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.</p><p>ಪ್ರವಾಸಿಗರು ಮುನ್ನಾರ್ನಿಂದ ತೇಕ್ಕಡಿಗೆ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿದೇಶಿ ಪ್ರವಾಸಿಗರು ಎನ್ನುವ ಮಾಹಿತಿ ಇದ್ದು, ಅದು ಖಚಿತವಾಗಿಲ್ಲ. ವಾಹನ ಹಾನಿಗೀಡಾಗಿದ್ದರೂ, ಅದೃಷ್ಠವಶಾತ್ ಪ್ರವಾಸಿಗರಿಗೆ ಗಾಯಗಳಾಗಿಲ್ಲ. ಆನೆಯನ್ನು ಕಾಡಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.</p> .ಕಾಡಾನೆ ದಾಳಿ: ವಲಸೆ ಕಾರ್ಮಿಕ ಮಹಿಳೆ ಬಲಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಡುಕ್ಕಿ (ಕೇರಳ):</strong> ಕೇರಳದ ಮುನ್ನಾರ್ನಲ್ಲಿ ಶನಿವಾರ ಪ್ರವಾಸಿಗರ ಕಾರಿನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು, ಪವಾಡ ಸದೃಶವಾಗಿ ಪಾರಾಗಿದ್ದಾರೆ.</p><p>ಮುನ್ನಾರ್–ದೇವಿಕುಳಂ ರಸ್ತೆಯ ಸಿಗ್ನಲ್ ಪಾಯಿಂಟ್ನಲ್ಲಿ ಘಟನೆ ಜರುಗಿದ್ದಾಗಿ ಅರಣ್ಯ ಇಲಾಖೆಯ ಮೂಲಗಳಿಂದ ಗೊತ್ತಾಗಿದೆ.</p>.ವಯನಾಡ್: ಚೂರಲ್ಮಲ ಸಮೀಪ ಕಾಡಾನೆ ದಾಳಿಯಲ್ಲಿ ವ್ಯಕ್ತಿ ಸಾವು .<p>ಆನೆಯು ಚಲಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿ, ಮಗುಚಿ ಹಾಕಿದೆ ಎಂದು ನಿವಾಸಿಗಳನ್ನು ಉಲ್ಲೇಖಿಸಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ. </p><p>ಸುದೈವಶಾತ್ ಚಾಲಕ ಸೇರಿ ನಾಲ್ವರು ಪ್ರವಾಸಿಗರು ಯಾವುದೇ ಗಾಯಗಳಿಲ್ಲದೆ ಪವಾಡಸದೃಶರಾಗಿ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆನೆಯನ್ನು ವನ್ಯಜೀವಿ ವಿಭಾಗದ ರಾಪಿಡ್ ರೆಸ್ಪಾನ್ಸ್ ಟೀಮ್ ಕಾಡಿಗೆ ಅಟ್ಟಿದೆ.</p><p>‘ನಾನು ಕಾರನ್ನು ಹಿಂದೆ ತಿರುಗಿಸಲು ಪ್ರಯತ್ನಿಸಿದೆ, ಆದರೆ ಕೂಡಲೇ ಓಡಿ ಬಂದ ಆನೆ ಕಾರಿನ ಮೇಲೆ ದಾಳಿ ಮಾಡಿತು’ ಎಂದು ಚಾಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.</p>.ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ಮುಂದೆ ಪುಂಡಾಟ; ₹25,000 ದಂಡ.<p>ಆನೆ ದಾಳಿಯಿಂದ ಭಯಭೀತರಾದ ಪ್ರವಾಸಿಗರು, ಹಾನಿಗೀಡಾದ ಕಾರಿನ ಬಳಿ ನಡುಗುತ್ತಾ ನಿಂತಿರುವ ದೃಶ್ಯಗನ್ನು ಟಿ.ವಿ ವಾಹಿನಿಗಳು ಪ್ರಸಾರ ಮಾಡಿವೆ. ಆನೆ ದಾಳಿಯಿಂದಾಗಿ ಒಂದು ಬದಿಯ ಡೋರ್ಗಳು ಹಾಗೂ ಮಿರರ್ಗಳು ಹಾನಿಗೀಡಾಗಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.</p><p>ಪ್ರವಾಸಿಗರು ಮುನ್ನಾರ್ನಿಂದ ತೇಕ್ಕಡಿಗೆ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿದೇಶಿ ಪ್ರವಾಸಿಗರು ಎನ್ನುವ ಮಾಹಿತಿ ಇದ್ದು, ಅದು ಖಚಿತವಾಗಿಲ್ಲ. ವಾಹನ ಹಾನಿಗೀಡಾಗಿದ್ದರೂ, ಅದೃಷ್ಠವಶಾತ್ ಪ್ರವಾಸಿಗರಿಗೆ ಗಾಯಗಳಾಗಿಲ್ಲ. ಆನೆಯನ್ನು ಕಾಡಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.</p> .ಕಾಡಾನೆ ದಾಳಿ: ವಲಸೆ ಕಾರ್ಮಿಕ ಮಹಿಳೆ ಬಲಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>