<p class="title"><strong>ನವದೆಹಲಿ:</strong> ಹಿಂಗಾರು ಹಂಗಾಮಿನಲ್ಲಿ ಕೇಂದ್ರದಿಂದ ಕುಚ್ಚಲಕ್ಕಿ ಖರೀದಿ ಕುರಿತು ಸರ್ಕಾರದ ಉತ್ತರದಿಂದ ತೃಪ್ತರಾಗದ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್ಎಸ್) ನಾಲ್ವರು ಸದಸ್ಯರು ರಾಜ್ಯಸಭೆಯಲ್ಲಿ ಶುಕ್ರವಾರ ಸಭಾತ್ಯಾಗ ಮಾಡಿದರು.</p>.<p class="bodytext">ಇದಕ್ಕೂ ಮುನ್ನ ಟಿಆರ್ಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಸೇರಿ ಕೃಷಿಕರ ಸಮಸ್ಯೆಗಳ ಬಗ್ಗೆ ಗಮನಸೆಳೆದರು. ಬಳಿಕ ಸಭಾಧ್ಯಕ್ಷ ಎಂ.ವೆಂಕಯ್ಯನಾಯ್ಡು ಅವರ ಕೋರಿಕೆಯಂತೆ ತಮ್ಮ ಸ್ಥಾನಕ್ಕೆ ಮರಳಿದ್ದರು.</p>.<p class="bodytext">ಬಳಿಕ ಪ್ರಶ್ನೋತ್ತರ ಅವಧಿಯಲ್ಲಿಯೂ ಈ ವಿಷಯ ಪ್ರತಿಧ್ವನಿಸಿತು. ತೆಲಂಗಾಣದಿಂದ ಎಲ್ಲ ರೀತಿಯ ಅಕ್ಕಿ ಖರೀದಿಸಲು ಕೇಂದ್ರ ಸಿದ್ಧವಿದೆಯೇ ಎಂದು ಟಿಆರ್ಎಸ್ ಸದಸ್ಯ ಕೆ.ಕೇಶವರಾವ್, ಸಚಿವ ಪೀಯೂಶ್ ಗೋಯಲ್ ಅವರಿಗೆ ಪ್ರಶ್ನಿಸಿದರು.</p>.<p class="bodytext">ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಯಲ್ ಅವರು, ‘ನಮ್ಮದು ಜವಾಬ್ದಾರಿಯುತವಾದ ಸರ್ಕಾರ. ಅಕ್ಕಿ ಖರೀದಿ ಪ್ರಮಾಣವನ್ನು ಕೇಂದ್ರ ಹೆಚ್ಚಿಸುತ್ತಿದೆ. ಅಕ್ಕಿ ಖರೀದಿ ಒಪ್ಪಂದದಂತೆ ಕ್ರಮಕೈಗೊಳ್ಳಲಾಗುವುದು’ ಎಂದರು.</p>.<p class="bodytext">ಈ ಸಂದರ್ಭದಲ್ಲಿ ನಿಖರ ಉತ್ತರ ನೀಡಲು ಸದಸ್ಯರು ಪಟ್ಟುಹಿಡಿದರು. ತೆಲಂಗಾಣ ಸರ್ಕಾರದ ಪತ್ರವೊಂದನ್ನು ಉಲ್ಲೇಖಿಸಿದ ಗೋಯಲ್ ಅವರು, ರಾಜ್ಯವು ಭವಿಷ್ಯದಲ್ಲಿ ಭಾರತ ಆಹಾರ ನಿಗಮಕ್ಕೆ ಕುಚ್ಚಲಕ್ಕಿ ಪೂರೈಕೆ ಮಾಡಲಾಗದು ಎಂದು ಹೇಳಿದರು.</p>.<p>ಸಚಿವರ ಉತ್ತರದಿಂದ ಸದಸ್ಯರು ತೃಪ್ತರಾಗಲಿಲ್ಲ. ಉಪಾಧ್ಯಕ್ಷ ಹರಿವಂಶ ಅವರು ಪೂರಕ ಪ್ರಶ್ನೆ ಕೇಳಲೂ ಅವಕಾಶ ನೀಡಲಿಲ್ಲ. ಈ ಹಂತದಲ್ಲಿ ಸರ್ಕಾರದ ನಿಲುವು ವಿರೋಧಿಸಿ ಟಿಆರ್ಎಸ್ ಸದಸ್ಯರು ಸಭಾತ್ಯಾಗ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ಹಿಂಗಾರು ಹಂಗಾಮಿನಲ್ಲಿ ಕೇಂದ್ರದಿಂದ ಕುಚ್ಚಲಕ್ಕಿ ಖರೀದಿ ಕುರಿತು ಸರ್ಕಾರದ ಉತ್ತರದಿಂದ ತೃಪ್ತರಾಗದ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್ಎಸ್) ನಾಲ್ವರು ಸದಸ್ಯರು ರಾಜ್ಯಸಭೆಯಲ್ಲಿ ಶುಕ್ರವಾರ ಸಭಾತ್ಯಾಗ ಮಾಡಿದರು.</p>.<p class="bodytext">ಇದಕ್ಕೂ ಮುನ್ನ ಟಿಆರ್ಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಸೇರಿ ಕೃಷಿಕರ ಸಮಸ್ಯೆಗಳ ಬಗ್ಗೆ ಗಮನಸೆಳೆದರು. ಬಳಿಕ ಸಭಾಧ್ಯಕ್ಷ ಎಂ.ವೆಂಕಯ್ಯನಾಯ್ಡು ಅವರ ಕೋರಿಕೆಯಂತೆ ತಮ್ಮ ಸ್ಥಾನಕ್ಕೆ ಮರಳಿದ್ದರು.</p>.<p class="bodytext">ಬಳಿಕ ಪ್ರಶ್ನೋತ್ತರ ಅವಧಿಯಲ್ಲಿಯೂ ಈ ವಿಷಯ ಪ್ರತಿಧ್ವನಿಸಿತು. ತೆಲಂಗಾಣದಿಂದ ಎಲ್ಲ ರೀತಿಯ ಅಕ್ಕಿ ಖರೀದಿಸಲು ಕೇಂದ್ರ ಸಿದ್ಧವಿದೆಯೇ ಎಂದು ಟಿಆರ್ಎಸ್ ಸದಸ್ಯ ಕೆ.ಕೇಶವರಾವ್, ಸಚಿವ ಪೀಯೂಶ್ ಗೋಯಲ್ ಅವರಿಗೆ ಪ್ರಶ್ನಿಸಿದರು.</p>.<p class="bodytext">ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಯಲ್ ಅವರು, ‘ನಮ್ಮದು ಜವಾಬ್ದಾರಿಯುತವಾದ ಸರ್ಕಾರ. ಅಕ್ಕಿ ಖರೀದಿ ಪ್ರಮಾಣವನ್ನು ಕೇಂದ್ರ ಹೆಚ್ಚಿಸುತ್ತಿದೆ. ಅಕ್ಕಿ ಖರೀದಿ ಒಪ್ಪಂದದಂತೆ ಕ್ರಮಕೈಗೊಳ್ಳಲಾಗುವುದು’ ಎಂದರು.</p>.<p class="bodytext">ಈ ಸಂದರ್ಭದಲ್ಲಿ ನಿಖರ ಉತ್ತರ ನೀಡಲು ಸದಸ್ಯರು ಪಟ್ಟುಹಿಡಿದರು. ತೆಲಂಗಾಣ ಸರ್ಕಾರದ ಪತ್ರವೊಂದನ್ನು ಉಲ್ಲೇಖಿಸಿದ ಗೋಯಲ್ ಅವರು, ರಾಜ್ಯವು ಭವಿಷ್ಯದಲ್ಲಿ ಭಾರತ ಆಹಾರ ನಿಗಮಕ್ಕೆ ಕುಚ್ಚಲಕ್ಕಿ ಪೂರೈಕೆ ಮಾಡಲಾಗದು ಎಂದು ಹೇಳಿದರು.</p>.<p>ಸಚಿವರ ಉತ್ತರದಿಂದ ಸದಸ್ಯರು ತೃಪ್ತರಾಗಲಿಲ್ಲ. ಉಪಾಧ್ಯಕ್ಷ ಹರಿವಂಶ ಅವರು ಪೂರಕ ಪ್ರಶ್ನೆ ಕೇಳಲೂ ಅವಕಾಶ ನೀಡಲಿಲ್ಲ. ಈ ಹಂತದಲ್ಲಿ ಸರ್ಕಾರದ ನಿಲುವು ವಿರೋಧಿಸಿ ಟಿಆರ್ಎಸ್ ಸದಸ್ಯರು ಸಭಾತ್ಯಾಗ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>