ಝಂಡೇವಾಲನ್ನಿಂದ ಬಸ್ ಹತ್ತಿದ್ದ ಪತ್ರಕರ್ತ ಮಂಗಳಂ ಚೌಕದಲ್ಲಿ ಇಳಿದಿದ್ದಾರೆ. ಬಳಿಕ ವಾಕಿಂಗ್ಗಾಗಿ ಪಾಂಡವ್ ನಗರದಲ್ಲಿರುವ ಸಂಜಯ್ ಕೆರೆ ಬಳಿ ಬಂದಿದ್ದಾರೆ. ಆ ಸಂದರ್ಭ ಮೂವರು ಯುವಕರು ಪತ್ರಕರ್ತನನ್ನು ಬೆದರಿಸಿ ಅವರಲ್ಲಿದ್ದ ವಸ್ತುಗಳನ್ನು ಕಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ಪತ್ರಕರ್ತ ವಿರೋಧ ವ್ಯಕ್ತಪಡಿಸಿದಾಗ ಪುಂಡರು ಚಾಕುವಿನಿಂದ ಹಲ್ಲೆ ನಡೆಸಿ ಅವರಲ್ಲಿದ್ದ ಅಮೂಲ್ಯ ವಸ್ತುಗಳನ್ನು ದೋಚಿದ್ದಾರೆ ಎಂದು ಪೊಲೀಸರು ವಿವರಿಸಿದರು.
ಈ ಘಟನೆಯಲ್ಲಿ ಪತ್ರಕರ್ತನ ಬೆನ್ನಿಗೆ ತೀವ್ರ ಗಾಯವಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದೂ ತಿಳಿಸಿದರು.
ಡಕಾಯಿತಿ, ಹಲ್ಲೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.