<p><strong>ತಿರುಪತಿ</strong>: ಭಗವಂತ ವೆಂಕಟೇಶ್ವರನಲ್ಲಿ ನಂಬಿಕೆ ಇಲ್ಲದಿದ್ದರೂ, ಸನಾತನ ಧರ್ಮವನ್ನು ಪಾಲಿಸದಿದ್ದರೂ ಸುಮಾರು 1,000 ಮಂದಿ ಹಿಂದೂಯೇತರರು ತಿರುಮಲ ತಿರುಪತಿ ದೇವಸ್ಥಾನಮ್ಸ್ನಲ್ಲಿ (ಟಿಟಿಡಿ) ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಖಾತೆ ಸಚಿವ ಬಂಡಿ ಸಂಜಯ್ ಕುಮಾರ್ ಶುಕ್ರವಾರ ಆರೋಪಿಸಿದ್ದಾರೆ.</p><p>ಹಿಂದೆಯೇ ಹಿಂದೂಯೇತರರನ್ನು ನೇಮಿಸಿಕೊಂಡಿದ್ದರೂ, ಬದಲಾವಣೆ ಮಾಡಿಲ್ಲವೇಕೆ ಎಂದು ಪ್ರಶ್ನಿಸಿರುವ ಸಂಜಯ್, 'ಟಿಟಿಡಿಯಲ್ಲಿ ಸಾಕಷ್ಟು ಆಂತರಿಕ ಸಮಸ್ಯೆಗಳು ಇರಬಹುದು. ಆದರೆ, ಈ (ಹಿಂದೂಯೇತರರ ನೇಮಕ) ವಿಚಾರದ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು' ಎಂದು ಒತ್ತಾಯಿಸಿದ್ದಾರೆ.</p><p>ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಹಿಂದೂಯೇತರರು ದೇವರ ಬಗ್ಗೆ ತಾವು ಹೊಂದಿರುವ ನಂಬಿಕೆಯನ್ನು ಘೋಷಿಸಬೇಕು. ಆದರೆ, ದೇವರದಲ್ಲಿ ನಂಬಿಕೆಯಿಲ್ಲದ ಸರಿಸುಮಾರು ಸಾವಿರ ಮಂದಿ ಹಿಂದೂಯೇತರ ಸಿಬ್ಬಂದಿ ಟಿಟಿಡಿ ಉದ್ಯೋಗದಲ್ಲಿ ಮುಂದುವರಿಯುತ್ತಿರುವುದು ಹೇಗೆ?' ಎಂದು ಕೇಳಿದ್ದಾರೆ.</p><p>ಟಿಟಿಡಿ ನೌಕರನಾಗಿದ್ದರೂ ನಿಯಮಿತವಾಗಿ ಚರ್ಚ್ಗೆ ಭೇಟಿ ನೀಡುತ್ತಿದ್ದ ಒಬ್ಬ ಕೆಲಸಗಾರರನ್ನು ಇತ್ತೀಚೆಗೆ ಅಮಾನತು ಮಾಡಿದ ವಿಚಾರವನ್ನು ಸಚಿವ ಇದೇ ವೇಳೆ ಸ್ಮರಿಸಿದ್ದಾರೆ.</p><p>'ಮಂಡಳಿಯಲ್ಲಿ ಎಷ್ಟು ಮಂದಿ ಹಿಂದೂಯೇತರರು ಕೆಲಸ ಮಾಡುತ್ತಿದ್ದಾರೆ ಹಾಗೂ ಹಿಂದೂ ಭಕ್ತರಲ್ಲಿ ಗಂಭೀರ ಕಳವಳಗಳಿದ್ದರೂ ಈವರೆಗೆ ವಿಚಾರಣೆಯಾಗಿಲ್ಲವೇಕೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು' ಎಂದು ಆಗ್ರಹಿಸಿದ್ದಾರೆ.</p>.ತಿರುಮಲ: ಲಡ್ಡು ಸ್ವೀಕರಿಸಲು ಕಿಯೋಸ್ಕ್ ಯಂತ್ರ ಪರಿಚಯಿಸಿದ ಟಿಟಿಡಿ.ಟಿಟಿಡಿ: ಎಐ ಆಧಾರಿತ ಕ್ಯಾಮೆರಾ ಅಳವಡಿಕೆಗೆ ಯೋಜನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುಪತಿ</strong>: ಭಗವಂತ ವೆಂಕಟೇಶ್ವರನಲ್ಲಿ ನಂಬಿಕೆ ಇಲ್ಲದಿದ್ದರೂ, ಸನಾತನ ಧರ್ಮವನ್ನು ಪಾಲಿಸದಿದ್ದರೂ ಸುಮಾರು 1,000 ಮಂದಿ ಹಿಂದೂಯೇತರರು ತಿರುಮಲ ತಿರುಪತಿ ದೇವಸ್ಥಾನಮ್ಸ್ನಲ್ಲಿ (ಟಿಟಿಡಿ) ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಖಾತೆ ಸಚಿವ ಬಂಡಿ ಸಂಜಯ್ ಕುಮಾರ್ ಶುಕ್ರವಾರ ಆರೋಪಿಸಿದ್ದಾರೆ.</p><p>ಹಿಂದೆಯೇ ಹಿಂದೂಯೇತರರನ್ನು ನೇಮಿಸಿಕೊಂಡಿದ್ದರೂ, ಬದಲಾವಣೆ ಮಾಡಿಲ್ಲವೇಕೆ ಎಂದು ಪ್ರಶ್ನಿಸಿರುವ ಸಂಜಯ್, 'ಟಿಟಿಡಿಯಲ್ಲಿ ಸಾಕಷ್ಟು ಆಂತರಿಕ ಸಮಸ್ಯೆಗಳು ಇರಬಹುದು. ಆದರೆ, ಈ (ಹಿಂದೂಯೇತರರ ನೇಮಕ) ವಿಚಾರದ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು' ಎಂದು ಒತ್ತಾಯಿಸಿದ್ದಾರೆ.</p><p>ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಹಿಂದೂಯೇತರರು ದೇವರ ಬಗ್ಗೆ ತಾವು ಹೊಂದಿರುವ ನಂಬಿಕೆಯನ್ನು ಘೋಷಿಸಬೇಕು. ಆದರೆ, ದೇವರದಲ್ಲಿ ನಂಬಿಕೆಯಿಲ್ಲದ ಸರಿಸುಮಾರು ಸಾವಿರ ಮಂದಿ ಹಿಂದೂಯೇತರ ಸಿಬ್ಬಂದಿ ಟಿಟಿಡಿ ಉದ್ಯೋಗದಲ್ಲಿ ಮುಂದುವರಿಯುತ್ತಿರುವುದು ಹೇಗೆ?' ಎಂದು ಕೇಳಿದ್ದಾರೆ.</p><p>ಟಿಟಿಡಿ ನೌಕರನಾಗಿದ್ದರೂ ನಿಯಮಿತವಾಗಿ ಚರ್ಚ್ಗೆ ಭೇಟಿ ನೀಡುತ್ತಿದ್ದ ಒಬ್ಬ ಕೆಲಸಗಾರರನ್ನು ಇತ್ತೀಚೆಗೆ ಅಮಾನತು ಮಾಡಿದ ವಿಚಾರವನ್ನು ಸಚಿವ ಇದೇ ವೇಳೆ ಸ್ಮರಿಸಿದ್ದಾರೆ.</p><p>'ಮಂಡಳಿಯಲ್ಲಿ ಎಷ್ಟು ಮಂದಿ ಹಿಂದೂಯೇತರರು ಕೆಲಸ ಮಾಡುತ್ತಿದ್ದಾರೆ ಹಾಗೂ ಹಿಂದೂ ಭಕ್ತರಲ್ಲಿ ಗಂಭೀರ ಕಳವಳಗಳಿದ್ದರೂ ಈವರೆಗೆ ವಿಚಾರಣೆಯಾಗಿಲ್ಲವೇಕೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು' ಎಂದು ಆಗ್ರಹಿಸಿದ್ದಾರೆ.</p>.ತಿರುಮಲ: ಲಡ್ಡು ಸ್ವೀಕರಿಸಲು ಕಿಯೋಸ್ಕ್ ಯಂತ್ರ ಪರಿಚಯಿಸಿದ ಟಿಟಿಡಿ.ಟಿಟಿಡಿ: ಎಐ ಆಧಾರಿತ ಕ್ಯಾಮೆರಾ ಅಳವಡಿಕೆಗೆ ಯೋಜನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>