<p><strong>ಲಖನೌ:</strong> ಆಪರೇಷನ್ ಸಿಂಧೂರ ಮೂಲಕ 'ವಿಫಲ ರಾಷ್ಟ್ರ' ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳನ್ನು ಭಾರತೀಯ ಸೇನೆಯು ನಾಶ ಮಾಡಿರುವುದು ಹೆಮ್ಮೆಯ ಸಂಗತಿ. ವೈರಿಗಳಿಗೆ ಇದು ಸ್ಪಷ್ಟ ಸಂದೇಶವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದರು. </p><p>ಬುಧವಾರ ಲಖನೌನಲ್ಲಿ ನಡೆದ 'ಭಾರತ ಶೌರ್ಯ ತಿರಂಗ ಯಾತ್ರೆ'ಗೆ ಚಾಲನೆ ನೀಡಿ ಮಾತನಾಡಿದರು. </p><p>ಉತ್ತರಪ್ರದೇಶದಾದ್ಯಂತ ಬಿಜೆಪಿಯು 'ಭಾರತ ಶೌರ್ಯ ತಿರಂಗ ಯಾತ್ರೆ' ಹಮ್ಮಿಕೊಂಡಿದೆ. </p><p>ಲಖನೌನಲ್ಲಿ ಯಾತ್ರೆಗೆ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಯೋಗಿ, ಯಾತ್ರೆಯಲ್ಲಿ ಬಾರಿ ಪ್ರಮಾಣದ ಜನರು ಸೇರಿರುವುದು, ಭಾರತೀಯ ಸೇನೆಯ ಮೇಲಿನ ಜನರ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು. </p><p>ಕಳೆದ 75 ವರ್ಷಗಳಿಂದಲೂ ಪಾಕಿಸ್ತಾನವು ಉಗ್ರರನ್ನು ಪೋಷಿಸಿಕೊಂಡು ಬಂದಿರುವ 'ವಿಫಲ ರಾಷ್ಟ್ರವಾಗಿದೆ'. ಭಯೋತ್ಪಾದಕರ ಅಂತ್ಯಕ್ರಿಯೆಗೆ ಪಾಕಿಸ್ತಾನದ ನಾಯಕರು ಹಾಗೂ ಸೇನಾಧಿಕಾರಿಗಳು ಭಾಗವಹಿಸಿದ್ದನ್ನು ಜಗತ್ತು ನೋಡಿದೆ ಎಂದರು. </p><p>ಭಾರತದ ವಿರುದ್ಧ ನಿಂತರೆ, ಅವರ ಸಾವಿಗೆ ಕಣ್ಣೀರು ಹಾಕಲು ಕೂಡ ಯಾರೂ ಉಳಿಯುವುದಿಲ್ಲ ಎನ್ನುವುದನ್ನು ಭಾರತೀಯ ಸೇನೆ ಸಾಬೀತು ಪಡಿಸಿದೆ ಎಂದರು. </p><p>ಮೋದಿಯವರ 'ದೇಶ ಮೊದಲು' ಎನ್ನುವ ನೀತಿಯು ಭಾರತೀಯರಿಗೆ ದಾರಿ ದೀಪವಾಗಿದೆ. 140 ಕೋಟಿ ಭಾರತೀಯರು, ತಮ್ಮ ಸ್ವ ಹಿತಾಸಕ್ತಿಗಿಂತ ದೇಶದ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ . ಭಾರತವನ್ನು ಜಗತ್ತಿನ ಯಾವ ಶಕ್ತಿಯೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು. </p><p>ಬಿಜೆಪಿ ನಾಯಕರಾದ ಭೂಪೇಂದ್ರ ಚೌಧರಿ, ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್, ಹಣಕಾಸು ಸಚಿವ ಸುರೇಶ್ ಖನ್ನಾ ಸೇರಿದಂತೆ ಸಚಿವರು ಹಾಗು ಶಾಸಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಆಪರೇಷನ್ ಸಿಂಧೂರ ಮೂಲಕ 'ವಿಫಲ ರಾಷ್ಟ್ರ' ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳನ್ನು ಭಾರತೀಯ ಸೇನೆಯು ನಾಶ ಮಾಡಿರುವುದು ಹೆಮ್ಮೆಯ ಸಂಗತಿ. ವೈರಿಗಳಿಗೆ ಇದು ಸ್ಪಷ್ಟ ಸಂದೇಶವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದರು. </p><p>ಬುಧವಾರ ಲಖನೌನಲ್ಲಿ ನಡೆದ 'ಭಾರತ ಶೌರ್ಯ ತಿರಂಗ ಯಾತ್ರೆ'ಗೆ ಚಾಲನೆ ನೀಡಿ ಮಾತನಾಡಿದರು. </p><p>ಉತ್ತರಪ್ರದೇಶದಾದ್ಯಂತ ಬಿಜೆಪಿಯು 'ಭಾರತ ಶೌರ್ಯ ತಿರಂಗ ಯಾತ್ರೆ' ಹಮ್ಮಿಕೊಂಡಿದೆ. </p><p>ಲಖನೌನಲ್ಲಿ ಯಾತ್ರೆಗೆ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಯೋಗಿ, ಯಾತ್ರೆಯಲ್ಲಿ ಬಾರಿ ಪ್ರಮಾಣದ ಜನರು ಸೇರಿರುವುದು, ಭಾರತೀಯ ಸೇನೆಯ ಮೇಲಿನ ಜನರ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು. </p><p>ಕಳೆದ 75 ವರ್ಷಗಳಿಂದಲೂ ಪಾಕಿಸ್ತಾನವು ಉಗ್ರರನ್ನು ಪೋಷಿಸಿಕೊಂಡು ಬಂದಿರುವ 'ವಿಫಲ ರಾಷ್ಟ್ರವಾಗಿದೆ'. ಭಯೋತ್ಪಾದಕರ ಅಂತ್ಯಕ್ರಿಯೆಗೆ ಪಾಕಿಸ್ತಾನದ ನಾಯಕರು ಹಾಗೂ ಸೇನಾಧಿಕಾರಿಗಳು ಭಾಗವಹಿಸಿದ್ದನ್ನು ಜಗತ್ತು ನೋಡಿದೆ ಎಂದರು. </p><p>ಭಾರತದ ವಿರುದ್ಧ ನಿಂತರೆ, ಅವರ ಸಾವಿಗೆ ಕಣ್ಣೀರು ಹಾಕಲು ಕೂಡ ಯಾರೂ ಉಳಿಯುವುದಿಲ್ಲ ಎನ್ನುವುದನ್ನು ಭಾರತೀಯ ಸೇನೆ ಸಾಬೀತು ಪಡಿಸಿದೆ ಎಂದರು. </p><p>ಮೋದಿಯವರ 'ದೇಶ ಮೊದಲು' ಎನ್ನುವ ನೀತಿಯು ಭಾರತೀಯರಿಗೆ ದಾರಿ ದೀಪವಾಗಿದೆ. 140 ಕೋಟಿ ಭಾರತೀಯರು, ತಮ್ಮ ಸ್ವ ಹಿತಾಸಕ್ತಿಗಿಂತ ದೇಶದ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ . ಭಾರತವನ್ನು ಜಗತ್ತಿನ ಯಾವ ಶಕ್ತಿಯೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು. </p><p>ಬಿಜೆಪಿ ನಾಯಕರಾದ ಭೂಪೇಂದ್ರ ಚೌಧರಿ, ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್, ಹಣಕಾಸು ಸಚಿವ ಸುರೇಶ್ ಖನ್ನಾ ಸೇರಿದಂತೆ ಸಚಿವರು ಹಾಗು ಶಾಸಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>