<p><strong>ಲಖನೌ</strong>: ಹಾಸ್ಯ ಕಲಾವಿದರು ಚಿಂತನೆಗಳನ್ನು ಪ್ರಚೋದಿಸುವುದು ಹಾಗೂ ಗೌರವ ಕಾಪಾಡಿಕೊಳ್ಳುವುದರ ನಡುವೆ ಸಮತೋಲವನ್ನು ಕಾಪಾಡಿಕೊಳ್ಳಬೇಕು. ಜನರನ್ನು ಅಪಹಾಸ್ಯ ಮಾಡದೆ ಹೃದಯ ಗೆಲ್ಲುವುದೇ ನಿಜವಾದ ಕಲಾವಿದನ ಲಕ್ಷಣ ಎಂದು ಉತ್ತರಪ್ರದೇಶದ ಸಚಿವ ಅಸಿಮ್ ಅರುಣ್ ಹೇಳಿದ್ದಾರೆ.</p><p>ಸಮಯ್ ರೈನಾ ಅವರು ನಡೆಸಿಕೊಡುವ 'ಇಂಡಿಯಾ ಗಾಟ್ ಲೆಟೆಂಟ್' ರಿಯಾಲಿಟಿ ಶೋನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ಒಟ್ಟುಗೂಡಿಸುವಂತೆ ಕೋರಿ ಯುಟ್ಯೂಬರ್ ರಣವೀರ್ ಇಲಾಹಾಬಾದಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.</p><p>ಈ ಸಂಬಂಧ ಫೇಸ್ಬುಕ್ ಪುಟದಲ್ಲಿ ಅಸಿಮ್ ಅರುಣ್ ಪೋಸ್ಟ್ ಹಂಚಿಕೊಂಡಿದ್ದು, ಹಾಸ್ಯವು ಯಾರೊಬ್ಬರ ವೈಯಕ್ತಿಕ ಸಂದರ್ಭಗಳು, ವೈಯಕ್ತಿಕ ವಿಚಾರಗಳು, ಅವರು ಎದುರಿಸುವ ಸವಾಲುಗಳನ್ನು ಅಪಹಾಸ್ಯ ಮಾಡುವುದು ಸರಿಯಲ್ಲ. ನಿಜವಾದ ಸವಾಲು ಎಂದರೆ ಗೌರವಪೂರಕವಾಗಿ ಚಿಂತನೆಗಳನ್ನು ಬಿತ್ತರಿಸುವುದಾಗಿದೆ ಎಂದು ತಿಳಿಸಿದ್ದಾರೆ.</p>.ಅಮೆರಿಕ ಸೇನೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿಷೇಧ ಹೇರಿದ ಡೊನಾಲ್ಡ್ ಟ್ರಂಪ್.ಪ್ರಯಾಣಿಕರ ಮೂಗಿಗೆ ತುಪ್ಪ ಸವರಿದ ಬಿಎಂಆರ್ಸಿಎಲ್: ಆಕ್ರೋಶ. <p>‘ನಾವು ಚಿಕ್ಕವರಿದ್ದಾಗ, ಬೋಳು ತಲೆ, ಬೊಜ್ಜು ಮತ್ತು ಅಂತಹದ್ದೇ ವಿಷಯಗಳ ಬಗ್ಗೆ ಹಾಸ್ಯ ಮಾಡುವುದು ತುಂಬಾ ಸಾಮಾನ್ಯವಾಗಿತ್ತು. ಅದೃಷ್ಟವಶಾತ್, ಇಂದು ಸಮಾಜವು ಹೆಚ್ಚು ಸಂವೇದನಾಶೀಲವಾಗಿದೆ.ಅಂತಹ ಅಪಹಾಸ್ಯವು ಫ್ಯಾಷನ್ನಿಂದ ಮಾಯವಾಗಿದೆ. ದುಃಖಕರವೆಂದರೆ, ಕೆಲವರು ಮತ್ತೆ ಸಂವೇದನಾಶೀಲರಾಗಿಲ್ಲ ಎಂದು ಅಸಿಮ್ ಹೇಳಿದ್ದಾರೆ.</p><p>‘ಅಂಗವೈಕಲ್ಯ, ಬಡತನ, ಬಟ್ಟೆ, ಭಾಷೆ ಸೇರಿದಂತೆ ಯಾವುದೇ ವಿಷಯಗಳ ಮೇಲೂ ಅಪಹಾಸ್ಯ ಮಾಡುವುದು ಕಲಾವಿದನ ಕಲೆಯ ಮೂಲತತ್ವವನ್ನೇ ಪ್ರಶ್ನಿಸುತ್ತದೆ . ಹಾಸ್ಯವು ಯಾರೊಬ್ಬರ ವೈಯಕ್ತಿಕ ವಿಚಾರಗಳನ್ನು ಅಪಹಾಸ್ಯ ಮಾಡುವುದರ ಮೇಲೆ ಅವಲಂಬಿತವಾಗಬೇಕೇ? ನೋವುಂಟುಮಾಡುವ ವಿಷಯಗಳನ್ನು ಹೇಳುವ ಮೂಲಕ ಮಾತ್ರ ಹಾಸ್ಯವನ್ನು ಮಾಡಲು ಸಾಧ್ಯವೇ? ಹಾಸ್ಯನಟರಿಗೆ ಇರುವ ಸವಾಲು ಎಂದು ಅಸಿಮ್ ತಿಳಿಸಿದ್ದಾರೆ.</p>.ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 119 ಜನರು ಇಂದು ಭಾರತಕ್ಕೆ?.ಭಾರತದ ಮೇಲೂ ನಾವು ಸುಂಕ ಹೇರುತ್ತೇವೆ: ಡೊನಾಲ್ಡ್ ಟ್ರಂಪ್. <p>ಪೋಷಕರು ಮತ್ತು ಲೈಂಗಿಕತೆಯ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಸಿಲುಕಿರುವ ಇನ್ಫ್ಲುಯೆನ್ಸರ್, ಯೂಟ್ಯೂಬರ್ ರಣವೀರ್ ಇಲಾಹಾಬಾದಿಯಾ ವಿರುದ್ಧ ಗುವಾಹಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p><p>ಆನ್ಲೈನ್ ಶೋನಲ್ಲಿ ಅಶ್ಲೀಲತೆ ಪ್ರಚಾರಕ್ಕೆ ಸಂಬಂಧಿಸಿದಂತೆ ನಗರದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ರಣವೀರ್ ಇಲಾಹಾಬಾದಿಯಾ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.</p><p>31 ವರ್ಷದ ಪಾಡ್ಕಾಸ್ಟರ್ ರಣವೀರ್ ಅಲ್ಲದೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಮಯ್ ರೈನಾ, ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್ ಮತ್ತು ಅಪೂರ್ವ ಮಖಿಜಾ ವಿರುದ್ಧ ಪ್ರಕರಣ ದಾಖಲಾಗಿದೆ</p>.ಡಿಕೆಶಿ ವಿರುದ್ಧ ತಂತ್ರ: ಸಿಎಂ, ಕೆಪಿಸಿಸಿ ಅಧ್ಯಕ್ಷಗಾದಿ ಮೇಲೆ ದಲಿತ ಸಚಿವರ ಕಣ್ಣು.ಮುಂಬೈ ವಿಮಾನ ನಿಲ್ದಾಣದಲ್ಲಿ ₹6 ಕೋಟಿ ಮೌಲ್ಯದ ಚಿನ್ನ ಜಪ್ತಿ:ಇರಾನ್ ಪ್ರಜೆಗಳ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಹಾಸ್ಯ ಕಲಾವಿದರು ಚಿಂತನೆಗಳನ್ನು ಪ್ರಚೋದಿಸುವುದು ಹಾಗೂ ಗೌರವ ಕಾಪಾಡಿಕೊಳ್ಳುವುದರ ನಡುವೆ ಸಮತೋಲವನ್ನು ಕಾಪಾಡಿಕೊಳ್ಳಬೇಕು. ಜನರನ್ನು ಅಪಹಾಸ್ಯ ಮಾಡದೆ ಹೃದಯ ಗೆಲ್ಲುವುದೇ ನಿಜವಾದ ಕಲಾವಿದನ ಲಕ್ಷಣ ಎಂದು ಉತ್ತರಪ್ರದೇಶದ ಸಚಿವ ಅಸಿಮ್ ಅರುಣ್ ಹೇಳಿದ್ದಾರೆ.</p><p>ಸಮಯ್ ರೈನಾ ಅವರು ನಡೆಸಿಕೊಡುವ 'ಇಂಡಿಯಾ ಗಾಟ್ ಲೆಟೆಂಟ್' ರಿಯಾಲಿಟಿ ಶೋನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ಒಟ್ಟುಗೂಡಿಸುವಂತೆ ಕೋರಿ ಯುಟ್ಯೂಬರ್ ರಣವೀರ್ ಇಲಾಹಾಬಾದಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.</p><p>ಈ ಸಂಬಂಧ ಫೇಸ್ಬುಕ್ ಪುಟದಲ್ಲಿ ಅಸಿಮ್ ಅರುಣ್ ಪೋಸ್ಟ್ ಹಂಚಿಕೊಂಡಿದ್ದು, ಹಾಸ್ಯವು ಯಾರೊಬ್ಬರ ವೈಯಕ್ತಿಕ ಸಂದರ್ಭಗಳು, ವೈಯಕ್ತಿಕ ವಿಚಾರಗಳು, ಅವರು ಎದುರಿಸುವ ಸವಾಲುಗಳನ್ನು ಅಪಹಾಸ್ಯ ಮಾಡುವುದು ಸರಿಯಲ್ಲ. ನಿಜವಾದ ಸವಾಲು ಎಂದರೆ ಗೌರವಪೂರಕವಾಗಿ ಚಿಂತನೆಗಳನ್ನು ಬಿತ್ತರಿಸುವುದಾಗಿದೆ ಎಂದು ತಿಳಿಸಿದ್ದಾರೆ.</p>.ಅಮೆರಿಕ ಸೇನೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿಷೇಧ ಹೇರಿದ ಡೊನಾಲ್ಡ್ ಟ್ರಂಪ್.ಪ್ರಯಾಣಿಕರ ಮೂಗಿಗೆ ತುಪ್ಪ ಸವರಿದ ಬಿಎಂಆರ್ಸಿಎಲ್: ಆಕ್ರೋಶ. <p>‘ನಾವು ಚಿಕ್ಕವರಿದ್ದಾಗ, ಬೋಳು ತಲೆ, ಬೊಜ್ಜು ಮತ್ತು ಅಂತಹದ್ದೇ ವಿಷಯಗಳ ಬಗ್ಗೆ ಹಾಸ್ಯ ಮಾಡುವುದು ತುಂಬಾ ಸಾಮಾನ್ಯವಾಗಿತ್ತು. ಅದೃಷ್ಟವಶಾತ್, ಇಂದು ಸಮಾಜವು ಹೆಚ್ಚು ಸಂವೇದನಾಶೀಲವಾಗಿದೆ.ಅಂತಹ ಅಪಹಾಸ್ಯವು ಫ್ಯಾಷನ್ನಿಂದ ಮಾಯವಾಗಿದೆ. ದುಃಖಕರವೆಂದರೆ, ಕೆಲವರು ಮತ್ತೆ ಸಂವೇದನಾಶೀಲರಾಗಿಲ್ಲ ಎಂದು ಅಸಿಮ್ ಹೇಳಿದ್ದಾರೆ.</p><p>‘ಅಂಗವೈಕಲ್ಯ, ಬಡತನ, ಬಟ್ಟೆ, ಭಾಷೆ ಸೇರಿದಂತೆ ಯಾವುದೇ ವಿಷಯಗಳ ಮೇಲೂ ಅಪಹಾಸ್ಯ ಮಾಡುವುದು ಕಲಾವಿದನ ಕಲೆಯ ಮೂಲತತ್ವವನ್ನೇ ಪ್ರಶ್ನಿಸುತ್ತದೆ . ಹಾಸ್ಯವು ಯಾರೊಬ್ಬರ ವೈಯಕ್ತಿಕ ವಿಚಾರಗಳನ್ನು ಅಪಹಾಸ್ಯ ಮಾಡುವುದರ ಮೇಲೆ ಅವಲಂಬಿತವಾಗಬೇಕೇ? ನೋವುಂಟುಮಾಡುವ ವಿಷಯಗಳನ್ನು ಹೇಳುವ ಮೂಲಕ ಮಾತ್ರ ಹಾಸ್ಯವನ್ನು ಮಾಡಲು ಸಾಧ್ಯವೇ? ಹಾಸ್ಯನಟರಿಗೆ ಇರುವ ಸವಾಲು ಎಂದು ಅಸಿಮ್ ತಿಳಿಸಿದ್ದಾರೆ.</p>.ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 119 ಜನರು ಇಂದು ಭಾರತಕ್ಕೆ?.ಭಾರತದ ಮೇಲೂ ನಾವು ಸುಂಕ ಹೇರುತ್ತೇವೆ: ಡೊನಾಲ್ಡ್ ಟ್ರಂಪ್. <p>ಪೋಷಕರು ಮತ್ತು ಲೈಂಗಿಕತೆಯ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಸಿಲುಕಿರುವ ಇನ್ಫ್ಲುಯೆನ್ಸರ್, ಯೂಟ್ಯೂಬರ್ ರಣವೀರ್ ಇಲಾಹಾಬಾದಿಯಾ ವಿರುದ್ಧ ಗುವಾಹಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p><p>ಆನ್ಲೈನ್ ಶೋನಲ್ಲಿ ಅಶ್ಲೀಲತೆ ಪ್ರಚಾರಕ್ಕೆ ಸಂಬಂಧಿಸಿದಂತೆ ನಗರದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ರಣವೀರ್ ಇಲಾಹಾಬಾದಿಯಾ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.</p><p>31 ವರ್ಷದ ಪಾಡ್ಕಾಸ್ಟರ್ ರಣವೀರ್ ಅಲ್ಲದೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಮಯ್ ರೈನಾ, ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್ ಮತ್ತು ಅಪೂರ್ವ ಮಖಿಜಾ ವಿರುದ್ಧ ಪ್ರಕರಣ ದಾಖಲಾಗಿದೆ</p>.ಡಿಕೆಶಿ ವಿರುದ್ಧ ತಂತ್ರ: ಸಿಎಂ, ಕೆಪಿಸಿಸಿ ಅಧ್ಯಕ್ಷಗಾದಿ ಮೇಲೆ ದಲಿತ ಸಚಿವರ ಕಣ್ಣು.ಮುಂಬೈ ವಿಮಾನ ನಿಲ್ದಾಣದಲ್ಲಿ ₹6 ಕೋಟಿ ಮೌಲ್ಯದ ಚಿನ್ನ ಜಪ್ತಿ:ಇರಾನ್ ಪ್ರಜೆಗಳ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>