<p><strong>ಮಹಾರಾಜ್ಗಂಜ್ (ಉತ್ತರ ಪ್ರದೇಶ): </strong>ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಇಲ್ಲಿನ ಇಂಡೋ-ನೇಪಾಳ ಗಡಿ ಪ್ರದೇಶದಲ್ಲಿ ಇಬ್ಬರು ಚೀನಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.</p>.<p>ಈ ಕಾರ್ಯದಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದ ಟಿಬೆಟಿಯನ್ ನಿರಾಶ್ರಿತನನ್ನು ಸಹ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. </p>.<p>ಚೀನಾದ ಯಾಂಗ್ ಮೆಂಗ್ (37) ಹಾಗೂ ಗು ಬಾವೊಕಿಯಾಂಗ್ (35) ಬಂಧಿತರು. ಇವರು ಕಳೆದ ರಾತ್ರಿ ಸೋನೌಲಿ ಇಂಡೋ-ನೇಪಾಳ ಗಡಿ ಪ್ರದೇಶದಲ್ಲಿ ಸುತ್ತಾಡುತ್ತಿದ್ದಾಗ, ಅವರನ್ನು ಸಶಸ್ತ್ರ ಸೀಮಾ ಬಾಲ (ಎಸ್ಎಸ್ಬಿ) ತಪಾಸಣೆಗಾಗಿ ತಡೆದಿದೆ ಎಂದು ಮಹಾರಾಜ್ಗಂಜ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅತೀಶ್ ಕುಮಾರ್ ಸಿಂಗ್ ಹೇಳಿದ್ದಾರೆ. </p>.<p>ಇವರು ಚೀನಾದ ಪಾಸ್ಪೋರ್ಟ್ ಹೊಂದಿದ್ದರು. ಆದರೆ ಭಾರತದ ವೀಸಾ ಹಾಗೂ ಯಾವುದೇ ಮಾನ್ಯ ದಾಖಲೆಗಳನ್ನು ಹೊಂದಿರಲಿಲ್ಲ. ಹಾಗಾಗಿ ಸೋನೌಲಿ ಪ್ರದೇಶದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.</p>.<p>ಇಬ್ಬರು ಚೀನಾ ಪ್ರಜೆಗಳು ನೇಪಾಳದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ನೆರವು ನೀಡಿದ್ದ ಟಿಬೆಟಿಯನ್ ನಿರಾಶ್ರಿತ ಲೋಬ್ಸಾಂಗ್ ಜಮ್ಯಾಂಗ್ (44) ಎಂಬಾತನನ್ನೂ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.</p>.<p>ಟಿಬೆಟಿಯನ್ ನಿರಾಶ್ರಿತ ಈ ಇಬ್ಬರೂ ಚೀನಾದ ನಾಗರಿಕರಿಗೆ ಭಾರತೀಯ ನಕಲಿ ಆಧಾರ್ ಕಾರ್ಡ್ಗಳನ್ನು ತಯಾರಿಸಿದ್ದ ಮತ್ತು ಕಠ್ಮಂಡುವಿನಿಂದ ಗೋರಖ್ಪುರಕ್ಕೆ ಕಳುಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ. ಆದರೆ ಅವರು ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಮೂವರನ್ನು ನೇಪಾಳದಿಂದ ಭಾರತಕ್ಕೆ ಪ್ರವೇಶಿಸುವಾಗ ಎಸ್ಎಸ್ಬಿ ಯೋಧರು ಬಂಧಿಸಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.</p>.<p>ಬಂಧಿತ ಇಬ್ಬರು ಚೀನಾ ಪ್ರಜೆಗಳಿಂದ ಯಾವುದೇ ಮಾನ್ಯ ದಾಖಲೆ ಲಭ್ಯವಾಗಿಲ್ಲ. ಆದರೆ ಟಿಬೆಟಿಯನ್ ನಿರಾಶ್ರಿತ ಭಾರತೀಯ ಆಧಾರ್ ಕಾರ್ಡ್ ಮತ್ತು ಭಾರತೀಯ ವಿಳಾಸವನ್ನು ಹೊಂದಿರುವ ಪ್ಯಾನ್ ಕಾರ್ಡ್ ಹೊಂದಿದ್ದಾನೆ ಎಂದು ಅವರು ಹೇಳಿದ್ದಾರೆ.</p>.<p>ಅಕ್ರಮ ಪ್ರವೇಶದ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ವಿಚಾರಣೆ ಮುಂದುವರಿದಿದೆ. ಇಬ್ಬರೂ ಚೀನಾ ಪ್ರಜೆಗಳ ವಿರುದ್ಧ ವಿದೇಶಿ ಕಾಯ್ದೆಯ ಸೆಕ್ಷನ್ 14 ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಟಿಬೆಟಿಯನ್ ವ್ಯಕ್ತಿಯ ವಿರುದ್ಧವೂ ಸಂಬಂಧಿತ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅತೀಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.</p>.ಭಾರತಕ್ಕೆ ಅಕ್ರಮ ಪ್ರವೇಶ ಮಾಡುವುದು ಹೇಗೆ? ವಿಡಿಯೊ ಹಂಚಿಕೊಂಡ ಬಾಂಗ್ಲಾ ಯುಟ್ಯೂಬರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾರಾಜ್ಗಂಜ್ (ಉತ್ತರ ಪ್ರದೇಶ): </strong>ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಇಲ್ಲಿನ ಇಂಡೋ-ನೇಪಾಳ ಗಡಿ ಪ್ರದೇಶದಲ್ಲಿ ಇಬ್ಬರು ಚೀನಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.</p>.<p>ಈ ಕಾರ್ಯದಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದ ಟಿಬೆಟಿಯನ್ ನಿರಾಶ್ರಿತನನ್ನು ಸಹ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. </p>.<p>ಚೀನಾದ ಯಾಂಗ್ ಮೆಂಗ್ (37) ಹಾಗೂ ಗು ಬಾವೊಕಿಯಾಂಗ್ (35) ಬಂಧಿತರು. ಇವರು ಕಳೆದ ರಾತ್ರಿ ಸೋನೌಲಿ ಇಂಡೋ-ನೇಪಾಳ ಗಡಿ ಪ್ರದೇಶದಲ್ಲಿ ಸುತ್ತಾಡುತ್ತಿದ್ದಾಗ, ಅವರನ್ನು ಸಶಸ್ತ್ರ ಸೀಮಾ ಬಾಲ (ಎಸ್ಎಸ್ಬಿ) ತಪಾಸಣೆಗಾಗಿ ತಡೆದಿದೆ ಎಂದು ಮಹಾರಾಜ್ಗಂಜ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅತೀಶ್ ಕುಮಾರ್ ಸಿಂಗ್ ಹೇಳಿದ್ದಾರೆ. </p>.<p>ಇವರು ಚೀನಾದ ಪಾಸ್ಪೋರ್ಟ್ ಹೊಂದಿದ್ದರು. ಆದರೆ ಭಾರತದ ವೀಸಾ ಹಾಗೂ ಯಾವುದೇ ಮಾನ್ಯ ದಾಖಲೆಗಳನ್ನು ಹೊಂದಿರಲಿಲ್ಲ. ಹಾಗಾಗಿ ಸೋನೌಲಿ ಪ್ರದೇಶದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.</p>.<p>ಇಬ್ಬರು ಚೀನಾ ಪ್ರಜೆಗಳು ನೇಪಾಳದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ನೆರವು ನೀಡಿದ್ದ ಟಿಬೆಟಿಯನ್ ನಿರಾಶ್ರಿತ ಲೋಬ್ಸಾಂಗ್ ಜಮ್ಯಾಂಗ್ (44) ಎಂಬಾತನನ್ನೂ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.</p>.<p>ಟಿಬೆಟಿಯನ್ ನಿರಾಶ್ರಿತ ಈ ಇಬ್ಬರೂ ಚೀನಾದ ನಾಗರಿಕರಿಗೆ ಭಾರತೀಯ ನಕಲಿ ಆಧಾರ್ ಕಾರ್ಡ್ಗಳನ್ನು ತಯಾರಿಸಿದ್ದ ಮತ್ತು ಕಠ್ಮಂಡುವಿನಿಂದ ಗೋರಖ್ಪುರಕ್ಕೆ ಕಳುಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ. ಆದರೆ ಅವರು ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಮೂವರನ್ನು ನೇಪಾಳದಿಂದ ಭಾರತಕ್ಕೆ ಪ್ರವೇಶಿಸುವಾಗ ಎಸ್ಎಸ್ಬಿ ಯೋಧರು ಬಂಧಿಸಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.</p>.<p>ಬಂಧಿತ ಇಬ್ಬರು ಚೀನಾ ಪ್ರಜೆಗಳಿಂದ ಯಾವುದೇ ಮಾನ್ಯ ದಾಖಲೆ ಲಭ್ಯವಾಗಿಲ್ಲ. ಆದರೆ ಟಿಬೆಟಿಯನ್ ನಿರಾಶ್ರಿತ ಭಾರತೀಯ ಆಧಾರ್ ಕಾರ್ಡ್ ಮತ್ತು ಭಾರತೀಯ ವಿಳಾಸವನ್ನು ಹೊಂದಿರುವ ಪ್ಯಾನ್ ಕಾರ್ಡ್ ಹೊಂದಿದ್ದಾನೆ ಎಂದು ಅವರು ಹೇಳಿದ್ದಾರೆ.</p>.<p>ಅಕ್ರಮ ಪ್ರವೇಶದ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ವಿಚಾರಣೆ ಮುಂದುವರಿದಿದೆ. ಇಬ್ಬರೂ ಚೀನಾ ಪ್ರಜೆಗಳ ವಿರುದ್ಧ ವಿದೇಶಿ ಕಾಯ್ದೆಯ ಸೆಕ್ಷನ್ 14 ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಟಿಬೆಟಿಯನ್ ವ್ಯಕ್ತಿಯ ವಿರುದ್ಧವೂ ಸಂಬಂಧಿತ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅತೀಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.</p>.ಭಾರತಕ್ಕೆ ಅಕ್ರಮ ಪ್ರವೇಶ ಮಾಡುವುದು ಹೇಗೆ? ವಿಡಿಯೊ ಹಂಚಿಕೊಂಡ ಬಾಂಗ್ಲಾ ಯುಟ್ಯೂಬರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>