2005ರಲ್ಲಿ ಬೆಂಗಳೂರಿನ ಐಐಎಸ್ಸಿ ಆವರಣದಲ್ಲಿ ನಡೆದಿದ್ದ ದಾಳಿಯ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ 37 ವರ್ಷ ವಯಸ್ಸಿನ ಮಹಮ್ಮದ್ ರಾಜುರ್ ರೆಹಮಾನ್ ಅಲಿಯಾಸ್ ಉಮೇಶ ಉದ್ವಿಗ್ನತೆ, ಮಧುಮೇಹ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ ಎಂದು ದೂರಿ ಮೇಲ್ಮನವಿ ಸಲ್ಲಿಸಲಾಗಿದೆ.