‘ಹಣ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ. ದಯಮಾಡಿ ಹಟ ಹಿಡಿಯಬೇಡಿ ಎಂದು ಮನವೊಲಿಸಲು ಮುಂದಾದರೂ ಅವರು ಕೇಳಲಿಲ್ಲ. ಬಿಡುವುದೇ ಇಲ್ಲ ಎಂದು ಪಟ್ಟು ಹಿಡಿದು ಕುಳಿತರು. ಮೊಸಳೆಯನ್ನು ನಮ್ಮ ಸುಪರ್ದಿಗೆ ನೀಡದಿದ್ದರೆ ಪೊಲೀಸರನ್ನು ಕರೆಸಿ ಎಲ್ಲರ ಮೇಲೂ ಕಾನೂನು ಕ್ರಮಕೈಗೊಳ್ಳುವುದಾಗಿ ಬೆದರಿಸಿದ ಬಳಿಕ ಮೊಸಳೆಯನ್ನು ನೀಡಿದರು. ನಂತರ ಅದನ್ನು ನದಿಗೆ ಬಿಡಲಾಯಿತು’ ಎಂದೂ ಅವರು ಮಾಹಿತಿ ನೀಡಿದ್ದಾರೆ.